ಮಗನ ಬರ್ತ್​​ಡೇ! ಬಳ್ಳಾರಿಯಿಂದ ಪತ್ನಿ, ಪುತ್ರ ವಿನೀಶ್​ನನ್ನು ನೋಡಲು ಬಂದ ದರ್ಶನ್​​

author-image
AS Harshith
Updated On
ಮಗನ ಬರ್ತ್​​ಡೇ! ಬಳ್ಳಾರಿಯಿಂದ ಪತ್ನಿ, ಪುತ್ರ ವಿನೀಶ್​ನನ್ನು ನೋಡಲು ಬಂದ ದರ್ಶನ್​​
Advertisment
  • ಚಾಲೆಂಜಿಂಗ್​ ಸ್ಟಾರ್​ ಸೆರೆವಾಸಕ್ಕೆ ತಾತ್ಕಾಲಿಕ ಮುಕ್ತಿ!
  • ಬಳ್ಳಾರಿ ಜೈಲಿನಿಂದ ನೇರವಾಗಿ ಪತ್ನಿ ಮನೆಗೆ ಬಂದ ಭೂಪತಿ
  • ನಟ ಧನ್ವೀರ್​ ಕಾರಿನಲ್ಲಿ ಅಪಾರ್ಟ್​​ಮೆಂಟ್​ಗೆ ಬಂದ ದರ್ಶನ್​​

ರೇಣುಕಾಸ್ವಾಮಿ ಕೊಲೆಯಿಂದ ಕತ್ತಲೆಗೆ ಜಾರಿದ್ದ ದರ್ಶನ್​ ಬಾಳಲ್ಲಿ ದೀಪಾವಳಿ ಬೆಳಕನ್ನ ಮೂಡಿಸಿದೆ. ಅನಾರೋಗ್ಯದ ಹಿನ್ನೆಲೆ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬೆಂಗಳೂರು ಆಗಮಿಸಿದ್ದು, ದರ್ಶನ್​ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಬಂದ ದಾಸ

ಮಧ್ಯಂತರ ಜಾಮೀನು ಸಿಕ್ಕ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಜೈಲಿಂದ ನಟ ದರ್ಶನ್​ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ರು. ಬಾಗೇಪಲ್ಲಿ, ಚಿಕ್ಕಬಳ್ಳಾಪುರ ದೇವನಹಳ್ಳಿ ಮಾರ್ಗವಾಗಿ ಕಾರಿನಲ್ಲಿ ದರ್ಶನ್ ತಡರಾತ್ರಿ 11.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ರು. ನಟ ಧನ್ವೀರ್,​ ದರ್ಶನ್​ ಇದ್ದ ಕಾರನ್ನು ಡ್ರೈವ್​ ಮಾಡಿಕೊಂಡು ಬಂದ್ರು.

ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್​ ಮುದ್ದಿನ ಮಗ; ಕ್ಯೂಟ್​​ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್

publive-image

ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ನಿವಾಸಕ್ಕೆ ತೆರಳಿದ ದರ್ಶನ್​

ಬಳ್ಳಾರಿ ಜೈಲಿನಿಂದ ನೇರವಾಗಿ ಬೆಂಗಳೂರಿಗೆ ಬಂದ ದರ್ಶನ್​ ತಮ್ಮ ಆರ್​ಆರ್​ ನಗರದ ನಿವಾಸಕ್ಕೆ ತೆರಳುವ ಮಾಹಿತಿ ಇತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ, ದರ್ಶನ್​ ನಿವಾಸದ ಬಳಿ ಬಿಗಿ ಬಂದೋಬಸ್ತ್​ ನಿಯೋಜಿಸಲಾಗಿತ್ತು. ಆದ್ರೆ ದರ್ಶನ್​ ಆರ್​ಆರ್​ ನಗರದ ನಿವಾಸದ ಬದಲು, ಹೊಸಕೆರೆ ಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್​ಮೆಂಟ್​ಗೆ ತೆರಳಿದ್ರು. ನಟ ದರ್ಶನ್​ಗೆ ಒಂದೆಡೆ ಬೇಲ್​ ಸಿಕ್ಕಿ ಮನೆಗೆ ಬಂದ ಖುಷಿ ಇದ್ರೆ, ಮತ್ತೊಂದೆಡೆ ಮಗನ ಬರ್ತ್​ ಡೇ ಕೂಡ. ತಂದೆಯ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಪುತ್ರ ವಿನೀಶ್​ ಅಪ್ಪನನ್ನು ನೋಡಲು ಓಡೋಡಿ ಬಂದ.

ಇದನ್ನೂ ಓದಿ: ಜೈಲಿನಿಂದ ದರ್ಶನ್‌ ಬಿಡುಗಡೆಗೆ ಸಂತಸ.. ರಚಿತಾ ರಾಮ್​, ತನಿಷ್ ಕುಪ್ಪಂಡ ಫುಲ್ ಖುಷ್​; ಹೇಳಿದ್ದೇನು?

publive-image

ಇಂದು ಆಸ್ಪತ್ರೆಗೆ ತೆರಳಲಿರುವ ನಟ ದರ್ಶನ್​

ಅನಾರೋಗ್ಯದ ಕಾರಣಕ್ಕಾಗಿ ಹೈಕೋರ್ಟ್​ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೋರ್ಟ್​ನ ಷರತ್ತಿನಂತೆ, ಇವತ್ತು ದರ್ಶನ್​ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿದೆ. ಆದ್ರೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಅನ್ನೋದು ಇನ್ನೂ ಕನ್ಫರ್ಮ್​ ಆಗಿಲ್ಲ. ಮೂಲಗಳ ಪ್ರಕಾರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ಟಾರೆ ಬೆನ್ನು ನೋವಿನಿಂದ ಬಳ್ಳಾರಿ ಜೈಲಿನಲ್ಲಿ ನರಕಯಾತನೆ ಅನುಭವಿಸಿದ್ದ ದರ್ಶನ್​ 5 ತಿಂಗಳ ಬಳಿಕ ಮೊದಲ ಬಾರಿಗೆ ಸುಖದ ನಿದ್ದೆ ಮಾಡಿದ್ದಾರೆ. ಇನ್ನು ದರ್ಶನ್​ ಕುಟುಂಬವೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment