/newsfirstlive-kannada/media/post_attachments/wp-content/uploads/2024/09/BLY-DARSHAN-4.jpg)
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್​ಗೆ ಕಾಟೇರ ಸಿನಿಮಾದಿಂದ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಅಭಿಮಾನಿಗಳ ಮನಗೆದ್ದ ಕಾಟೇರ ಸಿನಿಮಾ ನಾಲ್ಕು ಅವಾರ್ಡ್​​ಗಳನ್ನ ಗೆದ್ದಿದೆ.
ದರ್ಶನ್ ನಟನೆಯ ಕಾಟೇರ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ. ಕಾಟೇರ ಸಿನಿಮಾಗೆ ಅತ್ಯುತ್ತಮ ಕನ್ನಡ ಸಿನಿಮಾ ಸೈಮಾ ಪ್ರಶಸ್ತಿ ಲಭಿಸಿದೆ. ಆ ಕಡೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಜೈಲಿನಲ್ಲಿದ್ದರೆ, ಇತ್ತ ದಾಸ ನಟನೆಯ ಸಿನಿಮಾಗೆ ಪ್ರಶಸ್ತಿ ಬಂದಿದೆ.
ಇದನ್ನೂ ಓದಿ: ನಿವೇದಿತಾ ಗೌಡ ಹೊಸ ಚಮತ್ಕಾರ.. ಅದು ಜಾಸ್ತಿ ಆಯ್ತು ಕಣಮ್ಮ ಅಂದಿದ್ದೇಕೆ ಫ್ಯಾನ್ಸ್​!
ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮ ಕಾಟೇರ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಈ ಬಾರಿಯ ಸೈಮಾದಲ್ಲಿ ದರ್ಶನ್ ಸಿನಿಮಾ ಅಬ್ಬರಿಸಿದೆ. ಅತ್ಯುತ್ತಮ ಸಿನಿಮಾ ಸೇರಿ ನಾಲ್ಕು ಪ್ರಶಸ್ತಿಯನ್ನು ಕಾಟೇರ ಬಾಚಿಕೊಂಡಿದೆ.
/newsfirstlive-kannada/media/post_attachments/wp-content/uploads/2024/01/Kaatera.jpg)
ಚೊಚ್ಚಲ ನಟನೆಗೆ ಆರಾಧನಾ ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ಪಡೆದಿದ್ದಾರೆ. ವಿ.ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಿಂಗರ್ ಮಂಗ್ಲಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: ದರ್ಶನ್​ಗಾಗಿ ಬಳ್ಳಾರಿ ಜೈಲಿಗೆ ಬಂತು ಲೆಟರ್​.. ಕಳುಹಿಸಿದ್ಯಾರು? ಅದರಲ್ಲೇನಿತ್ತು?
ದರ್ಶನ್​​ಗೂ ಕಾಟೇರ ಸಿನಿಮಾದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಮೇಲೆ ಸಿಗಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ನಟನೆ ವಿಭಾಗದಲ್ಲಿ ಅವಾರ್ಡ್ ಸಿಕ್ಕಿಲ್ಲ. ಆದರೂ ಕಾಟೇರ 4 ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us