ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಿಲ್ಲ
- ನಿಮಗೆ ಬೇಕಾದಷ್ಟು ವಿರಾಮದ ಸಮಯವಿರುತ್ತದೆ ಆದರೆ ವ್ಯರ್ಥ
- ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ
- ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ತೆಗೆದುಹಾಕಬಹುದು
- ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ
- ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸದಿರುವುದು ಒಳಿತು
- ಕುಲದೇವತಾರಾಧನೆ ಮಾಡಿ
ವೃಷಭ
- ಸರ್ಕಾರಿ ಕೆಲಸಗಳಿದ್ದಲ್ಲಿ ಅವು ಪೂರ್ಣವಾಗುತ್ತದೆ
- ಸಾಮಾಜಿಕ ವಲಯವು ಹೆಚ್ಚಾಗಬಹುದು
- ಸ್ನೇಹಿತರು ಅಥವಾ ಬಂಧುಗಳಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
- ಶತ್ರುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಮಿತಿಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ
- ನಿಮ್ಮ ಉದಾರ ವರ್ತನೆ ನಿಮಗೆ ಅನುಕೂಲಕರವಾಗಿರಬಹುದು
- ಶ್ರೀರಾಮನನ್ನು ಅರ್ಚಿಸಿ
ಮಿಥುನ
- ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಸೂಕ್ತ ಸಲಹೆ ಕೊಡಬಹುದು
- ನಿಮ್ಮ ಹತ್ತಿರದವರ ಬಗ್ಗೆ ಕಾಳಜಿವಹಿಸಿ
- ಉದ್ಯೋಗ ಬದಲಾವಣೆಗೆ ಹಾಗೂ ಸ್ಥಾನ ಪಲ್ಲಟಕ್ಕೂ ಅವಕಾಶವಿದೆ
- ವಿದ್ಯಾರ್ಥಿಗಳು ಪರಿಶ್ರಮಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
- ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬಂದರೂ ನಿಭಾಯಿಸುತ್ತೀರಿ
- ಲಲಿತಾ ಪರಮೇಶ್ವರಿಯನ್ನು ಅರ್ಚಿಸಿ
ಕಟಕ
- ವಿದ್ಯಾರ್ಥಿಗಳು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ
- ನಿರೀಕ್ಷಿಸಿದಷ್ಟು ಫಲ ಕಾಣಲು ಕಷ್ಟವಿದೆ
- ನಕಾರಾತ್ಮಕ ಆಲೋಚನೆಗೆಳು ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ
- ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು
- ಮನೆಗೆ ಸ್ನೇಹಿತರು, ಬಂಧುಗಳು ಬರಬಹುದು
- ಬಾಂಧವ್ಯ ತುಂಬಾ ದುರ್ಬಲವಾಗುತ್ತದೆ
- ಗುರು ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕಾದ ಪ್ರಯತ್ನ ನಿಮ್ಮಿಂದ ನಡೆಯಬೇಕು
- ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು
- ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
- ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ಮಾದರಿಯಾಗಬಹುದು
- ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳಿತಾಗಲಿದೆ
- ಇಷ್ಟ ದೇವತಾರಾಧನೆ ಮಾಡಿ
ಕನ್ಯಾ
- ನಿಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನವಾಗಬಹುದು
- ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡವಿರಬಹುದು
- ಇಂದು ಹೃದ್ರೋಗಿಗಳಿಗೆ ಸಮಸ್ಯೆಯ ದಿನ
- ತುಂಬಾ ವಿಶ್ರಾಂತಿ ಬೇಕೆನಿಸಬಹುದು ಆದರೆ ನೀವು ಕಾರ್ಯ ತತ್ಪರರಾಗಿರುತ್ತೀರಿ
- ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಆದರೆ ಧೈರ್ಯವಿರುವುದಿಲ್ಲ
- ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ
ತುಲಾ
- ವೃತ್ತಿಯಲ್ಲಿ ಲಾಭ ಆದರೆ ಮನಸ್ಸಿಗೆ ಕಿರಿಕಿರಿಯಾಗಬಹುದು
- ವೈಯಕ್ತಿಕ ಸಂಬಂಧಗಳಲ್ಲಿ ಸಂತೋಷವಿರುತ್ತದೆ
- ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ ಗೌರವ ಹೆಚ್ಚಾಗಲಿದೆ
- ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
- ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
- ಲೇಖಕರಿಗೆ ಸ್ವಲ್ಪ ಸಮಸ್ಯೆ ಕಾಣಬಹುದು
- ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ
ವೃಶ್ಚಿಕ
- ಮಾನಸಿಕ ಒತ್ತಡವು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ
- ತಾಳ್ಮೆಯಿರಲಿ ಆತುರಾತುರದ ನಿರ್ಧಾರಬೇಡ
- ಬದಲಾಗುತ್ತಿರುವ ಹವಾಮಾನದಿಂದ ಶೀತ-ಜ್ವರ ಕಾಣಬಹುದು ಜಾಗ್ರತೆವಹಿಸಿ
- ಯಾವುದೇ ಹೊಸ ಕೆಲಸ ಆರಂಭಿಸಬೇಡಿ
- ನಿಮ್ಮ ಕಾಲಿಗೆ ತೊಂದರೆಯಾಗುವ ಸೂಚನೆಗಳಿವೆ ಎಚ್ಚರವಹಿಸಿ
- ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ
- ಇಂದ್ರಾಕ್ಷಿಯನ್ನು ಸ್ತುತಿಸಿ
ಧನುಸ್ಸು
- ನಿಮ್ಮ ಸಾಧನೆ ಹಲವರಿಗೆ ಮಾದರಿ ಆದರೆ ನೀವೆ ಅದಕ್ಕೆ ಬಲೆ ಕೊಡುವುದಿಲ್ಲ
- ಹಿರಿಯರೂ ನಿಮ್ಮ ಬಗ್ಗೆ ಪ್ರಭಾವಿತರಾಗುತ್ತಾರೆ
- ನಿಮ್ಮ ಸಾಮರ್ಥ್ಯವು ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ
- ಈ ದಿನ ಹೊಸ ಕೆಲಸವನ್ನು ಆರಂಭಿಸಬೇಡಿ
- ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ
- ದುರ್ಗಾರಾಧನೆ ಮಾಡಿ
ಮಕರ
- ಪಿತ್ರಾರ್ಜಿತ ಆಸ್ತಿಗೆ ಸ್ವಲ್ಪ ಸೇರ್ಪಡೆಯಾಗಬಹುದು
- ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ
- ಪ್ರಾಮಾಣಿಕವಾಗಿ ದುಡಿದ ಕಲಾಕಾರರಿಗೆ ಇಂದು ಅದೃಷ್ಟ ಒಲಿಯಲಿದೆ
- ಉದ್ಯೋಗಾಕಾಂಕ್ಷಿಗಳಿಗೆ ಫಲವಿದೆ
- ವ್ಯವಹಾರ ಅಥವಾ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ಕಿರುಕುಳ ಬೇಸರವಾಗಬಹುದು
- ಜಗಳವಾಗುವ ಸಾಧ್ಯತೆಗಳು ಇರಲಿದೆ
- ಕುಬೇರ ಲಕ್ಷ್ಮಿಯನ್ನು ಆರಾಧನೆ ಮಾಡಿ
ಕುಂಭ
- ಜೀವನದಲ್ಲಿ ಜಿಗುಪ್ಸೆ ಕಾಡುವಂತಹ ದಿನ
- ನಿಮ್ಮ ತಪ್ಪಿನ ಅರಿವಾಗಬೇಕು ಅದರ ಬಗ್ಗೆ ಚಿಂತಿಸಿ ಸರಿಯಾಗಲಿದೆ
- ಜೀವ-ಜೀವನ ಎರಡರಲ್ಲೂ ಆಶಾದಾಯಕವಾಗಿರಬೇಕು
- ಇಂದು ನಿಮಗೆ ಬೇಸರದ ದಿನ
- ಸಪ್ತರ್ಷಿಗಳನ್ನು ಧ್ಯಾನ ಮಾಡಿ
ಮೀನ
- ತಂದೆಯವರ ಆರೋಗ್ಯದ ಬಗ್ಗೆ ಗಮನಿಸಿ
- ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತು ಹೋಗಬಹುದು
- ಭಾವನಾತ್ಮಕವಾಗಿ ವರ್ತಿಸುವುದರಿಂದ ಕೆಲಸಗಳಲ್ಲಿ ವ್ಯತ್ಯಯ ಕಾಣಬಹುದು
- ಬೇರೆಯವರಿಗೆ ಹಲವಾರು ಸಲಹೆಗಳು ಬರುತ್ತದೆ ಆದರೆ ಅದು ಸೂಕ್ರವಲ್ಲ
- ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದೂ ಬೇಕಾಗಿರುವುದಿಲ್ಲ
- ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
- ಮೃತ್ಯುಂಜಯನನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ