ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು
ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಉಂಟಾಗಬಹುದು
- ತುಂಬಾ ಆಯಾಸದ ದಿನ
- ಅನಗತ್ಯ ಪ್ರಯಾಣ ಮಾಡಬಹುದು
- ವಿದ್ಯಾರ್ಥಿಗಳು ಬೇಸರದಿಂದ ಅಥವಾ ಬಲವಂತದಿಂದ ಓದಬಾರದು
- ತಂದೆ-ತಾಯಿಯ ಜೊತೆಯಲ್ಲಿ ವಾದ-ವಿವಾದ ಏರ್ಪಡಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
- ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
- ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು
- ಕೈ ಹಿಡಿದ ಕೆಲಸಗಳು ಪೂರ್ಣಗೊಳ್ಳುವುದು
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
- ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರವಾಗಬಹುದು
- ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಸೇರಿ ಶಿಕ್ಷೆ ಅನುಭವಿಸುತ್ತೀರಿ
- ಸರಸ್ವತಿ ದೇವಿಯ ಆರಾಧನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನವ ವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
- ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
- ವ್ಯಾವಹಾರಿಕವಾಗಿ ಯೋಜನೆಗಳನ್ನು ಬದಲಿಸಿ
- ಸಮಾಜ ಸೇವೆಗೆ ಮನಸ್ಸು ಮಾಡುತ್ತೀರಿ
- ಸ್ಥಿರ ಆಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಲಿದೆ
- ಮನೆಯವರ ಯೋಗಕ್ಷೇಮದಲ್ಲಿ ವ್ಯತ್ಯಯ ಗೊಂದಲವಾಗಬಹುದು
- ಲಕ್ಷ್ಮೀ ನಾರಾಯಣ ಹೃದಯಸ್ತೋತ್ರ ಪಠಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆವಹಿಸಿ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
- ಕಷ್ಟ ಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
- ಯಾರಿಗೂ ಸಾಲ ಕೊಡಬೇಡಿ ಕೇಳಬೇಡಿ
- ಹಣದ ವಿಚಾರಕ್ಕೆ ಕಲಹವಾಗಬಹುದು
- ದುರ್ಗಾರಾಧನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ವ್ಯತ್ಯಾಸಗಳಾಗಬಹುದು
- ಸಮಯೋಚಿತವಾಗಿ ಮಾತನಾಡಬೇಕು
- ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
- ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬಹುದು
- ಚಂಡಿಕಾ ಪಾರಾಯಣ ಮಾಡಿಸಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿರಿಯರ ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
- ಹೊಸ ಜನರ ಸಂಪರ್ಕ ಸಿಗಲಿದೆ
- ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಲಾಭವಿದೆ
- ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
- ನಿವೃತ್ತ ನೌಕರರಿಗೆ ಶುಭವಿದೆ
- ಶಿವಾರಾಧನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಪರಿಚಯದವರಿಂದ ಮೋಸವಾಗಬಹುದು
- ಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಚಿಂತನೆ
- ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣವಿರಲಿದೆ
- ಪೂರ್ವಿಕರ ವೃತ್ತಿಯಲ್ಲಿ ಹಣಗಳಿಸಬಹುದು
- ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
- ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
- ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಮೀಷನ್ ಏಜೆಂಟ್ಸ್ ಗಳಿಗೆ ಹಣ ನಷ್ಟ ಸಂಭವ
- ಅನುಮಾನಾಸ್ಪದ ವರ್ತನೆಯಿಂದ ಅವಮಾನವಾಗಬಹುದು
- ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
- ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
- ಕೆಟ್ಟ ಜನರ ಸಹವಾಸವನ್ನು ಬಿಡಿ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
- ಕುಬೇರರನ್ನು ಪ್ರಾರ್ಥಿಸಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನೆಯಲ್ಲಿ ನಿಮ್ಮಿಂದ ನಿರೀಕ್ಷಗಳು ಹೆಚ್ಚಾಗಬಹುದು
- ಕೆಲ ಸಮಯ ತುಂಬಾ ಹೆದರಿಕೆ ಕಾಣಬಹುದು
- ಈ ದಿನ ಹೊಸ ಕೆಲಸದ ಪ್ರಾರಂಭ ಬೇಡ
- ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
- ವಾಹನಗಳ ಚಾಲನೆ ಅಥವಾ ಪ್ರಯಾಣ ಅಪಾಯಕಾರಿ
- ನಿಮ್ಮ ಆಸೆಗಳನ್ನು ವ್ಯಕ್ತ ಪಡಿಸಬೇಡಿ ಈಡೇರುವುದಿಲ್ಲ
- ವನದುರ್ಗಾ ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವಿಚಾರಕ್ಕೆ ಉತ್ತಮ ದಿನ
- ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
- ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
- ಅತಿಯಾದ ಶಿಸ್ತನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
- ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಿ
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
- ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಬಹುದು
- ಕೋಪ ಮತ್ತು ಉತ್ಸಾಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ
- ಈ ದಿನ ನಿಮಗೆ ಲಕ್ಷ್ಮೀ ಪ್ರಾಪ್ತಿಯಿದೆ
- ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
- ಗಣಪತಿಗೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶದಲ್ಲಿನ ಮಕ್ಕಳಿಗೆ ಸಹಾಯ ಮಾಡುತ್ತೀರಿ
- ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧೀ ಖರೀದಿ ನಡೆಯಬಹುದು
- ಸರ್ಕಾರದಿದ ಹಣ ಸಹಾಯವಾಗಲಿದೆ
- ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತವಾಗಬಹುದು
- ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅಡ್ಡಿಯಾಗಬಹುದು
- ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ