/newsfirstlive-kannada/media/post_attachments/wp-content/uploads/2024/10/Darshan-7.jpg)
ರೇಣುಕಾಸ್ವಾಮಿ ಕೊಲೆಯಿಂದ ಕತ್ತಲೆಗೆ ಜಾರಿದ್ದ ದರ್ಶನ್​ ಬಾಳಲ್ಲಿ ದೀಪಾವಳಿ ಬೆಳಕನ್ನ ಮೂಡಿಸಿದೆ. ಅನಾರೋಗ್ಯದ ಹಿನ್ನೆಲೆ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬೆಂಗಳೂರು ಆಗಮಿಸಿದ್ದು, ದರ್ಶನ್​ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಬಂದ ದಾಸ
ಮಧ್ಯಂತರ ಜಾಮೀನು ಸಿಕ್ಕ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಜೈಲಿಂದ ನಟ ದರ್ಶನ್​ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ರು. ಬಾಗೇಪಲ್ಲಿ, ಚಿಕ್ಕಬಳ್ಳಾಪುರ ದೇವನಹಳ್ಳಿ ಮಾರ್ಗವಾಗಿ ಕಾರಿನಲ್ಲಿ ದರ್ಶನ್ ತಡರಾತ್ರಿ 11.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ರು. ನಟ ಧನ್ವೀರ್,​ ದರ್ಶನ್​ ಇದ್ದ ಕಾರನ್ನು ಡ್ರೈವ್​ ಮಾಡಿಕೊಂಡು ಬಂದ್ರು.
/newsfirstlive-kannada/media/post_attachments/wp-content/uploads/2024/10/Darshan-8.jpg)
ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ನಿವಾಸಕ್ಕೆ ತೆರಳಿದ ದರ್ಶನ್​
ಬಳ್ಳಾರಿ ಜೈಲಿನಿಂದ ನೇರವಾಗಿ ಬೆಂಗಳೂರಿಗೆ ಬಂದ ದರ್ಶನ್​ ತಮ್ಮ ಆರ್​ಆರ್​ ನಗರದ ನಿವಾಸಕ್ಕೆ ತೆರಳುವ ಮಾಹಿತಿ ಇತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ, ದರ್ಶನ್​ ನಿವಾಸದ ಬಳಿ ಬಿಗಿ ಬಂದೋಬಸ್ತ್​ ನಿಯೋಜಿಸಲಾಗಿತ್ತು. ಆದ್ರೆ ದರ್ಶನ್​ ಆರ್​ಆರ್​ ನಗರದ ನಿವಾಸದ ಬದಲು, ಹೊಸಕೆರೆ ಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್​ಮೆಂಟ್​ಗೆ ತೆರಳಿದ್ರು. ನಟ ದರ್ಶನ್​ಗೆ ಒಂದೆಡೆ ಬೇಲ್​ ಸಿಕ್ಕಿ ಮನೆಗೆ ಬಂದ ಖುಷಿ ಇದ್ರೆ, ಮತ್ತೊಂದೆಡೆ ಮಗನ ಬರ್ತ್​ ಡೇ ಕೂಡ. ತಂದೆಯ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಪುತ್ರ ವಿನೀಶ್​ ಅಪ್ಪನನ್ನು ನೋಡಲು ಓಡೋಡಿ ಬಂದ.
/newsfirstlive-kannada/media/post_attachments/wp-content/uploads/2024/10/Darshan-Bangalore-Entry.jpg)
ಇಂದು ಆಸ್ಪತ್ರೆಗೆ ತೆರಳಲಿರುವ ನಟ ದರ್ಶನ್​
ಅನಾರೋಗ್ಯದ ಕಾರಣಕ್ಕಾಗಿ ಹೈಕೋರ್ಟ್​ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೋರ್ಟ್​ನ ಷರತ್ತಿನಂತೆ, ಇವತ್ತು ದರ್ಶನ್​ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿದೆ. ಆದ್ರೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಅನ್ನೋದು ಇನ್ನೂ ಕನ್ಫರ್ಮ್​ ಆಗಿಲ್ಲ. ಮೂಲಗಳ ಪ್ರಕಾರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಬೆನ್ನು ನೋವಿನಿಂದ ಬಳ್ಳಾರಿ ಜೈಲಿನಲ್ಲಿ ನರಕಯಾತನೆ ಅನುಭವಿಸಿದ್ದ ದರ್ಶನ್​ 5 ತಿಂಗಳ ಬಳಿಕ ಮೊದಲ ಬಾರಿಗೆ ಸುಖದ ನಿದ್ದೆ ಮಾಡಿದ್ದಾರೆ. ಇನ್ನು ದರ್ಶನ್​ ಕುಟುಂಬವೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us