ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
ನೌಕರಿ ದೃಷ್ಟಿಯಿಂದ ದೂರ ಪ್ರಯಾಣ ಮಾಡುವ ಸೂಚನೆಗಳಿವೆ
ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುತ್ತದೆ, ಸ್ಥಿರ ನಿರ್ಧಾರ ಬೇಕು
- ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
- ನಿಮ್ಮ ಮಹತ್ತರವಾದ ಆಲೋಚನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
- ಜನರು ನಿಮ್ಮ ವ್ಯವಹಾರಗಳನ್ನು ಗೇಲಿ ಮಾಡಬಹುದು
- ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
- ಮುತ್ತುರಾಯಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣ ಮಾಡುವ ಸೂಚನೆಗಳಿವೆ
- ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬೀಳಬಹುದು
- ಇಂದು ಉನ್ನತ ಅಧಿಕಾರಿಗಳೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ
- ಇಂದು ಒತ್ತಡ ಹಾಗೂ ಮಾನಸಿಕ ಕಿರಿಕಿರಿ ಉಂಟಾಗಬಹುದು
- ಮನಸ್ಸು ತುಂಬಾ ಘಾಸಿಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತದೆ
- ತುಂಬಾ ಆಲೋಚನೆಗಳನ್ನು ಮಾಡುವ ದಿನ
- ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನಿಸಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
- ನಿಮ್ಮ ಬಗ್ಗೆ ಅಪಪ್ರಚಾರ ನಡೆಯಬಹುದು
- ಮನೆಯ ಹೊರಗೆ ಅಥವಾ ನೌಕರಿಯ ಸ್ಥಳದಲ್ಲಿ ಊಹಾಪೋಹಗಳಿರಬಹುದು
- ಮನೆಯಲ್ಲಿ ಎಲ್ಲರ ನಂಬಿಕೆ ವಿಶ್ವಾಸಗಳಿಗೆ ಪಾತ್ರರಾಗುತ್ತೀರಿ
- ಕೆಲವೇ ಕೆಲವರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
- ವಿದ್ಯಾರ್ಥಿಗಳು ದುಂದುವೆಚ್ಚ ಮಾಡಬಹುದು ಕಾಲಾಹರಣವೂ ಆಗುತ್ತದೆ
- ಕುಲದೇವರನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
- ವ್ಯಾಪಾರ, ವ್ಯವಹಾರದಲ್ಲಿ ಸ್ವಲ್ಪ ನಷ್ಟದ ಸಾಧ್ಯತೆಗಳಿವೆ
- ನಿಮ್ಮ ವ್ಯವಹಾರಾದಿಗಳಲ್ಲಿ, ವೃತ್ತಿಯಲ್ಲಿ ಸಭ್ಯರಾಗಿರಿ
- ಹಣದ ಚಿಂತೆ ಕಾಡಬಹುದು ಅದರೆ ತೊಂದರೆಯಾಗದೆ ಹಣ ಸಿಗುತ್ತದೆ
- ಹಳೆಯ ಕಹಿ ನೆನಪುಗಳು, ತಾವು ಜೀವನದಲ್ಲಿ ನಡೆದು ಬಂದ ದಾರಿ ನೆನಪಿಗೆ ಬರಬಹುದು
- ಇಷ್ಟ ದೇವತಾ ಧ್ಯಾನ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
- ಕಾನೂನು ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಅನುಕೂಲಕ್ಕೆ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಅವಕಾಶವಿದೆ
- ನ್ಯಾಯವಾದಿಗಳು, ವಕೀಲರಿಗೆ ಶುಭ ಹಾಗೂ ಲಾಭದ ದಿನ
- ಕಬ್ಬಿಣ ಮಾರಾಟ ಮಾಡುವವರಿಗೆ ಲಾಭವಿದ್ದರೂ ದಂಡ ಕಟ್ಟ ಬೇಕಾಗಬಹುದು
- ಹಣ ಹೂಡಿಕೆಯ ಮತ್ತು ಹೆಚ್ಚು ಹಣ ಖರ್ಚಾಗುವ ಯಾವುದೇ ಕೆಲಸವನ್ನು ಆರಂಭಿಸುವುದಕ್ಕೆ ಶುಭವಲ್ಲ
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ, ಎಳ್ಳೆಣ್ಣೆ ಅರ್ಪಿಸಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನಗಳು ದೊರೆಯಲಿದೆ
- ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ನೋಡುವ ದಿನವಾಗಿದೆ
- ವಾಹನ ಖರೀದಿಯ ಆಲೋಚನೆ ಬರಬಹುದು
- ಸಣ್ಣ ಆಸ್ತಿಯ ವಿಚಾರಕ್ಕೆ ಮನಸ್ತಾಪ ಏರ್ಪಡುತ್ತದೆ
- ಮನೆಯಲ್ಲಿದ್ದ ಶಾಂತಿಯ ವಾತಾವರಣ ಕದಡಿ ಬೇಸರವಾಗಬಹುದು
- ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
- ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
- ಪ್ರಯಾಣವು ತುಂಬಾ ಆಯಾಸ ಉಂಟು ಮಾಡುತ್ತದೆ
- ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿರಲಿ
- ಮಾತು ನಿಮಗೆ ತೊಂದರೆಯನ್ನು ಮಾಡಬಹುದು
- ಹಿರಿಯರ, ಸಂಗಾತಿಯ ಮಾತಿಗೆ ಬೆಲೆ ಕೊಡಿ ಪರಿಹಾರ ಮಾರ್ಗ ದೊರೆಯಬಹುದು
- ದೂರದಿಂದ ಬರುವ ಅಶುಭವಾರ್ತೆ ಮನಸ್ಸಿಗೆ ನೋವು ಉಂಟು ಮಾಡಬಹುದು
- ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಹಲವು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗಬಹುದು
- ಪ್ರೇಮಿಗಳಿಗೆ ಸುದಿನ ದುರುಪಯೋಗ ಮಾಡಿಕೊಳ್ಳಬಾರದು
- ಹಣ, ವಸ್ತ್ರಗಳು ಮನಸ್ಸಿಗೆ ಸಂತೋಷ ಕೊಡಬಹುದು
- ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡದೆ ಅವರಿಗೆ ಬೇಸರ ಉಂಟಾಗಬಹುದು
- ನಿಮ್ಮ ಒತ್ತಡಗಳಿದ್ದರು ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಬೇಕಾಗುತ್ತದೆ
- ಅಮೂಲ್ಯವಾದ ಗ್ರಂಥ ಸಂಪಾದನೆಗೆ, ಓದಿನ ಕಡೆಗೆ ನೀವು ಆಕರ್ಷಿತರಾಗಬಹುದು
- ಸಮುದ್ರ ತೀರದಲ್ಲಿರುವ ಈಶ್ವರನ ಆರಾಧನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಫಲ ನೀಡದ ಕೆಲಸಗಳನ್ನ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು
- ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು
- ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ ರೋಗ ಉಲ್ಬಣವಾಗಬಹುದು
- ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
- ಕೃಷಿಕರಿಗೆ, ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
- ಇಂದು ಯಾವುದೇ ಹೊಸ ಯೋಜನೆಗಳು ಬೇಡ
- ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ದಿನದ ಎಲ್ಲಾ ಕೆಲಸಗಳು ನೆರವೇರುವ ವಿಶ್ವಾಸ ನಿಮ್ಮದಾಗಿರುತ್ತದೆ
- ಪ್ರೇಮಿಗಳು ಸುಳ್ಳು ಹೇಳಬಾರದು
- ತಪ್ಪುಗಳನ್ನು ಮುಚ್ಚಿಡಬೇಡಿ ಬೇರೆಯವರಿಂದ ತಿಳಿದಾಗ ನಂಬಿಕೆ ಇರುವುದಿಲ್ಲ
- ಆತ್ಮ ಪ್ರಶಂಸೆಯಿಂದ ಹಲವರಿಗೆ ಆಶ್ಚರ್ಯವಾಗಬಹುದು
- ವೃತ್ತಿ ಜೀವನದ ಬಗ್ಗೆ ಸಮಾಧಾನ ಇರುತ್ತದೆ
- ಮಕ್ಕಳ ಆರೋಗ್ಯ ವಿದ್ಯಾಭ್ಯಾಸ ಮನಸ್ಸಿಗೆ ಬೇಸರವಾಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆಯಿರಲಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
- ಅಪರಾಧ ಭಾವ ಕಾಡಬಹುದು, ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
- ಇಂದು ಧನಬಲ ಕೆಲಸ ಮಾಡುವುದಿಲ್ಲ
- ಹಳೆಯ ವಿಚಾರಗಳು ಪ್ರಸ್ತಾಪವಾಗಿ ತೊಂದರೆ ಅನುಭವಿಸ ಬೇಕಾಗಬಹುದು
- ತಾಳ್ಮೆಯಿರಲಿ, ನಾಟಕಿಯ ಜೀವನ ಬೇಡ
- ದುರ್ಗಾದೇವಿಯನ್ನು ಆರಾಧಿಸಿ, ದುರ್ಗಾ ಹೋಮ ಮಾಡಿಸಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
- ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
- ಸ್ನೇಹಿತರು ಬಂಧುಗಳು ನಿಮಗೆ ಸಹಾಯ ಮಾಡಬಹುದು
- ದುಡ್ಡಿನ ಬಗ್ಗೆ ಹೆಚ್ಚು ಆಸಕ್ತಿಯಿರುವುದಿಲ್ಲ, ಇಷ್ಟವಾದ ಮಿತ್ರರ ಮಾತು ಹಿತವೆನಿಸುತ್ತದೆ
- ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತವಾಗಿ ಸಂತೋಷವಾಗುತ್ತದೆ
- ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಚಿಂತಿಸಬಹುದು
- ಲಲಿತಾ ಸಹಸ್ರನಾಮ ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ