ಮನೆಯಲ್ಲಿ ಸಾಕು ಪ್ರಾಣಿಗಳಿದ್ರೆ ಆರೋಗ್ಯ ಕೆಡಬಹುದು ಸೂಕ್ತ ಚಿಕಿತ್ಸೆ ಕೊಡಿಸಿ
ಮನೆಯಲ್ಲಿ ಚಿಕ್ಕಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆ
ನೀವು ಆಡುವ ಮಾತು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು ಎಚ್ಚರಿಕೆ ವಹಿಸಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮ ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಸಂಕಲ್ಪಿಸಬಹುದು
- ಕುಟುಂಬದ ವಾತಾವರಣ ಚೆನ್ನಾಗಿರುತ್ತದೆ
- ದುಬಾರಿ ವಸ್ತುಗಳ ಖರೀದಿಗೆ ಅವಕಾಶವಿದೆ
- ಅಪರಿಚಿತ ವ್ಯಕ್ತಿ ನಿಮಗೆ ಮೋಸ ಮಾಡಲು ಪ್ಲ್ಯಾನ್ ಮಾಡಬಹುದು ವ್ಯವಹರಿಸುವಾಗ ಎಚ್ಚರಿಕೆ
- ಮನೆಯಲ್ಲಿ ಸ್ತ್ರೀಯರಿಗೆ ಮೋಸ ಮಾಡುವ ವಂಚಕರು ವ್ಯಾಪಾರ ರೂಪದಲ್ಲಿ ಬರಬಹುದು
- ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದಾಗ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಬಹುದು
- ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು
- ಅಪರಿಚಿತರ ಮೇಲೆ ನಂಬಿಕೆ ಬೇಡ
- ನಿಮ್ಮ ಮಾತಿನಲ್ಲಿ ನಮ್ರತೆಯಿರಲಿ
- ನೀವು ಆಡುವ ಮಾತು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು ಎಚ್ಚರಿಕೆವಹಿಸಿ
- ಇಂದು ತೋರಿಕೆ ಕೆಲಸ ಮಾಡಬೇಡಿ
- ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಆರೋಗ್ಯ ಕೆಡಬಹುದು ಸೂಕ್ತ ಚಿಕಿತ್ಸೆ ಕೊಡಿಸಿ
- ಕುಲದೇವತ ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ
- ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಲ್ಲ
- ಇಂದು ನಿಮ್ಮ ಸ್ವಭಾವ ಶಾಂತವಾಗಿರಲಿ
- ಮನೆಯಲ್ಲಿ ಚಿಕ್ಕಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆ
- ಬೇಡದಿರುವ ಆಪಾದನೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಗಮನಿಸಿ
- ಗುರು ದತ್ತಾತ್ರೇಯ ಮತ್ತು ಔದುಂಬರ ವೃಕ್ಷವನ್ನು ದರ್ಶನ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮಕ್ಕಳ ಮದುವೆ ವಿಚಾರದಲ್ಲಿ ಬರುತ್ತಿದ್ದ ತೊಂದರೆಗಳು ಸಮಸ್ಯೆಗಳು ದೂರವಾಗಬಹುದು
- ಇಂದು ನಿಮ್ಮ ಆದಾಯ ಹೆಚ್ಚಾಗಬಹುದು
- ಸ್ನೇಹಿತರೊಂದಿಗೆ ಕಾಲ ಕಳೆಯುವಂತಹ ಅವಕಾಶಗಳಿವೆ
- ಇಂದು ಸಾಧುಗಳ, ಯೋಗಿಗಳ ದರ್ಶನವಾಗಬಹುದು ಶುಭವಿದೆ
- ನಿಮ್ಮ ಗುರುಗಳನ್ನ ಸ್ಮರಣೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲವು ಜಟಿಲ ಕೆಲಸಗಳು ಇಂದು ಸಕಾಲಕ್ಕೆ ಪೂರ್ಣವಾಗಿ ಆಶ್ಚರ್ಯವಾಗಬಹುದು
- ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗಬಹುದು
- ಕೆಲಸ, ವ್ಯವಹಾರದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯಬಹುದು
- ಆಕಸ್ಮಿಕವಾಗಿ ಸ್ನೇಹಿತರ ಭೇಟಿ ನಿಮ್ಮ ಬಲ ಹೆಚ್ಚಿಸಬಹುದು
- ಪ್ರೇಮಿಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆಗಳಿವೆ
- ಇಂದು ದಂಪತಿಗಳಿಗೆ ಸುಖ ಸಮಯ
- ಭವಿಷ್ಯದ ಬಗ್ಗೆ ಯಾವುದೇ ಚಿಂತೆಕಾಡದ ದಿನ
- ಶನೈಶ್ಚರನನ್ನ ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಮಂಗಳ ಕಾರ್ಯದ ಪ್ರಸ್ತಾಪವಾಗಿ ಮನಸ್ಸಿಗೆ ತುಂಬಾ ಆನಂದವಾಗುತ್ತದೆ
- ಹೊಸ ಹೊಸ ವಿಚಾರಗಳು ವ್ಯವಹಾರಗಳು ಮನಸ್ಸಿಗೆ ಬಂದು ಉತ್ಸುಕರಾಗುತ್ತೀರಿ
- ಸಂಬಂಧಿಕರು, ಸ್ನೇಹಿತರು ತಮ್ಮ ಮನೆಗೆ ಬರಬಹುದು
- ತುಂಬಾ ದಿನಗಳಿಂದ ಸಮಸ್ಯೆಯಾಗಿ ಉಳಿದಿದ್ದ ಯಾವುದೋ ಒಂದು ವ್ಯವಹಾರ ಸುಖಾಂತ್ಯ ಕಾಣಬಹುದು
- ನಿಮ್ಮ ಸಂತೋಷಕ್ಕೆ ಸಂಬಂಧಿಕರು ಜೊತೆಯಲ್ಲಿ ಇರುತ್ತಾರೆ
- ದೂರದಿಂದ ಶುಭ ಸುದ್ದಿಯು ನಿಮಗೆ ಹರ್ಷದಾಯಕವಾಗಿರುತ್ತದೆ
- ಮನೆ ದೇವರ ಪ್ರಾರ್ಥನೆ ಮಾಡಿ ತುಪ್ಪದ ದೀಪ ಹಚ್ಚಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ನಿಮಿತ್ಯದಿಂದ ನಿಮ್ಮ ದಿನಚರಿ ಬದಲಾವಣೆಯಾಗಬಹುದು
- ನಿರೀಕ್ಷಿತ ಸಾಧನೆ ಮಾಡಲಾಗದೇ ಕೋಪ ಹೆಚ್ಚಾಗಬಹುದು ಆದರೆ ತಾಳ್ಮೆ ಇರಲಿ
- ಸಾಲದ ವಿಚಾರವಾಗಿ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ವಾತಾವರಣ ಇರುವುದಿಲ್ಲ
- ಕುಟುಂಬದಲ್ಲಿ ಅಸಮಾಧಾನ ವಾತಾವರಣ ಉಂಟಾಗಬಹುದು
- ಋಣಾತ್ಮಕವಾದ ಸಂದರ್ಭಗಳಲ್ಲಿ ಹೊಂದಿಕೊಂಡು ಹೋಗುವುದು ನಿಮಗೆ ಒಂದು ಸವಾಲಾಗಿರುತ್ತದೆ
- ಇಂದು ಯಾವುದೇ ಕೆಲಸ ಧೃತಿಗೆಡದೆ ನಿಭಾಯಿಸುತ್ತೀರಿ
- ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಸಮಾಧಾನಕರವಾದ ಮಾತುಗಳನ್ನು ಆಡುತ್ತಿರುವಾಗ ಹಠಾತನೆ ಆರೋಗ್ಯದಲ್ಲಿ ಏರುಪೇರು ಕಾಣಬಹುದು
- ಸಂತೋಷದಿಂದ ಕಳೆಯಬೇಕಾದ ದಿನ ನಿಮ್ಮ ಪಾಲಿಗೆ ತುಂಬಾ ಪರೀಕ್ಷೆಯ ದಿನವಾಗಿ ಪರಿಣಮಿಸುತ್ತದೆ ಕುಟುಂಬದವರಿಗೆ, ಸಂಬಂಧಿಕರಿಗೆ ತುಂಬಾ ಆತಂಕ ಉಂಟಾಗಬಹುದು
- ನಿಮ್ಮ ಪರವಾಗಿ ಶಕ್ತಿ ದೇವಾಲಯದಲ್ಲಿ ಪೂಜೆ ವ್ಯವಸ್ತೆ ಮಾಡಿ
- ಭಗವಂತನ ಅನುಗ್ರಹದಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
- ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳ ಬೇಡಿ
- ಶಕ್ತಿ ದೇವತೆಯನ್ನ ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಹಳೆಯ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗುತ್ತೀರಿ
- ಹೊಸ ವಾಹನ ಖರೀದಿಗೆ ಅವಕಾಶವಿದೆ
- ಪ್ರೀತಿ ಪ್ರೇಮ ವಿಚಾರಗಳನ್ನು ತುಂಬಾ ಭಾವುಕರಾಗಿ ನೋವನ್ನು ಅನುಭವಿಸಬೇಕಾಗುತ್ತದೆ
- ಸಹೋದ್ಯೋಗಿಗಳು, ಅಕ್ಕಪಕ್ಕದವರು ಸಮಾಧಾನ ಅಥವಾ ಸಹಾಯ ಮಾಡಬಹುದು
- ಇಂದು ಪ್ರಯಾಣವು ಅಷ್ಟು ಶುಭವಾಗಿಲ್ಲ
- ವಿದ್ಯಾರ್ಥಿಗಳಿಗೆ ಬೇಸರವಾಗುವ ದಿನ
- ನೀವು ಮಾನಸಿಕವಾಗಿ ಒತ್ತಡದಿಂದ ಹೊರಬಂದರೆ ನಿಮ್ಮ ಸಮಸ್ಯೆ ದೂರವಾಗಬಹುದು
- ಚಂದ್ರ ಗ್ರಹದ ಆರಾಧನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾತೆಯ ಆರೋಗ್ಯದಲ್ಲಿ ತುಂಬಾ ವ್ಯತ್ಯಾಸಗಳು ಕಾಣಬಹುದು
- ಸಂಬಂಧಿಕರಲ್ಲಿ ವ್ಯವಹಾರಿಕ ವಿಚಾರಗಳಲ್ಲಿ ಕಹಿ ಸನ್ನಿವೇಶಗಳು ಬರುತ್ತಂತೆ ಗಮನಿಸಿ
- ಮಾತುಗಳಲ್ಲಿ ಮೃದುತ್ವ ಇರಲಿ
- ಬಂಧುಗಳು ಹಳೆಯ ವಿಷಯಗಳನ್ನು ಮತ್ತೆ ಮತ್ತೆ ಜ್ಞಾಪಿಸಿ ನಿಮ್ಮನ್ನು ಕೆರಳಿಸಬಹುದು
- ಇಂದು ನಿಮ್ಮ ತಾಳ್ಮೆ ತುಂಬಾ ಮುಖ್ಯ, ತಾಳ್ಮೆ ಪರೀಕ್ಷೆಯಾಗಬಹುದು
- ತಾಳ್ಮೆ ಮರೆತರೆ ದೊಡ್ಡ ಗಲಾಟೆಗಳಾಗಬಹುದು ಎಚ್ಚರ
- ಧ್ಯಾನಕ್ಕೆ ಶರಣು ಹೋಗಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಲಿದೆ
- ವೃತ್ತಿ, ನೌಕರಿಗೆ ಸಂಬಂಧಿಸಿದ ಬೇರೆ ಆಲೋಚನೆಗಳು ಬರಬಹುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು
- ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಬಹುದು
- ಮಕ್ಕಳ ವಿದ್ಯಾಭ್ಯಾಸ ಮತ್ತು ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾದ ಸವಾಲು ನಿಮ್ಮನ್ನು ಕಾಡಬಹುದು
- ಕೂಡಿಟ್ಟಿದ ಹಣದ ಬಗ್ಗೆ ಪ್ರಸ್ತಾಪ ಮಾಡಿ ನಿಷ್ಠುರವಾಗುವ ಸಾಧ್ಯತೆಗಳಿವೆ
- ಕುಬೇರ-ಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಪೂಜೆ, ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಸಬಹುದು
- ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನ ಮಾಡಿಸಬೇಕೆಂಬ ಆಸೆ ಈಡೇರಬಹುದು
- ಮಾನಸಿಕವಾಗಿ ತುಂಬಾ ಸಂತೋಷದಿಂದ ಇರುತ್ತೀರಿ
- ಆಹಾರದ ಅಗತ್ಯ ಇರುವವರಿಗೆ ಅನ್ನದಾನ ಮಾಡಿ
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ