Advertisment

ದರ್ಶನ್​ ಮತ್ತೊಂದು ಬೇಡಿಕೆ ಈಡೇರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು; ಏನದು?

author-image
Veena Gangani
Updated On
ದರ್ಶನ್​ ಬಿಡುಗಡೆಗೆ ಪಣ ತೊಟ್ಟ ಪತ್ನಿ ವಿಜಯಲಕ್ಷ್ಮೀ.. ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ: ಏನಿದರ ವಿಶೇಷ?
Advertisment
  • ನಟ ದರ್ಶನ್ ಮೂರನೇ ಬೇಡಿಕೆ ಈಡೇರಿಸಿದ ಜೈಲು ಅಧಿಕಾರಿಗಳು
  • ಐದು ದಿನಗಳ ಹಿಂದೆ ಆ ಒಂದು ವಸ್ತುವಿಗಾಗಿ ಬೇಡಿಕೆ ಇಟ್ಟಿದ್ದ ದರ್ಶನ್
  • ಜಾರ್ಜ್‌‌ಶೀಟ್ ಸಲ್ಲಿಕೆ ಬಳಿಕ ಸಾಕಷ್ಟು ಬಾರೀ ಚಡಪಡಿಸುತ್ತಿದ್ದ ನಟ

ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅಂಡ್​ ಗ್ಯಾಂಗ್​ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಯಾವಾಗ ಪೊಲೀಸ್ ಅಧಿಕಾರಿಗಳು ದರ್ಶನ್ ಅಂಡ್ ಗ್ಯಾಂಗ್​ ಕೃತ್ಯದ ರೆಕಾರ್ಡ್​ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರೋ ಅವಾಗಿನಿಂದ ಭಯ ಶುರುವಾಗಿಬಿಟ್ಟಿದೆ. ಇದೇ ವೇಳೆ ಚಾರ್ಜ್​ಶೀಟ್​ನಲ್ಲಿರೋದೇನು ಎಂದು ಅನ್ನೋದನ್ನ ತಿಳಿಯಲು ದಾಸ ಫುಲ್ ಟೆನ್ಶನ್​ ಆಗಿದ್ದರು. ಅದೇ ದಿನ ಟಿವಿಗಾಗಿ ಬೇಡಿಕೆ ಇಟ್ಟಿದ್ದರು.

Advertisment

ಇದನ್ನೂ ಓದಿ: ದರ್ಶನ್​ಗೂ ಪವಿತ್ರಾಗೂ ಇರೋ ಸಂಬಂಧವೇನು? ಸ್ನೇಹಿತೇನಾ? ಪ್ರಿಯತಮೇನಾ? ಚಾರ್ಜ್​​ಶೀಟ್​​ನಲ್ಲೇನಿದೆ?

publive-image

ದರ್ಶನ್ ಸೇರಿ 17 ಮಂದಿ ನಡೆಸಿದ್ದ ಮೃಗೀಯ ವರ್ತನೆಯನ್ನ ಚಿತ್ರಗುಪ್ತನಂತೆ ಪೊಲೀಸರು ಸವಿವರವಾಗಿ ಬರೆದಿದ್ದಾರೆ. ಎಲ್ಲಾ 17 ಆರೋಪಿಗಳ ವಿರುದ್ಧ ಎಸಿಪಿ ಚಂದನ್​​​ ನೇತೃತ್ವದಲ್ಲಿ 3,991 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ. ಅತ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸುತ್ತಿದ್ದಂತೆ ಫುಲ್​ ಟೆನ್ಶನ್ ಆಗಿದ್ದ​ ದರ್ಶನ್​ ಟಿವಿ ನೀಡುವಂತೆ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ದರ್ಶನ್ ಮೂರನೇ ಬೇಡಿಕೆಯನ್ನು ಜೈಲು ಅಧಿಕಾರಿಗಳು ಈಡೇರಿಸಿದ್ದಾರೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮನವಿ ಮಾಡಿದಂತೆ ದರ್ಶನ್​ಗೆ ಸರ್ಜಿಕಲ್ ಚೇರ್​ ನೀಡಲಾಗಿತ್ತು. ಈ ಹಿಂದೆ ಟಿವಿ ಬೇಡ ಅಂತಿದ್ದ ದಾಸ, ತನ್ನ ಕೇಸ್​ನ ಮಾಹಿತಿ ಪಡೆಯಲು ಟಿವಿಗಾಗಿ ಬೇಡಿಕೆ ಇಟ್ಟಿದ್ದರು.

publive-image

ಹೀಗಾಗಿ ಐದು ದಿನಗಳ ಬಳಿಕ 15ನೇ ಸೆಲ್​ನಲ್ಲಿ ಜೈಲಧಿಕಾರಿಗಳು ಹೈಯರ್ ಕಂಪನಿ ಟಿವಿ ಅಳವಡಿಕೆ ಮಾಡಿದ್ದಾರೆ. ಜೈಲಿನ ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿಯಿದ್ದ ಹಿನ್ನೆಲೆಯಲ್ಲಿ ಈವರೆಗೂ ನೀಡಿರಲಿಲ್ಲ. ಇದೀಗ ದರ್ಶನ್​ ಸೆಲ್‌ಗೆ ಟಿವಿ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಬಳ್ಳಾರಿ ಜೈಲಿನಿಂದಲೇ ದರ್ಶನ್​ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment