/newsfirstlive-kannada/media/post_attachments/wp-content/uploads/2025/01/dancer-death1.jpg)
ಬೆಂಗಳೂರು: ನಿಜಕ್ಕೂ ಇದು ಕರುಣಾಜನಕ ಸ್ಟೋರಿ.. ತೇಜಸ್ವಿನಿ ಅನ್ನೋ ಈ ನತದೃಷ್ಟ ಹುಡುಗಿ ಒಳ್ಳೆ ಡ್ಯಾನ್ಸರ್ ಆಗುವ ಕನಸು ಕಂಡಿದ್ದಳು. ಶಾಲೆಯ ಜೊತೆಗೆ ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಳು. ಆದರೆ ಘೋರ ವಿಧಿ ಈ ಮಗುವನ್ನ ಪರಲೋಕಕ್ಕೆ ಇಷ್ಟು ಬೇಗ ಕರೆದುಕೊಂಡು ಬಿಟ್ಟಿದೆ.
ಬೆಂಗಳೂರಿನ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಘನ ಘೋರ ದುರಂತವೊಂದು ನಡೆದಿದೆ. 15 ವರ್ಷದ ಈ ತೇಜಸ್ವಿನಿ ಇಂದು ಮಧ್ಯಾಹ್ನ 12 ಗಂಟೆಗೆ ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುತ್ತಾ ಇದ್ದಳು. ಈ ಹುಡುಗಿ ಮೇಲೆ ಕಟ್ಟಡ ನಿರ್ಮಾಣದ ಸೆಂಟ್ರಿಂಗ್ಗೆ ಬಳಸುವ ಸಾರವೆ ಮರ ಬಿದ್ದಿದೆ.
/newsfirstlive-kannada/media/post_attachments/wp-content/uploads/2025/01/Bangalore-Girl-Death.jpg)
ಕಟ್ಟಡ ಕಾಮಗಾರಿ ನಡೆಯುತ್ತಿದ್ದ 4ನೇ ಮಹಡಿಯಿಂದ ಸಾರವೆ ಮರ ತೇಜಸ್ವಿನಿಯ ಮೇಲೆ ಬಿದ್ದಿದೆ. ಮೇಲಿಂದ ಮರ ಬಿದ್ದ ರಭಸಕ್ಕೆ ತೇಜಸ್ವಿನಿ ಸ್ಥಳದಲ್ಲಿ ಜೀವ ಬಿಟ್ಟಿದ್ದಾರೆ.
ಸುಧಾಕರ್, ಧನಲಕ್ಷ್ಮಿ ದಂಪತಿಯ ಮಗಳು ತೇಜಸ್ವಿನಿ. ಇವತ್ತು ಶನಿವಾರ ಆದ ಕಾರಣ ಸ್ಕೂಲ್ ಮುಗಿಸಿ ಡ್ಯಾನ್ಸ್ ಕ್ಲಾಸ್ಗೆ ಹೋಗಿದ್ದಳು. ಡ್ಯಾನ್ಸ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿರೋವಾಗ ಈ ದುರ್ಘಟನೆ ನಡೆದಿದೆ.
/newsfirstlive-kannada/media/post_attachments/wp-content/uploads/2025/01/dancer-death.jpg)
ತೇಜಸ್ವಿನಿ ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ಡ್ಯಾನ್ಸ್ ತರಬೇತಿ ಪಡೆಯುತ್ತಿದ್ದಳು. ಸ್ಕೂಲ್ ಡೇ ಸೇರಿದಂತೆ ಕೆಲವು ವೇದಿಕೆಯಲ್ಲಿ ತೇಜಸ್ವಿನಿ ಅದ್ಭುತ ಡ್ಯಾನ್ಸ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಳು. ಕಟ್ಟಡ ಕಾಮಗಾರಿ ನಡೆಯುತ್ತಿದ್ದ 4ನೇ ಮಹಡಿಯಿಂದ ಸಾರವೆ ಮರ ಬಿದ್ದು ಈ ಬಾಲಕಿ ಇಹಲೋಕವನ್ನು ತ್ಯಜಿಸುವಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us