/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ ದಕ್ಷಿಣಾಯಣ ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಹಸ್ತಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಮೇಷ ರಾಶಿ
- ಮನೆಯ ಸದಸ್ಯರ ಯೋಗ ಕ್ಷೇಮ ವಿಚಾರಿಸಿ
- ಹವಾಮಾನ ವೈಪರೀತ್ಯದಿಂದ ಆರೋಗ್ಯ ವ್ಯತ್ಯಯ ಆಗಬಹುದು
- ದಾಯಾದಿಗಳಲ್ಲಿ ವೈಮನಸು ಉಂಟಾಗಬಹುದು
- ವಿದ್ಯಾರ್ಥಿಗಳಿಗೆ ಕಠಿಣ ಶ್ರಮ ಮಾತ್ರ ಕೆಲಸ ಮಾಡುತ್ತದೆ
- ಕಹಿಯಾದ ಮಾತುಗಳಿಂದ ದೂರವಿರಿ
- ಹಣದ ವಿಚಾರದಲ್ಲಿ ಗಮನವಿರಲಿ
- ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ತುಂಬಾ ಜವಾಬ್ದಾರಿ ಕಾಣುವ ದಿನ
- ನಿಂತ ಕೆಲಸಗಳು ಪುನಃ ಪ್ರಾರಂಭವಾಗಲಿದೆ
- ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
- ಇಂದು ನಿರೀಕ್ಷಿತ ಲಾಭವಿರಲಿದೆ
- ಎರಡನೇ ಮತ್ತು ಮೂರನೇ ಮದುವೆ ಮಾಡಿಕೊಳ್ಳುವವರಿಗೆ ಶುಭವಿದೆ, ಕಾನೂನು ತಿಳಿಯಿರಿ
- ಪ್ರೇಮಿಗಳಿಗೆ ಶುಭದಿನ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಮಿಥುನ
- ಕುಟುಂಬದವರಿಂದಲೇ ಟೀಕೆ ಬರಬಹುದು
- ಅನಾರೋಗ್ಯ ಸಮಸ್ಯೆ ಕಾಡಬಹುದು ಆದರೆ ತೊಂದರೆಯಿಲ್ಲ
- ವೃತ್ತಿ, ನೌಕರಿಯಲ್ಲಿ ತೊಂದರೆಯಾಗಬಹುದು
- ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು
- ಕೆಲಸದ ಒತ್ತಡ ಜವಾಬ್ದಾರಿಯಿಂದ ವರ್ತಿಸ ಬೇಕಾಗಲಿದೆ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಕೆಲಸದ ನಿಮಿತ್ತ ಪ್ರಯಾಣ ಶುಭವಿದೆ
- ಮನೆಯವರ ಸಹಕಾರ ಯಶಸ್ವಿಗೆ ಕಾರಣವಾಗಲಿದೆ
- ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಲಿದೆ
- ಮನೆಯಲ್ಲಿ ಸಂತೋಷ ಇರಲಿದೆ
- ಮಕ್ಕಳಿಂದ ಸಮಾಧಾನ ಸಿಗಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಸಪ್ತ ಮಾತೃಕೆಯರನ್ನು ಪೂಜಿಸಿ
ಸಿಂಹ
- ಆರೋಗ್ಯದ ಬಗ್ಗೆ ನಿರ್ಲಕ್ಷಿಸಬೇಡಿ
- ಮನಸ್ಸಿಗೆ ಹಿಡಿಸುವ ಕೆಲಸ ಮಾಡಿ
- ವ್ಯವಹಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯಬಹುದು
- ಇಂದು ಉದ್ಯೋಗ ಅವಕಾಶಗಳಿವೆ
- ಬೇರೆಯವರ ಮಾತಿನಿಂದ ಕೆಲಸ ಹಾಳಾಗಬಹುದು
- ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳಿ
- ಶಿವರಾಧನೆ ಮಾಡಿ
ಕನ್ಯಾ
- ದಂಪತಿಗಳಲ್ಲಿ ವೈಮನಸ್ಯವಿದ್ದರೆ ಬಗೆಹರಿಸಿಕೊಳ್ಳಿ
- ಇಂದು ನಿಮ್ಮ ಕೆಲಸದಿಂದ ಅನುಕೂಲವಿದೆ
- ಮಕ್ಕಳ ವಿಚಾರಕ್ಕಾಗಿ ಸ್ವಲ್ಪ ಸಮಯ ಕೊಡಿ
- ಈ ದಿನ ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು
- ಅನುಪಯುಕ್ತ ವಿಚಾರದಲ್ಲಿ ಸಮಯ ಹಾಳು ಮಾಡಬೇಡಿ
- ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
- ನಾಗದೇವತೆಯನ್ನು ಪೂಜಿಸಿ
ತುಲಾ
- ಗುಪ್ತ ರಹಸ್ಯ ವಿಷಯಗಳ ಬಗ್ಗೆ ಗಮನ ಕೊಡಿ
- ಅತಿಯಾದ ನಂಬಿಕೆ ಒಳಿತಲ್ಲ
- ಆಹಾರದ ಬಗ್ಗೆ ಗಮನವಿರಲಿ
- ಬೇರೆಯವರಿಂದ ನಿಮ್ಮ ವೃತ್ತಿ, ನೌಕರಿಗೆ ತೊಂದರೆಯಾಗಬಹುದು
- ಹೊಸ ಕೆಲಸದ ಆರಂಭ ಬೇಡ
- ನಿಮ್ಮ ಪ್ರಯತ್ನ ನಿರಂತರವಾಗಿರಲಿ
- ಸೂರ್ಯನಾರಾಯಣನನ್ನು ಪೂಜಿಸಿ
ವೃಶ್ಚಿಕ
- ಸ್ನೇಹಿತರ ಒಲವು ನಿಮಗೆ ಸಹಾಯ ಮಾಡುತ್ತದೆ
- ವ್ಯವಹಾರದಲ್ಲಿ ಅನುಕೂಲ ಆಗಲಿದೆ
- ಪ್ರವಾಸದಿಂದ ಸಂತೋಷ ಆಗಲಿದೆ
- ಯಾವುದೇ ಸೋಂಕು ತಗಲದಂತೆ ಎಚ್ಚರವಹಿಸಿ
- ಮನೆಯಲ್ಲಿ ವಿವಾದಗಳು ಬೇಡ
- ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ
- ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ದಿನಚರಿಯನ್ನು ಶಿಸ್ತುಬದ್ಧ ಮಾಡಿಕೊಳ್ಳಿ
- ಸ್ನೇಹಿತರ ಆಹ್ವಾನದಿಂದ ಸಂತೋಷವಾಗಲಿದೆ
- ಯಾರನ್ನು ದೂಷಿಸಬೇಡಿ, ದ್ವೇಷಿಸಬೇಡಿ
- ಈ ದಿನ ಕುಟುಂಬದ ವಿಚಾರ ಪ್ರಸ್ತಾಪ ಬೇಡ
- ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
- ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿ
- ದುರ್ಗಾರಾಧನೆ ಮಾಡಿ
ಮಕರ
- ಇಂದು ಆದಾಯ ಸ್ಥಿರವಾಗಿರುತ್ತದೆ
- ವೈವಾಹಿಕ ಜೀವನದಲ್ಲಿ ಗೊಂದಲದ ಮಾತು
- ಇಂದು ಮನಸ್ಸು ಶಾಂತವಾಗಿರುವುದಿಲ್ಲ
- ಈ ದಿನ ಶಾಸ್ತ್ರೀಯ ಸಂಗೀತದ ಮೊರೆ ಹೋಗಿ
- ನಿಮ್ಮ ವಿರೋಧಿಗಳಿಂದ ತೊಂದರೆಯಾಗಬಹುದು
- ಪ್ರೇಮಿಗಳಿಗೆ ತೊಂದರೆ ಉಂಟಾಗಬಹುದು
- ಬೇರೆಯವರ ಅಭಿಪ್ರಾಯಕ್ಕೆ ಅವಕಾಶವಿರಲಿ
- ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿವೆ ಬಗೆಹರಿಸುವ ಪ್ರಯತ್ನವಿರಲಿ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ಬೇರೆಯವರಿಂದ ಏನೂ ನಿರೀಕ್ಷಿಸಬೇಡಿ
- ನಿಮ್ಮ ಗೌರವಕ್ಕೆ ಧಕ್ಕೆ ಬರದಂತೆ ಎಚ್ಚರಿಕೆವಹಿಸಿ
- ಅತಿಥಿಗಳ ಆಗಮನ, ಚರ್ಚೆ ಮಾಡುವುದರಿಂದ ಬೇಸರ ಆಗಬಹುದು
- ಸ್ಥಿರಾಸ್ತಿ ವಿವಾದಗಳು ಉದ್ಭವವಾಗಬಹುದು
- ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ
ಮೀನ
- ಇಂದು ಲಾಭದ ದಿನ
- ಮಕ್ಕಳ ಸಾಧನೆ ಗೌರವ ತರುತ್ತದೆ
- ಸಂಬಂಧಿಕರ ಜೊತೆ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಬಹುದು
- ಸಹದ್ಯೋಗಿಗಳಿಗೆ ಅನುಕೂಲವಿದೆ
- ಆರೋಗ್ಯ ಸುಧಾರಣೆಯಾಗಲಿದೆ
- ಮನೆಯವರ ಸಹಕಾರ ಎಲ್ಲವೂ ಜಯ ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ