ಸಾಮರ್ಥ್ಯ ಬಹಳ ಇದ್ದರೂ ಕೂಡ ಕಡಿಮೆಯಾಗ್ತಿದೆ ಎಂಬ ಅನುಭವ ಆಗಬಹುದು
ಹಳೆ ಸ್ನೇಹಿತರ, ಬಂಧುಗಳ ಭೇಟಿಗಾಗಿ ಕಾಯುತ್ತೀರಿ, ಆದರೆ ಅವಕಾಶ ಸಿಗುವುದಿಲ್ಲ
ಕುಟುಂಬದ ಸಾಮರಸ್ಯ ಚೆನ್ನಾಗಿ ಇರುತ್ತದೆ, ಪ್ರಯತ್ನದಿಂದ ಹಾಗೇ ಉಳಿಯಬೇಕು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ ನಂತರ ನವಮಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಧ್ಯಾತ್ಮಿಕ, ಧಾರ್ಮಿಕವಾಗಿ ಆಸಕ್ತಿ ಇದ್ರೂ ಕೂಡ ಅದನ್ನ ರೂಢಿಯಲ್ಲಿ ಇಟ್ಟುಕೊಳ್ಳಬೇಕು
- ಇಂದು ಹಣ ಹೆಚ್ಚು ಖರ್ಚಾದರೂ ಕೂಡ ಮತ್ತೆ ಸಂಗ್ರಹ ಆಗಬಹುದು
- ಇಂದು ಮಕ್ಕಳಿಂದ ಬೇಸರವಾಗಬಹುದು
- ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ಗೊತ್ತಿರಬೇಕು
- ಈ ದಿನ ಉತ್ತಮವಾಗಿದೆ ಆದರೆ ನಿಮಗೆ ತೃಪ್ತಿ ಇರುವುದಿಲ್ಲ
- ಇಂದು ಮನೋರಂಜನೆಗಾಗಿ ಸಂಪೂರ್ಣ ಸಮಯ ಹೋಗಿಬಿಡುತ್ತದೆ
- ಮನೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಒಂದು ಘಟನೆ ನಡೆಯಬಹುದು ಗಮನಿಸಿ
- ಕುಲದೇವತಾ ಆರಾಧನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯೋಗ, ಧ್ಯಾನ ಮನಸ್ಸನ್ನು ಕೇಂದ್ರೀಕರಿಸುವ ಸಾಧನಗಳ ಮೊರೆ ಹೋಗಿ
- ನಿಮ್ಮ ಶರೀರದ ಶಕ್ತಿಯನ್ನು ಜಾಸ್ತಿ ಮಾಡಿಕೊಳ್ಳಿ ಜೊತೆಗೆ ಆರೋಗ್ಯವಂತರಾಗಿರಿ
- ಇಂದು ಹಣದ ವೃದ್ಧಿ ಇದೆ ಆದರೆ ಆಲಸ್ಯ ತುಂಬಾ ಜಾಸ್ತಿಯಾಗಬಹುದು
- ಇಂದು ಶರೀರದಲ್ಲೂ ಕೂಡ ಅಂತ ಸುಖ ಇರುವುದಿಲ್ಲ
- ಆಲಸ್ಯ ಮತ್ತು ಸೋಮಾರಿತನದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳಬಹುದು
- ಏಕಾಂಗಿತನ ಅಥವಾ ಒಂಟಿತನ ನಿಮ್ಮನ್ನು ಕಾಡಬಹುದು
- ನಿಮ್ಮ ಪ್ರತಿಭೆಗೆ ಗೌರವ ಸಿಗಬೇಕಾದ್ರೆ ಚಟುಚಟಿಕೆಯಿಂದ ಇರಬೇಕು
- ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂತಾನಾಪೇಕ್ಷಿಗಳಿಗೆ ಉತ್ತಮವಾದ ಫಲ ಸಿಗುವ ದಿನ
- ಹಳೆಯ ನೋವು, ಅನಾರೋಗ್ಯ ಎಲ್ಲವೂ ಮರುಕಳಿಸಬಹುದು ಎಚ್ಚರಿಕೆ ವಹಿಸಿ
- ಇಂದು ಆಸ್ಪತ್ರೆಗೋಸ್ಕರ ಹಣ ಖರ್ಚಾಗಿ ಬೇಸರವಾಗಬಹುದು
- ಪ್ರೀತಿಪಾತ್ರರ ಅನಗತ್ಯವಾದ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ
- ಇಂದು ಸಂತೋಷದ ವಾತಾವರಣವಿದೆ ಆದರೆ ಆರೋಗ್ಯ ಸರಿಯಿಲ್ಲದೇ ಹಾಳಾಗಬಹುದು
- ಇಂದು ಕುಟುಂಬದ ಸಹಕಾರ ಸಿಗುತ್ತದೆ ಧೈರ್ಯವಾಗಿರಿ
- ಗೋಪಾಲಕೃಷ್ಣನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನದ ಉಜ್ವಲ ಭವಿಷ್ಯ, ಮುಂದಿನ ಒಳಿತು ಇಂದು ಕಾಣಬಹುದು
- ನಿಮ್ಮ ಆತ್ಮವಿಶ್ವಾಸ, ಭರವಸೆ ನಿಮ್ಮ ಕೆಲಸಕ್ಕೆ ಸ್ಫೂರ್ತಿದಾಯಕವಾಗಬಹುದು
- ಇಂದು ಹೆಚ್ಚು ಬೆಲೆಬಾಳುವ ವಸ್ತುವಿನ ಖರೀದಿ ಮಾಡಬಹುದು
- ತಂದೆಗೆ ಅನಾರೋಗ್ಯ, ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆಯಿದೆ
- ಅಕ್ಕಪಕ್ಕದವರ ಜೊತೆ ಜಗಳವಾಗಬಹುದು ಆದರೆ ಜಗಳ ಬೇಡ
- ಸೂರ್ಯನಾರಾಯಣನ್ನು ಆರಾಧನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ, ವ್ಯವಹಾರದಲ್ಲಿ ಶಾಂತವಾಗಿ ವರ್ತಿಸುವುದನ್ನು ಪಾಲನೆ ಮಾಡಿ
- ಬೇರೆಯವರನ್ನ ಅಗೌರವದಿಂದ ಕಂಡರೆ ನಿಮ್ಮ ಮಾನಹಾನಿ ಆಗಬಹುದು
- ನಿಮ್ಮ ಬುದ್ಧಿವಂತಿಕೆ ಇಂದು ಕೆಲಸಕ್ಕೆ ಬರುತ್ತದೆ
- ಹೊರಗಡೆ ತಿರುಗಾಡುವುದಕ್ಕೆ ಅವಕಾಶವಿದೆ ಆದರೆ ಮನಸ್ಸಿರುವುದಿಲ್ಲ
- ಇಂದು ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ
- ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಉಂಟುಮಾಡಬಹುದು
- ಶಾಂತಿದುರ್ಗೆಯನ್ನ ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಲಾಭದಾಯಕ ದಿನ, ಲಾಭ ಬರುವುದಕ್ಕೆ ಒಳ್ಳೆ ಸಮಯ
- ಮಧ್ಯಾಹ್ನದ ನಂತರ ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು ಗಮನಿಸಿ
- ಇಂದು ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗುವ ದಿನ
- ನಿಮ್ಮ ಸ್ವಂತಕ್ಕೆ ಸ್ವಲ್ಪ ಸಮಯ ಮಾಡಿಕೊಳ್ಳಿ
- ಮನೆ, ಮಕ್ಕಳು, ಸಂಸಾರಾ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಒಳ್ಳೆಯದಾಗುತ್ತದೆ
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ತುಲಾ ರಾಶಿ
- ಬೇರೆಯವರನ್ನ ಹೊಗಳಿ ನೀವು ಒಳ್ಳೆಯವರೆನಿಸಿಕೊಳ್ಳಬಹುದು
- ಇಂದು ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಬಹುದು
- ಸಹೋದ್ಯೋಗಿಗಳ ಅಥವಾ ಸ್ನೇಹಿತರ ಸಹಾಯ ಸಕಾಲದಲ್ಲಿ ದೊರೆಯುವುದಿಲ್ಲ
- ಇಂದು ಶಾರೀರಿಕವಾಗಿ ತೊಂದರೆ ಕಾಣಬಹುದು
- ಪತಿ-ಪತ್ನಿ ಮಧ್ಯ ಸಾತ್ವಿಕವಾದ ಜಗಳ ಉಂಟಾಗಬಹುದು
- ಚೆನ್ನಾಗಿರುವ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
- ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಾವಶ್ಯಕವಾಗಿ ಒತ್ತಡಗಳಿಗೆ ಒಳಗಾಗಬಹುದು
- ಕಾಲು, ಸ್ನಾಯುಗಳಲ್ಲಿ ನೋವು ಕಾಣಬಹುದು ವಿಶ್ರಾಂತಿ ಬಹಳ ಮುಖ್ಯ
- ಹಣ ಹೂಡಿಕೆಯ ಆಸೆ ಹುಟ್ಟಬಹುದು ಆದರೆ ಬೇಡ
- ಯಾವುದೇ ವಿಚಾರದಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರ ಎಲ್ಲವೂ ಸ್ಪಷ್ಟವಾಗಿ ಇರಬೇಕು
- ಮನೆಯವರ ಜೊತೆ ಸ್ಪಂದಿಸಲು ಇಷ್ಟ ಇರುವುದಿಲ್ಲ ಆದರೆ ಮಾತನಾಡಿ ಪರಿಹಾರ ಕಂಡುಕೊಳ್ಳಿ
- ಸಂಬಂಧಿಕರು ಅಥವಾ ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಬದಲಾಗುತ್ತದೆ
- ಆಂಜನೇಯನ ದೇವಸ್ಥಾನಕ್ಕೆ ಎಳ್ಳೆಣ್ಣೆಯನ್ನು ಅರ್ಪಣೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಬೆಳಗ್ಗೆಯಿಂದ ಏನೋ ಒಂದು ರೀತಿ ಕಿರಿಕಿರಿ ಉಂಟಾಗಬಹುದು ಆದರೆ ತಾಳ್ಮೆಯಿರಲಿ
- ಮನೋರಂಜನೆಗಾಗಿ ಹಣ ಖರ್ಚು ಮಾಡಬಹುದು
- ಯಾವುದೇ ಕೆಲಸವನ್ನು ತುಂಬಾ ಚಿಂತನೆ ಮಾಡುವ ಮೂಲಕ ಮಾಡಿ ಯಶಸ್ಸಿದೆ
- ಉತ್ತಮರ, ಹಿರಿಯರ ಭೇಟಿ ಮಾಡಿ ಅವರ ಮಾತುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ
- ಇಂದು ನಿಮ್ಮ ಒತ್ತಡಗಳನ್ನು ಯಾರ ಮೇಲೂ ಹೆರಬೇಡಿ
- ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನ ತೆಗೆದುಕೊಳ್ಳಬಹುದು
- ಹಸುವಿಗೆ ಅನ್ನ ಮತ್ತು ಬೆಲ್ಲ ಕೊಡಿ, ಗೋ ಸೇವೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ತುಂಬಾ ಆತಂಕ, ಚಿಂತೆಗೆ ಒಳಗಾಗುವ ದಿನ
- ಇಂದು ತಾತ್ಕಾಲಿಕವಾದ ಸಾಲಕ್ಕಾಗಿ ಯಾರದರು ನಿಮ್ಮ ಬಳಿ ಬಂದರೆ ಕೊಡಬೇಡಿ
- ವೈಯಕ್ತಿಕವಾಗಿ, ವೃತ್ತಿಯಲ್ಲಿ ಅಮೋಘವಾದ ಬೆಳವಣಿಗೆಗೆ ಅವಕಾಶವಿದೆ
- ಸ್ವಾಭಿಮಾನಕ್ಕೆ ಧಕ್ಕೆ ಬರುವ ಅವಕಾಶವಿದೆ ಆದರೆ ಅದಕ್ಕೆ ಅವಕಾಶ ಕೊಡಬೇಡಿ
- ನಿಮ್ಮ ಖ್ಯಾತಿ, ಹೆಸರಿಗೆ ಅಪಕೀರ್ತಿ ಬರುವ ಸಾಧ್ಯತೆಯಿದೆ
- ಕುಟುಂಬದ ಸಾಮರಸ್ಯ ಚೆನ್ನಾಗಿರುತ್ತದೆ, ನಿಮ್ಮ ಪ್ರಯತ್ನದಿಂದ ಹಾಗೇ ಉಳಿಯಬೇಕು
- ಶೂಲಿನಿ ದುರ್ಗಿಯನ್ನ ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿಶ್ರಾಂತಿಯ ಜೀವನ ನಡೆಸುವವರಿಗೆ ಲಾಭದ ದಿನ
- ಇಂದು ಹಣದ ಹಿಡಿತ ಕೆಲವು ಸಂದರ್ಭದಲ್ಲಿ ಅವಮಾನ ಮಾಡಬಹುದು
- ಲಾಭದಾಯಕ ದಿನ ಆದರೂ ಕೂಡ ನಿರಾಸೆ ಇರುತ್ತದೆ
- ಇಂದು ಒಂಟಿತನ ಹೆಚ್ಚಾಗಿ ಕಾಡಬಹುದು
- ಹಳೆಯ ಸ್ನೇಹಿತರ, ಬಂಧುಗಳ ಭೇಟಿಗಾಗಿ ಕಾಯುತ್ತೀರಿ ಆದರೆ ಅವಕಾಶ ಸಿಗುವುದಿಲ್ಲ
- ಜೀವನಕ್ಕೆ ತೊಂದರೆಯಿಲ್ಲ ಆದರೆ ಜೀವಕ್ಕೆ ಅಭದ್ರತೆ ಕಾಡಬಹುದು
- ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಶಾರೀರಿಕ, ಮಾನಸಿಕ ಅಶಕ್ತತೆ ಕಾಡುವ ಅನುಭವ ಆಗಬಹುದು
- ನಿಮ್ಮ ಸಾಮರ್ಥ್ಯ ಬಹಳ ಇದ್ದರೂ ಕೂಡ ಕಡಿಮೆಯಾಗ್ತಿದೆ ಎಂಬ ಅನುಭವ ಆಗಬಹುದು
- ಇಂದು ನಿಮ್ಮನ್ನ ನೀವು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ
- ಇಂದು ಚಟುವಟಿಕೆಯನ್ನು ತೋರಿಸಬೇಕು ಆದರೆ ತುಂಬಾ ದೇಹಕ್ಕೆ ಶ್ರಮ ಬೇಡ
- ಜೀವನಕ್ಕೆ ಆಧ್ಯಾತ್ಮಿಕ ಮತ್ತು ವ್ಯಾಪಾರ, ವ್ಯವಹಾರ ಎರಡು ಕ್ಷೇತ್ರ ಬೇಕು ಎಂಬುದನ್ನು ತಿಳಿಯಬೇಕು
- ಆಂಜನೇಯ ಸ್ವಾಮಿ ಸೇವೆಯನ್ನು ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ