/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮಘಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಮೇಷ ರಾಶಿ
- ಇಂದು ಸಾಧಾರಣವಾದ ದಿನ ಯಾವುದೇ ಆತಂಕ ಬೇಡ
- ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಆಶ್ರಯಿಸಬಹುದು
- ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಬೇಡ
- ಈ ದಿನ ಹಣದ ಚಿಂತೆ ಕಾಡಬಹುದು
- ಮನೆಯ ವಾತಾವರಣ ಗೌಪ್ಯವಾಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವೃಷಭ
- ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಬಹುದು
- ಸಂಬಂಧಿಕರಲ್ಲಿ ಬಾಂಧವ್ಯ ಗಟ್ಟಿಯಾಗಲಿದೆ
- ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
- ಕಾರ್ಯಕ್ಷೇತ್ರದಲ್ಲಿ ಗೌರವ ಮನ್ನಣೆ ಸಿಗಲಿದೆ
- ಅನಗತ್ಯ ವಿವಾದ ಸೃಷ್ಟಿಯಾಗುವುದರಿಂದ ಬೇಸರವಾಗಬಹುದು
- ಇಂದು ದೂರ ಪ್ರಯಾಣ ಬೇಡ ರದ್ದಾಗುವ ಸಾಧ್ಯತೆ ಇದೆ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ವ್ಯಾವಹಾರಿಕ, ವೃತ್ತಿ ಅಥವಾ ವಿದ್ಯಾಕ್ಷೇತ್ರದಲ್ಲಿ ಉತ್ತಮ ಫಲಿತಾಂಶವಿದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
- ಹೊಸ ಸಂಪರ್ಕಗಳಿಂದ ಅನುಕೂಲವಿದೆ
- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ
- ಖಾಸಗಿ ನೌಕರರಿಗೆ ಪ್ರಯಾಣದ ಅವಕಾಶವಿದೆ
- ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ಕಟಕ
- ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಬೇಡ
- ಪತಿ-ಪತ್ನಿಯರ ಮಧ್ಯೆ ಸಾಮರಸ್ಯವಿರಲಿ
- ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
- ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
- ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಅರ್ಚಿಸಿ
ಸಿಂಹ
- ಭರವಸೆ ನೀಡಬಾರದೆಂದು ಹೇಳಬೇಕಾದ ದಿನ
- ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶವಿದೆ
- ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
- ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆ ಇದೆ
- ಒಡಹುಟ್ಟಿದವರೊಡನೆ ಘರ್ಷಣೆ ಅಶಾಂತಿ ಇರಲಿದೆ
- ಈ ದಿನ ಪ್ರೇಮಿಗಳಿಗೆ ಶುಭವಿದೆ
- ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
- ಇಂದು ಮಾತಿನಿಂದ ಅವಮಾನವಾಗಬಹುದು
- ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದ ದಿನ
- ಮಕ್ಕಳ ಚಟುವಟಿಕೆ ಅಥವಾ ಸ್ವಭಾವ ಬೇಸರ ತರಬಹುದು
- ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
- ದೇವಿ ಉಪಾಸನೆ ಮಾಡಿ
ತುಲಾ
- ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಗಂಟಲಿನ ಸಮಸ್ಯೆ ಅಧಿಕವಾಗಿ ಕಾಡಬಹುದು
- ನವ ವಿವಾಹಿತರಿಗೆ ಶುಭ ಸುದ್ದಿ
- ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
- ಸ್ನೇಹಿತರೊಂದಿಗೆ ಉತ್ತಮ ಬಾಂದವ್ಯವಿರಲಿದೆ
- ಕೆಲಸಕ್ಕಾಗಿ ಜನರ ಹುಡುಕಾಟ ವಿಫಲವಾಗಲಿದೆ
- ಸಾಲಿಗ್ರಾಮ ವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಬೇಡ
- ನಕಾರಾತ್ಮಕ ಆಲೋಚನೆಯಿಂದ ದೂರವಿರಿ
- ನಿಮ್ಮ ಕಾರ್ಯ ವೈಖರಿಯಿಂದ ಟೀಕೆಗೆ ಗುರಿಯಾಗಬಹುದು
- ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿಯಾಗಬಹುದು
- ವಾಹನ ಚಾಲನೆಯಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಪ್ರಾಣಿಗಳಿಗೆ ಆಹಾರ ನೀಡಿ
ಧನುಸ್ಸು
- ಸಿಹಿ ಸುದ್ಧಿ ಕೇಳುತ್ತೀರಿ ಆದರೂ ಸಮಾಧಾನವಿಲ್ಲ
- ಮನಸ್ಥಿತಿ ಬದಲಾಯಿಸಿಕೊಳ್ಳಬೇಕು
- ನಂಬಿದವರಿಂದ ವಂಚನೆಯಾಗುವ ಸೂಚನೆಯಿದೆ
- ವೈವಾಹಿಕ ಜೀವನದಲ್ಲಿ ಬದುಕು ಕಾಣಬಹುದು
- ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ
- ಈ ದಿನ ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವವಿದೆ
- ಧ್ಯಾನಕ್ಕೆ ಶರಣು ಹೋಗಿ
ಮಕರ
- ಈ ದಿನ ಹಣ ಹೂಡಿಕೆ ಬೇಡ
- ಆಸೆ ಅಥವಾ ತೃಪ್ತಿ ಅಥವಾ ಸಮಾಧಾನ ಇವೆಲ್ಲಾ ವಿರುದ್ಧವಾಗುವ ದಿನ
- ಮನೆಗೆ ಬಂದ ಅತಿಥಿಗಳೊಂದಿಗೆ ವ್ಯವಹಾರ ಮಾಡುತ್ತೀರಿ
- ಪಾಲುದಾರಿಕೆ ಅಥವಾ ಬಡ್ಡಿ ವ್ಯವಹಾರದಲ್ಲಿ ಲಾಭವಿದೆ
- ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಬಹುದು
- ಸಮಾಜದಲ್ಲಿ ಪರೋಕ್ಷವಾಗಿ ಅಪಖ್ಯಾತಿಗೆ ಒಳಗಾಗುತ್ತೀರಿ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಕುಂಭ
- ವಿದೇಶದಿಂದ ಸಿಹಿ ಸುದ್ದಿ ಬರಬಹುದು
- ಅಪರಿಚಿತರಿಂದ ದ್ರೋಹ ಸಾಧ್ಯತೆ
- ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರವಾಗಬಹುದು
- ಬೇರೆಯವರನ್ನು ಸಂಪೂರ್ಣ ಅವಲಂಬಿಸಬೇಡಿ
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಿದೆ
- ಕೃಷಿ ಕೆಲಸ ಅಥವಾ ಜಮೀನು ಸಂಬಂಧೀ ಕೆಲಸಗಳಲ್ಲಿ ನಷ್ಟವಾಗಬಹುದು
ಮೀನ
- ವೈಯಕ್ತಿಕ ಜೀವನದಲ್ಲಿ ಬೇಸರ,ಅಶಾಂತಿ, ಕೋಪ ಉಂಟಾಗಬಹುದು
- ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ತೊಂದರೆಯಾಗಬಹುದು
- ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
- ಸಾಲ ಪಡೆದ ವ್ಯಕ್ತಿಗಳು ತಿರುಗಿ ಬೀಳಬಹುದು ನಷ್ಟದ ಸೂಚನೆ
- ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರವಾಗಬಹುದು
- ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
- ವಿಷ್ಣುವಿಗೆ ಜೇನುತುಪ್ಪದ ಅಭಿಷೇಕ ಮಾಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ