ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ
ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
- ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
- ಯಾರಿಗೆ ಬುದ್ದಿವಂತಿಕೆ ಚೆನ್ನಾಗಿದ್ಯೊ ಅಂತವರು ಇಲ್ಲಿ ಕೆಲಸ ಮಾಡಿ ಜಯಿಸಬಹುದು
- ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಗಣಪತಿಯನ್ನು ಪ್ರಾರ್ಥಿಸಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
- ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕ ಕಾಲದಲ್ಲಿ ಸಿಗಲಿದೆ
- ಭಾವನಾತ್ಮಕವಾದಂತಹ ಬಲಶಾಲಿಗಳು ಮತ್ತು ನಿಮ್ಮ ಮನೆಯಲ್ಲಿರುವ ಕೆಲವರು ಇದನ್ನು ಒಪ್ಪುವುದಿಲ್ಲ
- ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
- ಆಲಸ್ಯ ಬೇಡ ಇದರಿಂದ ಹಿನ್ನಡೆಯಾಗುವ ಸಾಧ್ಯತೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಕರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
- ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
- ಸ್ವಾಭಾವಿಕವಾಗಿರಿ ಶುಭವಿದೆ
- ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ
- ದೂರದ ಬಂಧುಗಳು ಕಿರಿಕಿರಿ ಮಾಡಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಿಡುವಿಲ್ಲದ ಕೆಲಸ ಪ್ರಯೋಜನ ಕಡಿಮೆ
- ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
- ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
- ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
- ನೀಲಿ ಬಣ್ಣದ ಬಟ್ಟೆ ಧರಿಸಿ
- ವೃದ್ದರಿಗೆ, ಕಾಲು ಊನ ಇರುವವರಿಗೆ, ಅಶಕ್ತರಿಗೆ ಸಹಾಯ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿದೀಪವಾಗಿರುತ್ತದೆ
- ಆಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
- ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
- ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
- ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
- ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆವಹಿಸಿ
- ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗಬಹುದು
- ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
- ವ್ಯಕ್ತಿಗೆ ಗೌರವಯುತದಿಂದ ಬೆಲೆಯನ್ನು ಕೊಡಿ
- ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗೃತರಾಗಿರಿ
- ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಬೇಸರವಾಗಬಹುದು
- ಯಾರಿಗೂ ಆಶ್ವಾಸನೆಯಾಗಲಿ ಭರವಸೆಯಾಗಲಿ ಕೊಡಬೇಡಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
- ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ
- ಹೊಸ ವಸ್ತು, ವಸ್ತ್ರವನ್ನು ಖರೀದಿಯನ್ನು ಮಾಡುತ್ತೀರಿ ಆದರೆ ಮಂಗಳ ಕಾರ್ಯಕ್ಕೆ ಖರೀದಿಸೋದು ಬೇಡ
- ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ ಸಂಸ್ಥೆಗಳು ರಾಜಕೀಯ ವಿಚಾರವಾಗಿ ಏನೇನೊ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ ಎಚ್ಚರವಿರಲಿ
- ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಭಾಗಿಗಳಾಗಿ ಅವಮಾನ ಎದುರಿಸುತ್ತೀರಿ
- ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
- ತುಂಬಾ ಶ್ರಮದಾಯಕವಾದ ದಿವಸ
- ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
- ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಉದ್ಯೋಗ ಬದಲಾವಣೆಯ ಸೂಚನೆ ಇದೆ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
- ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
- ಎಲ್ಲ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ
- ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
- ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
- ರಾಜಕೀಯ ಭಯ ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
- ಹಣ ಮುಖ್ಯ ಎಂಬ ತೀಮಾರ್ನಕ್ಕೆ ಬಂದು ಬೇರೆ ಯಾವುದನ್ನೂ ಗಮನಿಸುವುದಿಲ್ಲ
- ನೀವು ಗೌರವಯುತವಾಗಿ ಕೊಟ್ಟಿದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
- ಸ್ವಂತಿಕೆಯಿರಲಿ ಆದರೆ ಬೇರೆಯವರನ್ನು ಅವಲಂಬಿಸಬಾರದು
- ಶಕ್ತಿ ದೇವತಾರಾಧನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿಂದೆ ನೀವು ಸಂಪಾದನೆ ಮಾಡಿರುವ ಆಸ್ತಿ ಪಿತ್ರಾರ್ಜಿತ ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರುತ್ತದೆ
- ಆದರೆ ಅದನ್ನು ಅನುಭವಿಸುವ ಯೋಗ ನಿಮಗಿರುವುದಿಲ್ಲ
- ನೀವು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡುವುದು
- ನಿಮ್ಮ ಕೆಲವು ದಿಟ್ಟ ನಿರ್ಧಾರಗಳು ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆಯನ್ನುಂಟು ಮಾಡುತ್ತದೆ
- ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
- ತುಂಬಾ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
- ಅಮೃತ ಮೃತ್ಯುಂಜಯನನ್ನು ಸ್ಮರಣೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ರಾಶಿಯವರಿಗೆ ತಮ್ಮ ಬುದ್ದಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
- ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
- ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ಧಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
- ಸಂಬಂಧ ಪಡದವರ ವಿಷಯಕ್ಕೆ ಸಂಬಂಧ ಪಡದ ವಿಚಾರಕ್ಕೆ ಹೋಗಲೆಬಾರದು
- ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
- ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
- ಮಹಾ ವಿಷ್ಣುವನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ