/newsfirstlive-kannada/media/post_attachments/wp-content/uploads/2024/06/DARSHAN_PAVITRA-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಸಾಕ್ಷಿ ಮತ್ತು ತನಿಖೆಯನ್ನು ನಡೆಸುತ್ತಲೇ ಇದ್ದಾರೆ. ಆದರೆ ಇದೀಗ ತನಿಖೆ ವೇಳೆ ನಟ ದರ್ಶನ್​​ ಹೆಸರಿನಲ್ಲಿ ಒರಿಜಿನಲ್​ ಸಿಮ್​ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಮೂರನೇ ವ್ಯಕ್ತಿಯ ಹೆಸರಿನಲ್ಲಿ ದರ್ಶನ್​ ಸಿಮ್​ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿ ದರ್ಶನ್​ಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ಜುಲೈ 18ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಆದರೆ ಅತ್ತ ಪೊಲೀಸರು ಈ ಕೇಸ್​ಗೆ ಸಂಬಂಧಿಸಿ ಸರಿಯಾದ ತನಿಖೆ ಮಾಡುತ್ತಲೇ ಇದ್ದಾರೆ. ಅದರಂತೆಯೇ ದರ್ಶನ್​​ ಬಳಸುತ್ತಿರುವ ಸಿಮ್​ ಯಾರದ್ದು ಎಂದು ಪರಿಶೀಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan57-1.jpg)
ದರ್ಶನ್​ ಫೇಕ್​ ಸಿಮ್​ ಬಳಸುತ್ತಿದ್ರಾ?
ದರ್ಶನ್​ ಪ್ರಕಾಶ್ ನಗರದ ಮೂಲದ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವ ಸಿಮ್​ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೇಮಂತ್ ಎಂಬ ವ್ಯಕ್ತಿಯ ಹೆಸರಲ್ಲಿ ಈ ಸಿಮ್​ ಇದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಮದುವೆಯಾದ ಕೇವಲ 2 ಗಂಟೆಯಲ್ಲಿ ವರ ಸಾವು.. ತಲೆ ಸುತ್ತು ಬಂದು ನೆಲಕ್ಕೆ ಬಿದ್ದ ವಧು
/newsfirstlive-kannada/media/post_attachments/wp-content/uploads/2024/06/Pavitra-Gowda-5-1.jpg)
ಪವಿತ್ರ ಬಳಿಯೂ ಒರಿಜಿನಲ್​ ಸಿಮ್​ ಇಲ್ವಾ?
ಇವಿಷ್ಟು ಮಾತ್ರವಲ್ಲ, ನಟಿ ಪವಿತ್ರ ಗೌಡ ಬಳಿಯು ಒರಿಜಿನಲ್​ ಸಿಮ್​ ಇಲ್ಲ ಎಂಬುದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆ ಕೂಡ ಫೇಕ್​ ಸಿಮ್​ ಬಳಸುತ್ತಿದ್ದಾಳೆ ಎನ್ನಲಾಗುತ್ತಿದೆ. ಬಸವೇಶ್ವನಗರದ ನರಸಿಂಹಲು ಹೆಸರಲ್ಲಿ ಪವಿತ್ರ ಗೌಡ ಬಳಸುತ್ತಿರುವ ಸಿಮ್​ ಇದೆ ಎಂದು ಪೊಲಿಸರು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: ನದಿಯಾಗಿ ಬದಲಾದ ರಸ್ತೆ, ಮನೆ ಮೇಲೆ ಮಣ್ಣು ಕುಸಿದು ಮಹಿಳೆ ಸಾವು.. ರಾಜ್ಯದಲ್ಲಿ ಮಳೆಯಿಂದ ಭಾರೀ ಅವಾಂತರ
/newsfirstlive-kannada/media/post_attachments/wp-content/uploads/2024/06/DARSHAN_PAVITRA_GOWDA_1.jpg)
ನಕಲಿ ಸಿಮ್ ಬಳಸುತ್ತಿದ್ದ ಡಿ ಗ್ಯಾಂಗ್?
ಇನ್ನೂ ನಂದೀಶ್ ಇಬ್ಬರು ಸಹ ಒಬ್ಬನ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜೊತೆಗೆ ಪ್ರದೂಶ್, ಕಾರ್ತಿಕ್, ನಂದೀಶ್, ನಿಖಿಲ್​ದು ಫೇಕ್ ಸಿಮ್ ಎಂಬುದು ಬೆಳಕಿಗೆ ಬಂದಿದೆ. ಬೇರೆ ಬೇರೆ ವ್ಯಕ್ತಿಗಳ ಆಡ್ರೇಸ್ ಪ್ರೂಪ್ ಕೊಟ್ಟು ನಕಲಿ ಸಿಮ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಏನೇ ಆಗಲಿ ಹೆದರಲ್ಲ.. ಯುವ ಡಿವೋರ್ಸ್ ಅರ್ಜಿಗೆ ಶ್ರೀದೇವಿ ಕೊಟ್ರು ಹೊಸ ಟ್ವಿಸ್ಟ್; ಹೇಳಿದ್ದೇನು?
ಸದ್ಯ ಪೊಲೀಸರು ಸಿಮ್​ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ. ಸದ್ಯದಲ್ಲೇ ಈ ನಕಲಿ ಸಿಮ್ ಸತ್ಯಾಂಶ ಹೊರ ಬರ ಬೀಳಲಿದೆ. ಮತ್ತೊಮ್ಮೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಳಕೆಯಾದ ನಕಲಿ ಸಿಮ್​ ಪ್ರಕರಣವನ್ನು ಪೊಲೀಸರು ಬಯಲಿಗೆಳೆಯಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us