ಅನುಮಾನಾಸ್ಪದವಾದ ವರ್ತನೆಯಿಂದ ಅವಮಾನವಾಗಬಹುದು
ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ಕಟ್ಟಬೇಕಾಗಬಹುದು
ತಂದೆ ತಾಯಿಯ ಜೊತೆ ವಾದ-ವಿವಾದಗಳು ನಡೆಯಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಕಾಡಬಹುದು
- ಆಯಾಸವಾಗಬಹುದು ಗಮನಹರಿಸಿ
- ಅನಗತ್ಯವಾದ ಪ್ರಯಾಣ ಅನಿವಾರ್ಯವಾಗಿರುತ್ತದೆ
- ವಿದ್ಯಾರ್ಥಿಗಳು ಬೇಸರದಿಂದ ಓದಿದರೆ ಪ್ರಯೋಜನವಿಲ್ಲ
- ತಂದೆ ತಾಯಿಯ ಜೊತೆ ವಾದ-ವಿವಾದಗಳು ನಡೆಯಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
- ಅಘೋರ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
- ನಿಮ್ಮ ಮಹಾತ್ವಾಕಾಂಕ್ಷೆಗಳು ಈಡೇರಲಿದೆ
- ಕೈ ಹಿಡಿದ ಕೆಲಸಗಳು ಪೂರ್ಣವಾಗಬಹುದು
- ಮಧ್ಯಾಹ್ನದ ನಂತರ ಗ್ರಹಗತಿ ಸರಿಯಿರುವುದಿಲ್ಲ
- ಅನಗತ್ಯವಾದ ವಿಚಾರಗಳಲ್ಲಿ ಭಾಗಿಗಳಾಗುತ್ತೀರಿ
- ವಿದ್ಯಾರ್ಥಿಗಳು ಸಂಬಂಧ ಪಟ್ಟಿಲ್ಲದ ಚಟುವಟಿಕೆಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತೀರಿ
- ಸರಸ್ವತಿ ದೇವಿಯ ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನವ ವಿವಾಹಿತರಲ್ಲಿ, ದಾಂಪತ್ಯದ ವಿಚಾರಕ್ಕೆ, ವೈಯಕ್ತಿಕ ವಿಚಾರಕ್ಕೆ ಬಿರುಕು ಉಂಟಾಗಬಹುದು
- ಹಿರಿಯರ ಮಾರ್ಗದರ್ಶನವಿದ್ದರೂ ಫಲಿಸುವುದಿಲ್ಲ
- ವ್ಯಾವಹಾರಿಕವಾಗಿ ಯೋಜನೆಗಳನ್ನು ಬದಲಾಯಿಸಬೇಕಾಗುತ್ತದೆ
- ಸಮಾಜ ಸೇವೆಗೆ ಮನಸ್ಸು ಬರಬಹುದು
- ಸ್ಥಿರಾಸ್ತಿಯ ವಿಚಾರಕ್ಕೆ ಕಲಹ ಉಂಟಾಗಬಹುದು
- ಮನೆಯವರ ಯೋಗಕ್ಷೇಮದಲ್ಲಿ ವ್ಯತ್ಯಾಸವಾಗಲಿದೆ
- ಲಕ್ಷ್ಮೀ ನಾರಾಯಣರನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದಲ್ಲಿ ಸಮಸ್ಯೆಯಿದೆ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
- ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಒಳ್ಳೆಯ ಫಲವಿಲ್ಲ
- ಯಾರಿಗೂ ಕೂಡ ಸಾಲವನ್ನು ಕೊಡಬೇಡಿ, ಕೇಳಬೇಡಿ
- ಮನೆಯಲ್ಲಿಯೂ ಕೂಡ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ಬೇಸರ ತರಬಹುದು
- ಹಣದ ವಿಚಾರಕ್ಕೆ ಜಗಳವಾಗಬಹುದು
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ನಷ್ಟವನ್ನು ಮಾಡಿಕೊಳ್ಳುತ್ತೀರಿ
- ಸಮಯೋಚಿತವಾಗಿ ಮಾತನಾಡಬೇಕು
- ಸಮಸ್ಯೆಗಳನ್ನು ಕ್ಷಣದಲ್ಲೇ ಬಗೆಹರಿಸಿಕೊಳ್ಳಿ
- ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ಕಟ್ಟಬೇಕಾಗಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
- ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬಹುದು
- ಚಂಡಿಕಾ ಪಾರಾಯಣವನ್ನು ಮಾಡಿಸಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿರಿಯರ, ಆತ್ಮೀಯರ ಸಲಹೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡಲಿದೆ
- ಹೊಸ ಜನರ ಸಂಪರ್ಕ ಸಿಗಲಿದೆ
- ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಶುಭವಿದೆ
- ಹಣದ ವಿಚಾರದಲ್ಲಿ ಗೊಂದಲವಾಗಬಹುದು
- ಗಂಡ ಹೆಂಡತಿ ಮಧ್ಯೆ ಪರಸ್ಪರ, ಅನುಮಾನ, ಜಗಳವಾಗಬಹುದು
- ನಿವೃತ್ತ ನೌಕರರಿಗೆ ಶುಭ, ಸೌಖ್ಯಯಿಲ್ಲದೆ ಇರುವ ದಿನ
- ಶಿವಾರಾಧನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸದಾಗಿ ಪರಿಚಯವಾದವರಿಂದ ಮೋಸವಾಗಬಹುದು
- ಮನೆಯಲ್ಲಿ ಧಾರ್ಮಿಕ ಕರ್ಮಾಚರಣೆಯ ಬಗ್ಗೆ ಚಿಂತನೆ ನಡೆಸುತ್ತೀರಿ
- ವೃತ್ತಿಯಲ್ಲಿ ಕಷ್ಟದ ವಾತಾವರಣವಿರಲಿದೆ
- ಪೂರ್ವಿಕರ ವೃತ್ತಿಯಿಂದ ಹಣವನ್ನು ಗಳಿಸಬಹುದು
- ದೊಡ್ಡ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ
- ಯೋಚಿಸದೆ ಯಾವ ಕೆಲಸವನ್ನು ಮಾಡಬೇಡಿ
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಮೀಷನ್ ಏಜೆಂಟ್ ಗಳಿಗೆ ಹಣ ನಷ್ಟವಾಗಬಹುದು
- ಅನುಮಾನಾಸ್ಪದವಾದ ವರ್ತನೆಯಿಂದ ಅವಮಾನವಾಗಬಹುದು
- ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
- ಸಣ್ಣ ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಡಿ
- ಕೆಟ್ಟ ಜನರ ಸಹವಾಸ, ವ್ಯವಹಾರವನ್ನು ಇಟ್ಟುಕೊಳ್ಳಬೇಡಿ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು
- ಕುಬೇರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನೆಯಲ್ಲಿ ನಿಮ್ಮಿಂದ ಅಪೇಕ್ಷೆಗಳು, ನಿರೀಕ್ಷೆಗಳು ಹೆಚ್ಚಾಗಬಹುದು
- ಕೆಲ ಸಮಯ ಹೆದರಿಕೆಯಾಗಬಹುದು
- ಇಂದು ಹೊಸ ಕೆಲಸದ ಪ್ರಾರಂಭ ಬೇಡ
- ಪ್ರೇಮಿಗಳಿಗೆ ತೊಂದರೆಯಾಗಬಹುದು
- ವಾಹನ ಚಾಲನೆ, ಪ್ರಯಾಣ ಅಪಾಯಕಾರಿಯಾಗಬಹುದು ಎಚ್ಚರಿಕೆವಹಿಸಿ
- ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
- ವನದುರ್ಗಾ ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯಕ್ಕೆ ಸಂಬಂಧಪಟ್ಟಂತೆ ಉತ್ತಮವಾದ ಸಮಯ
- ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
- ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಚಾಲನೆಯನ್ನು ನೀಡುತ್ತೀರಿ
- ಅತಿಯಾದ ಶಿಸ್ತನ್ನು ತೋರಿಸುವುದರಿಂದ ತೊಂದರೆಗೆ ಕಾರಣರಾಗುತ್ತೀರಿ
- ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
- ತಾಯಿ,ಹೆಂಡತಿಗೆ ಅಥವಾ ಹಿರಿಯರಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಯಾವ ವಿಷಯದಲ್ಲಿ ದುರ್ಬಲರಾಗಿದ್ದೀರಿ ಆ ವಿಷಯದಲ್ಲಿ ರಾಜಿಮಾಡಿಕೊಳ್ಳಿ
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
- ಬರಬೇಕಾದ ಹಣಕ್ಕೆ ಅಡ್ಡಿಯಾಗಬಹುದು
- ಕೋಪ ಮತ್ತು ಉತ್ಸಾಹ ಕಡಿಮೆ ಮಾಡಿಕೊಳ್ಳಿ
- ಲಕ್ಷ್ಮಿ ಪ್ರಾಪ್ತಿಯಿದೆ ಆದರೆ ಖರ್ಚಿನ ವಿಚಾರದಲ್ಲಿ ಅಪಮಾನವಾಗಬಹುದು
- ಬೇರೆಯವರಿಂದ ನಿರೀಕ್ಷೆ ಮಾಡಬೇಡಿ
- ಗಣಪತಿಗೆ ಹಾಲು ಮತ್ತು ಜೇನಿನಿಂದ ಅಭಿಷೇಕ ಮಾಡಿಸಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶದಲ್ಲಿರುವ ಮಕ್ಕಳಿಂದ ಸಹಾಯವಾಗಲಿದೆ
- ಕಟ್ಟಡ ನಿರ್ಮಾಣ, ಭೂಮಿಯ ಖರೀದಿಗೆ ಮನಸ್ಸು ಇರುವ ದಿನ
- ಸರ್ಕಾರದಿಂದ ಹಣದ ಸಹಾಯವಾಗಲಿದೆ
- ಈ ದಿನ ಮಾಡುವ ಕೆಲಸಕ್ಕೆ ಅಡ್ಡಿಯಾಗಬಹುದು
- ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಅನುಕೂಲಕರವಾದ ದಿನ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ