newsfirstkannada.com

‘ಲೋಕ’ ಗೆಲ್ಲಲು ಸುಮಲತಾ ಪರ‌ ದರ್ಶನ್ ಪ್ರಚಾರ ಫಿಕ್ಸ್! ರಾಕಿ ಭಾಯ್​ ಬರಲ್ವಾ?

Share :

Published February 26, 2024 at 8:35am

    ಕಳೆದ ವರ್ಷ ಸುಮಲತಾಗೆ ಸಾಥ್​ ನೀಡಿದ ಜೋಡೆತ್ತುಗಳು

    ದರ್ಶನ್​ ಜೊತೆಗೆ ಅಬ್ಬರ ಪ್ರಚಾರಕ್ಕೆ ಬರ್ತಾರಾ ರಾಕಿ ಭಾಯ್​?

    ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ ಎಂದ ಸಂಸದೆ ಸುಮಲತಾ

ಒಂದೆಡೆ ಲೋಕಸಭೆ ಚುನಾವಣೆ ಸಮೀಸುತ್ತಿದೆ. ಅತ್ತ ಮಂಡ್ಯ ರಾಜಕಾರಣ ರೋಚಕತೆ ಪಡೆದುಕೊಳ್ತಿದೆ. ಕಳೆದ ಸಲ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾಗೆ ಸ್ಯಾಂಡಲ್​ವುಡ್​​ ಜೋಡೆತ್ತುಯ ಎಂದು ಕರೆಸಿಕೊಂಡ ನಟ ದರ್ಶನ್​ ಮತ್ತು ಯಶ್​​ ಬೆನ್ನೆಲುಬಾಗಿ ನಿಂತಿದ್ರು. ಭರ್ಜರಿ ಪ್ರಚಾರ ಕೈಗೊಂಡ್ರು. ಅಷ್ಟು ಮಾತ್ರವಲ್ಲದೆ ಸುಮಲತಾ ಅವರ ಗೆಲುವಿಗೆ ಕಾರಣರಾದ್ರು. ಆದರೀಗ ಜೋಡೆತ್ತುಗಳು ಮತ್ತೆ ಅಂಬಿ ಪತ್ನಿಯ ಪ್ರಚಾರದಲ್ಲಿ ಭಾಗಿಯಾಗುತ್ತಾರಾ ಎಂಬ ಕುತೂಹಲತೆ ಮನೆಮಾಡಿದೆ.

ದರ್ಶನ್​ ಫಿಕ್ಸ್​.. ಯಶ್​?

ಡಿ ಬಾಸ್​ ದರ್ಶನ್ ಈ ಬಾರಿ ಲೋಕಸಭಾ ಚುನಾವಣೆಗಾಗಿ ಸುಮಲತಾ ಬೆನ್ನಿಗೆ ನಿಂತು ಕ್ಯಾಂಪೇನ್ ಮಾಡೋದು ಬಹುತೇಕ ಖಚಿತವಾಗಿದೆ‌. ಸ್ವತಃ ಸುಮಲತಾ ಅವರೇ ದರ್ಶನ್ ಬೆಂಬಲದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.‌ ಆದರೀಗ ಯಶ್ ನಿರ್ಧಾರ ಬಗ್ಗೆ ಕುತೂಹಲ ಮೂಡಿಸಿದೆ. ರಾಕಿಂಗ್​ ಸ್ಟಾರ್​ ಈ ವರ್ಷ ಕೂಡ ಸುಮಲತಾ ಪರ ಪ್ರಚಾರ ಮಾಡುತ್ತಾರಾ ಎಂಬ ಬಗ್ಗೆ ಅಪ್ಡೇಟ್​ ಸಿಗಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ

ಇನ್ನು ಸಂಸದೆ ಸುಮಲತಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಸೀಟು ಸಿಗುತ್ತಾ ಎಂಬ ಬಗ್ಗೆ ಗೊಂದಲವಿತ್ತು. ಆದರೆ ನಿನ್ನೆ ಮಂಡ್ಯ ಜಿಲ್ಲೆಯ ಬೆಂಬಲಿಗರೊಂದಿಗೆ ಸಭೆ ಕರೆದ ಅವರು, ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಅವರು, ಸಂಸದೆ ಆಗಿ ಐದು ವರ್ಷ ಕಳೆದಿದೆ. ಅವರವರ ಅಭಿಪ್ರಾಯ ತಿಳಿಯಲು ಸಭೆ ಕರೆಯಲಾಗಿದೆ. ನಾವು ಮಾಡಿರೋ ಕೆಲಸದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಹೇಗೆ ನೋಡ್ತಾರೆ ಅಂತ ಮೀಟಿಂಗ್​ ಕರೆಯಲಾಗಿದೆ. ವಿಶ್ವಾಸ ತುಂಬುವ ಕೆಲಸ ಆಗಬೇಕು. ಗೊಂದಲ ಇಲ್ಲ, ದೃಢ ವಿಶ್ವಾಸ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಗೆಲ್ಲಲು ಸುಮಲತಾ ಪರ‌ ದರ್ಶನ್ ಪ್ರಚಾರ ಫಿಕ್ಸ್! ರಾಕಿ ಭಾಯ್​ ಬರಲ್ವಾ?

https://newsfirstlive.com/wp-content/uploads/2024/02/Manddya-Sumalatha.jpg

    ಕಳೆದ ವರ್ಷ ಸುಮಲತಾಗೆ ಸಾಥ್​ ನೀಡಿದ ಜೋಡೆತ್ತುಗಳು

    ದರ್ಶನ್​ ಜೊತೆಗೆ ಅಬ್ಬರ ಪ್ರಚಾರಕ್ಕೆ ಬರ್ತಾರಾ ರಾಕಿ ಭಾಯ್​?

    ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ ಎಂದ ಸಂಸದೆ ಸುಮಲತಾ

ಒಂದೆಡೆ ಲೋಕಸಭೆ ಚುನಾವಣೆ ಸಮೀಸುತ್ತಿದೆ. ಅತ್ತ ಮಂಡ್ಯ ರಾಜಕಾರಣ ರೋಚಕತೆ ಪಡೆದುಕೊಳ್ತಿದೆ. ಕಳೆದ ಸಲ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾಗೆ ಸ್ಯಾಂಡಲ್​ವುಡ್​​ ಜೋಡೆತ್ತುಯ ಎಂದು ಕರೆಸಿಕೊಂಡ ನಟ ದರ್ಶನ್​ ಮತ್ತು ಯಶ್​​ ಬೆನ್ನೆಲುಬಾಗಿ ನಿಂತಿದ್ರು. ಭರ್ಜರಿ ಪ್ರಚಾರ ಕೈಗೊಂಡ್ರು. ಅಷ್ಟು ಮಾತ್ರವಲ್ಲದೆ ಸುಮಲತಾ ಅವರ ಗೆಲುವಿಗೆ ಕಾರಣರಾದ್ರು. ಆದರೀಗ ಜೋಡೆತ್ತುಗಳು ಮತ್ತೆ ಅಂಬಿ ಪತ್ನಿಯ ಪ್ರಚಾರದಲ್ಲಿ ಭಾಗಿಯಾಗುತ್ತಾರಾ ಎಂಬ ಕುತೂಹಲತೆ ಮನೆಮಾಡಿದೆ.

ದರ್ಶನ್​ ಫಿಕ್ಸ್​.. ಯಶ್​?

ಡಿ ಬಾಸ್​ ದರ್ಶನ್ ಈ ಬಾರಿ ಲೋಕಸಭಾ ಚುನಾವಣೆಗಾಗಿ ಸುಮಲತಾ ಬೆನ್ನಿಗೆ ನಿಂತು ಕ್ಯಾಂಪೇನ್ ಮಾಡೋದು ಬಹುತೇಕ ಖಚಿತವಾಗಿದೆ‌. ಸ್ವತಃ ಸುಮಲತಾ ಅವರೇ ದರ್ಶನ್ ಬೆಂಬಲದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.‌ ಆದರೀಗ ಯಶ್ ನಿರ್ಧಾರ ಬಗ್ಗೆ ಕುತೂಹಲ ಮೂಡಿಸಿದೆ. ರಾಕಿಂಗ್​ ಸ್ಟಾರ್​ ಈ ವರ್ಷ ಕೂಡ ಸುಮಲತಾ ಪರ ಪ್ರಚಾರ ಮಾಡುತ್ತಾರಾ ಎಂಬ ಬಗ್ಗೆ ಅಪ್ಡೇಟ್​ ಸಿಗಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ

ಇನ್ನು ಸಂಸದೆ ಸುಮಲತಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಸೀಟು ಸಿಗುತ್ತಾ ಎಂಬ ಬಗ್ಗೆ ಗೊಂದಲವಿತ್ತು. ಆದರೆ ನಿನ್ನೆ ಮಂಡ್ಯ ಜಿಲ್ಲೆಯ ಬೆಂಬಲಿಗರೊಂದಿಗೆ ಸಭೆ ಕರೆದ ಅವರು, ಮಂಡ್ಯ ಜಿಲ್ಲೆ ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಅವರು, ಸಂಸದೆ ಆಗಿ ಐದು ವರ್ಷ ಕಳೆದಿದೆ. ಅವರವರ ಅಭಿಪ್ರಾಯ ತಿಳಿಯಲು ಸಭೆ ಕರೆಯಲಾಗಿದೆ. ನಾವು ಮಾಡಿರೋ ಕೆಲಸದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಹೇಗೆ ನೋಡ್ತಾರೆ ಅಂತ ಮೀಟಿಂಗ್​ ಕರೆಯಲಾಗಿದೆ. ವಿಶ್ವಾಸ ತುಂಬುವ ಕೆಲಸ ಆಗಬೇಕು. ಗೊಂದಲ ಇಲ್ಲ, ದೃಢ ವಿಶ್ವಾಸ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More