‘ದರ್ಶನ್​ ಕೊಲೆ ಮಾಡೇ ಇಲ್ಲ, ರಿಲೀಸ್​ ಮಾಡಬೇಕು’- ಜೈಲು ಮುಂದೆಯೇ ಕೇಳಿ ಬಂತು ಒತ್ತಾಯ

author-image
Ganesh Nachikethu
Updated On
ದರ್ಶನ್​ ರಿಲೀಸ್​ಗೆ ಆಗ್ರಹ; ಜೈಲು ಮುಂದೆ ಪೂಜೆ ಮಾಡಲು ಬಂದ ಅಭಿಮಾನಿಗಳನ್ನು ದರದರ ಎಳೆದೊಯ್ದ ಪೊಲೀಸ್ರು
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿ 2 ತಿಂಗಳು
  • ದರ್ಶನ್​ ರಿಲೀಸ್​ಗಾಗಿ ಉರುಳು ಸೇವೆ ಮಾಡಲು ಹೋಗಿ ಸಿಕ್ಕಿಬಿದ್ರು!
  • ಪೊಲೀಸ್ರ ಅವಕಾಶ ನೀಡದ ಬಗ್ಗೆ ನಟ ದರ್ಶನ್​ ಫ್ಯಾನ್ಸ್​ ಆಕ್ರೋಶ

ಬೆಂಗಳೂರು: ನಟ ದರ್ಶನ್​​ ರಿಲೀಸ್​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ 101 ತೆಂಗಿನ ಕಾಯಿ ಹೊಡೆದು ಉರುಳು ಸೇವೆ ಮಾಡಲು ಮುಂದಾಗಿದ್ದ ಅಭಿಮಾನಿಗಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಧ್ಯಾಹ್ನ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬಾತ ದರ್ಶನ್​ ಬಿಡುಗಡೆಗೆ ಆಗ್ರಹಿಸಿ ಜೈಲು ಮುಂದೆ ಉರುಳು ಸೇವೆ ಮಾಡಲು ಬಂದಿದ್ದ. ಆಗ ಜೈಲು ಮುಂದೆ ಇದ್ದ ಪೊಲೀಸ್ರು ಆತನನ್ನು ಎಳೆದೊಯ್ದರು. ಈತನೊಂದಿಗೆ ಬಂದಿದ್ದ ಎಲ್ಲರನ್ನು ವಶಕ್ಕೆ ಪಡೆದರು.

publive-image

ಇನ್ನು, ಪೊಲೀಸ್​​ ವಶಕ್ಕೆ ಪಡೆದು ಬಿಟ್ಟ ನಂತರ ನ್ಯೂಸ್​ಫಸ್ಟ್​ ಜತೆ ಮಾತಾಡಿದ ರವಿಕುಮಾರ್​ ಅವರು, ನಟ ದರ್ಶನ್​ ಕೊಲೆ ಮಾಡೇ ಇಲ್ಲ. ಅವರು ಬೆಳೆಯುತ್ತಿದ್ದಾರೆ ಎಂದು ಕುತಂತ್ರ ಮಾಡಿ ಒಳಗೆ ಹಾಕಿದ್ದಾರೆ. ದರ್ಶನ್​ ಲಕ್ಷಾಂತರ ರೂಪಾಯಿ ಬಡವರಿಗೆ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ, ಹಾಗಾಗಿ ಕೂಡಲೇ ರಿಲೀಸ್​ ಮಾಡಬೇಕು ಎಂದು ಒತ್ತಾಯಿಸಿದ್ರು.

ಈ ಹಿಂದೆಯೇ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬುವರು ನಾಳೆ ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದ.

ಇದನ್ನೂ ಓದಿ: ದರ್ಶನ್​ ರಿಲೀಸ್​ಗಾಗಿ ಜೈಲು ಮುಂದೆ ಉರುಳು ಸೇವೆ ಮಾಡಲು ಬಂದ ಫ್ಯಾನ್ಸ್​​; ಪೊಲೀಸ್ರು ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment