ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜುವಿನಿಂದ ಹಲ್ಲೆ
ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿಕೊಲ್ಲದ ಕೆಸ್ತೂರು ಪೊಲೀಸರು
ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್ಸ್ಟೇಬಲ್ಗೆ ತಾಕೀತು
ಮಂಡ್ಯ: ಕಾನ್ಸ್ಟೇಬಲ್ ಮೇಲೆ ದರ್ಶನ್ ಪಟಾಲಮ್ ಹಲ್ಲೆ ಮಾಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಡಿ ಗ್ಯಾಂಗ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಪಡಿಸಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಕಾನ್ಸ್ಟೇಬಲ್ ನಾಗೇಶ್ ಮದ್ದೂರು ಶಾಸಕರ ಗನ್ ಮ್ಯಾನ್ ಆಗಿದ್ದರು. ದರ್ಶನ್ ಸ್ಟಾರ್ ಚಂದ್ರು ಪರ ಚುನಾವಣಾ ಕ್ಯಾಂಪೇನ್ ನಡೆಸುತ್ತಿದ್ದ ವೇಳೆ ನಾಗೇಶ್ ಮೇಲೆ ಡಿ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಮುಖಂಡರನ್ನ ಹತ್ತಿರಕ್ಕೆ ಬಿಟ್ಟು ಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗುತ್ತಿದೆ.
ಕ್ಯಾಂಪೇನ್ ಮುಗಿದ ಬಳಿಕ ಶಾಸಕ ಉದಯ್ ಮನೆಯಲ್ಲಿಯೇ ಗಲಾಟೆ ನಡೆದಿದೆ. ಕಾನ್ಸ್ಟೇಬಲ್ ನಾಗೇಶ್ ಮೇಲೆ ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜು ಸೇರಿದಂತೆ ಹಲವರಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ
ಹಲ್ಲೆಗೊಳಗಾದ ನಾಗೇಶ್ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಎಂಎಲ್ಸಿಯಾದ್ರು ಎಫ್ಐಆರ್ ಆಗಿಲ್ಲ. ಅನಿವಾರ್ಯವಾಗಿ ದೂರು ಕೊಟ್ಟರೂ ಕೆಸ್ತೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಹಲ್ಲೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದರು ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್ ಕಸ್ಟಡಿಗೆ.. ಈ ಆ್ಯಂಗಲ್ನಲ್ಲಿ ನಡಿಯಲಿದೆ ತನಿಖೆ
ಮೇಲಾಧಿಕಾರಿಗಳ ನಡೆಗೆ ಬೇಸತ್ತಿದ್ದ ಕಾನ್ಸ್ಟೇಬಲ್. ಕೊನೆಗೆ ಗನ್ ಮ್ಯಾನ್ ಹುದ್ದೆಯಿಂದಲೆ ವಿಮುಕ್ತಿ ಪಡೆದಿದ್ದಾರೆ. ಡಿಎಆರ್ ತುಕಡಿಯಲ್ಲಿಯೇ ಸದ್ಯ ಕಾನ್ಸ್ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: 10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ
ಅತ್ತ ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್ಸ್ಟೇಬಲ್ಗೆ ತಾಕೀತು ಮಾಡಲಾಗಿದೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಲು ಮಂಡ್ಯ ಎಸ್ಪಿ ಎನ್.ಯತೀಶ್ ನಿರಾಕರಿಸಿದ್ದಾರೆ. ಅತ್ತ ಶಾಸಕರು ಸಹ ನನಗೆ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ಸಿಬ್ಬಂದಿಗಿಂತ ಪೊಲೀಸ್ ಇಲಾಖೆಗೆ ಸೆಲೆಬ್ರಿಟಿ ಪಟಾಲಂ ಮುಖ್ಯನಾ? ಅನ್ನೋ ಪ್ರಶ್ನೆ ಸಾರ್ವಜನಿಕರನ್ನು ಕಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜುವಿನಿಂದ ಹಲ್ಲೆ
ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿಕೊಲ್ಲದ ಕೆಸ್ತೂರು ಪೊಲೀಸರು
ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್ಸ್ಟೇಬಲ್ಗೆ ತಾಕೀತು
ಮಂಡ್ಯ: ಕಾನ್ಸ್ಟೇಬಲ್ ಮೇಲೆ ದರ್ಶನ್ ಪಟಾಲಮ್ ಹಲ್ಲೆ ಮಾಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಡಿ ಗ್ಯಾಂಗ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಪಡಿಸಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಕಾನ್ಸ್ಟೇಬಲ್ ನಾಗೇಶ್ ಮದ್ದೂರು ಶಾಸಕರ ಗನ್ ಮ್ಯಾನ್ ಆಗಿದ್ದರು. ದರ್ಶನ್ ಸ್ಟಾರ್ ಚಂದ್ರು ಪರ ಚುನಾವಣಾ ಕ್ಯಾಂಪೇನ್ ನಡೆಸುತ್ತಿದ್ದ ವೇಳೆ ನಾಗೇಶ್ ಮೇಲೆ ಡಿ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಮುಖಂಡರನ್ನ ಹತ್ತಿರಕ್ಕೆ ಬಿಟ್ಟು ಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗುತ್ತಿದೆ.
ಕ್ಯಾಂಪೇನ್ ಮುಗಿದ ಬಳಿಕ ಶಾಸಕ ಉದಯ್ ಮನೆಯಲ್ಲಿಯೇ ಗಲಾಟೆ ನಡೆದಿದೆ. ಕಾನ್ಸ್ಟೇಬಲ್ ನಾಗೇಶ್ ಮೇಲೆ ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜು ಸೇರಿದಂತೆ ಹಲವರಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ
ಹಲ್ಲೆಗೊಳಗಾದ ನಾಗೇಶ್ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಎಂಎಲ್ಸಿಯಾದ್ರು ಎಫ್ಐಆರ್ ಆಗಿಲ್ಲ. ಅನಿವಾರ್ಯವಾಗಿ ದೂರು ಕೊಟ್ಟರೂ ಕೆಸ್ತೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಹಲ್ಲೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದರು ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್ ಕಸ್ಟಡಿಗೆ.. ಈ ಆ್ಯಂಗಲ್ನಲ್ಲಿ ನಡಿಯಲಿದೆ ತನಿಖೆ
ಮೇಲಾಧಿಕಾರಿಗಳ ನಡೆಗೆ ಬೇಸತ್ತಿದ್ದ ಕಾನ್ಸ್ಟೇಬಲ್. ಕೊನೆಗೆ ಗನ್ ಮ್ಯಾನ್ ಹುದ್ದೆಯಿಂದಲೆ ವಿಮುಕ್ತಿ ಪಡೆದಿದ್ದಾರೆ. ಡಿಎಆರ್ ತುಕಡಿಯಲ್ಲಿಯೇ ಸದ್ಯ ಕಾನ್ಸ್ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: 10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ
ಅತ್ತ ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್ಸ್ಟೇಬಲ್ಗೆ ತಾಕೀತು ಮಾಡಲಾಗಿದೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಲು ಮಂಡ್ಯ ಎಸ್ಪಿ ಎನ್.ಯತೀಶ್ ನಿರಾಕರಿಸಿದ್ದಾರೆ. ಅತ್ತ ಶಾಸಕರು ಸಹ ನನಗೆ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ಸಿಬ್ಬಂದಿಗಿಂತ ಪೊಲೀಸ್ ಇಲಾಖೆಗೆ ಸೆಲೆಬ್ರಿಟಿ ಪಟಾಲಂ ಮುಖ್ಯನಾ? ಅನ್ನೋ ಪ್ರಶ್ನೆ ಸಾರ್ವಜನಿಕರನ್ನು ಕಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ