ಮನೆಯಲ್ಲೂ ಕೂಡ ನಿಮ್ಮ ಸ್ವಭಾವವನ್ನು ಸಹಿಸುವುದು ಕಷ್ಟವಾಗಲಿದೆ
ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸುಧಾರಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ
ತಪ್ಪನ್ನೇ ಸರಿ ಎಂದು ವಾದ ಮಾಡುವುದು ನಿಮಗೆ ಮಾರಕ ಆಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ ಸಂಸ್ಥೆಗಳಲ್ಲಿ, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ
- ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಸರಿಯಾದ ಸ್ಥಾನಮಾನವನ್ನು ಗುರುತಿಸಿ ಕೆಲಸ ನೀಡುತ್ತಾರೆ
- ಇಂದು ಆರ್ಥಿಕವಾಗಿ ಅನುಕೂಲವಿದೆ
- ಬಡ್ತಿಗೆ ಹೋರಾಟ ಮಾಡುತ್ತಿದ್ದರೆ ಸಫಲವಾಗಲಿದೆ
- ವೃತ್ತಿಯ ನಿಮ್ಮಿತ್ತವಾಗಿ ವಿದೇಶಕ್ಕೆ ಪ್ರಯಾಣ ಮಾಡುತ್ತೀರಿ
- ಸಂಬಂಧಿಕರಿಂದ ಶುಭವಾರ್ತೆ ಕೇಳುತ್ತೀರಿ
- ಪಶು ಪಕ್ಷಿಗಳಿಗೆ, ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೋಪಕ್ಕೆ ಕಡಿವಾಣ ಹಾಕಿ ತಾಳ್ಮೆಯನ್ನು ಪ್ರದರ್ಶಿಸಿ
- ಪರಸ್ಪರ ವಿವಾಹ ಆಗದೆ ಇರುವವರು ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಲುಕುತ್ತೀರಿ
- ಕಷ್ಟವನ್ನು ಅನುಭವಿಸುತ್ತಿರಿ, ಅವಮಾನವನ್ನು ಎದುರಿಸುತ್ತೀರಿ
- ಇಂದು ಕೆಟ್ಟ ಭಾಷೆಯನ್ನು ಬಳಸಬೇಡಿ
- ಕುಟುಂಬದ ಆನಂದ ನಿಮ್ಮ ಕೈನಲ್ಲಿರುತ್ತದೆ
- ಯಾರಿಗೂ ಮನಸ್ಸಿಗೆ ನೋವಾಗದ ರೀತಿ ನೀವು ನಡೆದುಕೊಳ್ಳಬೇಕು
- ವಿಕಲ ಚೇತನರಿಗೆ ಹಣ್ಣನ್ನು ಕೊಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ
- ನಿಮ್ಮ ವೃತ್ತಿಯಲ್ಲಿ, ಉದ್ಯೋಗದಲ್ಲಿ ಬಹಳ ಕಗ್ಗಂಟಾದ ಸಮಸ್ಯೆ ಸುಲಭವಾಗಿ ನಿವಾರಣೆಯಾಗಲಿದೆ
- ನೀವು ತುಂಬಾ ಬ್ಯುಸಿಯಾಗಿರುವ ದಿನವಾಗಿರುತ್ತದೆ
- ನಿಮ್ಮ ಬಿಡುವಿಲ್ಲದ ಕೆಲಸವನ್ನು ನೋಡಿದ ಸ್ನೇಹಿತರು ಸಂತೋಷ ಪಡುತ್ತಾರೆ
- ಪರಶುರಾಮನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಸು ಶಾಂತವಾಗಿರಲಿ
- ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ನಿಯಂತ್ರಣ ಮಾಡಲು ಸಾಧ್ಯವಿಲ್ಲ
- ನಿಮ್ಮ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುವ ದಿನ
- ಹಣದ ವಿಚಾರವಾಗಿ ಎಚ್ಚರಿಕೆವಹಿಸಿ
- ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಒಳ್ಳೆಯ ಸುದ್ದಿಗಳಿಂದ, ವಿಚಾರಗಳಿಂದ ಈ ದಿನ ಆರಂಭವಾಗಲಿದೆ
- ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಲಿದೆ
- ಮನೆಯವರ ಪ್ರೀತಿ, ವಿಶ್ವಾಸ, ನಂಬಿಕೆ, ಹಾರೈಕೆ ಎಲ್ಲವೂ ಆನಂದವನ್ನುಂಟು ಮಾಡಲಿದೆ
- ನೀವು ತುಂಬಾ ಅದೃಷ್ಟಶಾಲಿಗಳೆಂಬ ಭಾವನೆ ಬರಲಿದೆ
- ಯಥೇಚ್ಛವಾಗಿ ಹಣವನ್ನು ಖರ್ಚು ಮಾಡುತ್ತೀರಿ
- ಶುಭವಾಗಲಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಹಾರದ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಯವನ್ನು ಮಾಡಿಕೊಳ್ಳುತ್ತೀರಿ
- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಲಿದೆ
- ಮನೆಯಲ್ಲಿ ಔಷಧಿಯಿಂದ ಗುಣ ಆಗತ್ತೆ ಅನ್ನುವ ಆಲೋಚನೆ ಇದ್ದರೆ ಸ್ವಯಂ ಔಷಧಿ ,ಮಾಡೋದು ಬೇಡ
- ಆದಷ್ಟು ಮನೆಮದ್ದನ್ನು ದೂರ ಮಾಡಿ, ವೈದ್ಯರನ್ನು ಸಂಪರ್ಕಿಸಿ
- ಈ ದಿನ ಅಗತ್ಯವಾಗಿ ವಿಶ್ರಾಂತಿ ಪಡೆಯಿರಿ
- ಮೂಕಾಂಬಿಕ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾವಹಾರಿಕವಾಗಿ, ನಿಮ್ಮ ವೈಯಕ್ತಿಕವಾಗಿ, ಸಾಂಸಾರಿಕವಾಗಿ ಮನೆಯವರು ತೆಗೆದುಕೊಂಡ ನಿರ್ಧಾರ ಈ ದಿನ ಅಲ್ಲೋಲ ಕಲ್ಲೋಲವಾಗಬಹುದು
- ನೀವು ಜಗಳವಾಗಲಿ, ಹೊಡೆದಾಟಕ್ಕಾಗಿ ಅವಕಾಶ ಮಾಡಿಕೊಡಬೇಡಿ
- ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಇದೆ
- ಇದರ ಪರಿಣಾಮ ಮಕ್ಕಳ ಮೇಲೆ ಪ್ರಭಾವ ಬೀರಬಹುದು
- ಮಕ್ಕಳು ಶಾಂತತೆಯನ್ನು ಕಳೆದುಕೊಳ್ಳುವ ವಾತಾವರಣ ಉಂಟಾಗಬಹುದು
- ಕೆಂಪು ಹೂವಿನಿಂದ ಕಾಳಿಕ ದೇವಿಯನ್ನು ಅರ್ಚಿಸಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅತಿ ಮುಖ್ಯವಾದ ಕೆಲಸ ನಿಮ್ಮ ಬೇಜಾಬ್ದಾರಿಯಿಂದ ಹಾಳಾಗಬಹುದು
- ಅಗೌರವ, ಹಣದ ನಷ್ಟ ಹಿನ್ನಡೆ ಎಲ್ಲವನ್ನೂ ನೀವು ನೋಡಬೇಕಾಗಲಿದೆ
- ಅನಗತ್ಯವಾದ ಗೊಂದಲಗಳನ್ನು ನೋಡುತ್ತೀರಿ
- ಮಾತೆಯರು ನಿಮ್ಮ ಆಸೆ, ಆಕಾಂಕ್ಷೆಯನ್ನು ಹೇಳಿಕೊಳ್ಳದೆ ಇದ್ದರೆ ಒಳ್ಳೆಯದು
- ಹಿಂದಿನ ಯಾವುದೋ ವಿಚಾರ ಕುಟುಂಬದಲ್ಲಿ ಅಶಾಂತಿಗೆ ಕಾರಣವಾಗಲಿದೆ
- ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಹಲವು ದಿವಸದ ಕನಸು ಇಂದು ನನಸಾಗಲಿದೆ
- ತಂತ್ರಜ್ಞಾನ ಅಥವಾ ಯಾವುದೇ ಕ್ಷೇತ್ರದಲ್ಲಿ ವಿಶೇಷವಾಗಿ ಸಾಧನೆ ಮಾಡಿರುವವರಿಗೆ ಗೌರವ, ಪುರಸ್ಕಾರ ದೊರೆಯಲಿದೆ
- ತಲೆನೋವು, ಕಣ್ಣಿನ ನೋವು ಕಾಡಬಹುದು
- ವಿನಾಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಜಾಗ್ರತೆವಹಿಸಿ
- ತಲೆನೋವು, ಕಣ್ಣಿನ ನೋವಿಗೆ ಅಶ್ವಿನಿ ದೇವತೆಯನ್ನು ಸ್ಮರಣೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯ ವಾತಾವರಣ ಚೆನ್ನಾಗಿದೆ ಸಹಕಾರ, ಸಹಾಯ ಸಿಗಲಿದೆ
- ಸರ್ಕಾರದ ಹರಾಜಲ್ಲಿ ಭಾಗಿಯಾಗುತ್ತೀರಿ
- ವಾಹನದ ವಿಚಾರವಾಗಿ ಹರಾಜಲ್ಲಿ ಭಾಗಿಗಳಾಗಬೇಡಿ
- ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ಬಹಳ ಉತ್ತಮವಾಗಿರುತ್ತದೆ
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಸುಧಾರಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ
- ವಿದ್ಯಾರ್ಥಿಗಳು ತಮ್ಮ ಅತ್ಯುತ್ಸಾಹದಿಂದ ತೊಂದರೆಯನ್ನ ಅನುಭವಿಸುತ್ತೀರಿ
- ತಮ್ಮ ತಪ್ಪನ್ನೇ ಸರಿ ಎಂದು ವಾದ ಮಾಡುವುದು ನಿಮಗೆ ಮಾರಕವಾಗಬಹುದು
- ತಪ್ಪು ತಿಳಿದ ನಂತರ ಪಶ್ಚಾತ್ತಾಪ ಪಡುತ್ತೀರಿ
- ಸರಿಯಾದ ತಿಳುವಳಿಕೆ ಇರಬೇಕಾಗಲಿದೆ
- ಅವಮಾನವಾಗಲಿದೆ ಆನಂತರ ತಲೆ ತಗ್ಗಿಸುತ್ತೀರಿ
- ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ವಭಾವ, ನಡತೆ , ಮಾತು, ಸ್ವಾರ್ಥ ಎಲ್ಲವನ್ನು ನೋಡಿದ ಸ್ನೇಹಿತರು, ಬಂಧುಗಳು ನಿಮ್ಮಿಂದ ದೂರವಾಗಬಹುದು
- ಮನೆಯಲ್ಲೂ ಕೂಡ ನಿಮ್ಮ ಸ್ವಭಾವವನ್ನು ಸಹಿಸುವುದು ಕಷ್ಟವಾಗಲಿದೆ
- ಅಧಿಕಾರಿಗಳ ಜೊತೆ ಮತ್ತೆ ರಾಜಕಾರಣಿಗಳ ಜೊತೆ ಉತ್ತಮವಾಗಿ ವರ್ತಿಸಬೇಕಾಗಲಿದೆ
- ವಿನಾಕಾರಣ ತೊಂದರೆಗೆ ಆಹ್ವಾನವನ್ನು ಮಾಡಿಕೊಳ್ಳುತ್ತೀರಿ
- ಪ್ರಾಣಿಗಳಿಂದ ಗಾಯವಾಗಬಹುದು
- ಕಾಲಭೈರವವನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ