ನನ್ನ ಹೆಂಡತಿ ಪವಿತ್ರಾ ಗೌಡ 'ಪವಿತ್ರ'
ಅವಳ ಕಾಲ ಮುಟ್ಟಬೇಡ ಹಾಗೆಯೇ Sorry ಕೇಳು
ದರ್ಶನ್ ಪವಿತ್ರಾಗೆ ಕೊಟ್ಟ ಆ ಗುಡ್ ನ್ಯೂಸ್ ಏನು ಗೊತ್ತಾ?
ಗುಡ್ನ್ಯೂಸ್! ಇದು ದರ್ಶನ್ ಪವಿತ್ರಾಗೆ ಕೊಟ್ಟ ಸಿಹಿ ಸುದ್ದಿ. ಪ್ರಾಣಿಯೊಂದು ಹೊಂಚು ಹಾಕಿ ಹಿಡಿದ ಬೇಟೆಯ ಕತೆಯನ್ನು ಮೀರಿಸುವಂತಿದೆ ದರ್ಶನ್ -ಪವಿತ್ರಾಳ ನಡುವಿನ ಸಿಹಿಸುದ್ದಿ. ಅಶ್ಲೀಲ ಮೆಸೇಜ್ ಹಾಕಿದ್ದ ವ್ಯಕ್ತಿಯನ್ನ ಹೊಂಚು ಹಾಕಿ ಕೊನೆಗೆ ಕೈಗೆ ಸಿಕ್ಕಾಗ ದರ್ಶನ್ಗೆ ಸಿಕ್ಕ ಖುಷಿ ಅಷ್ಟಿಷ್ಟಲ್ಲ. ನೇರವಾಗಿ ಕಾರ್ ಏರಿ ಪವಿತ್ರಾಗೆ ಮನೆಗೆ ಧಾವಿಸಿ ಗುಡ್ ನ್ಯೂಸ್ ಕೊಟ್ಟೇ ಬಿಟ್ಟಿದ್ರಂತೆ.
ರೇಣುಕಾಸ್ವಾಮಿಯನ್ನು ಹಂತ ಹಂತವಾಗಿ ಪ್ಲಾನ್ ಮಾಡಿ ಹಿಡಿದಿದ್ದ ತಂಡ ಕೊನೆಗೆ ಆತನನ್ನು ಬಾಡಿಗೆ ಕಾರ್ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಆತ ಸಿಕ್ಕ ವಿಚಾರ ದರ್ಶನ್ಗೆ ಯಾವಾಗ ತಲುಪಿತ್ತೋ ಅಂದು ಪವಿತ್ರಾ ಗೌಡಗೆ ಕರೆ ಮಾಡಿದ್ದ ದರ್ಶನ್ Good News ಇದೆ ಬಾ ಎಂದಿದ್ದರಂತೆ.
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್!
ಇತ್ತ ಖುಷಿಯಿಂದಲೇ ಮನೆ ಮೇಲಿಂದ ಕೆಳಗೆ ಬಂದಿದ ಪವಿತ್ರಾ ಗೌಡರನ್ನ ದರ್ಶನ್ ಪಿಕ್ ಮಾಡಿ ಕಾರ್ ನಲ್ಲಿ ಸೀದಾ ಶೆಡ್ಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಕರೆತರಲಾಗಿತ್ತು. ಅದೇ ಸ್ಥಳಕ್ಕೆ ಪವಿತ್ರಾ ಗೌಡಗೆ ಗುಡ್ನ್ಯೂಸ್ ಎಂದು ಕರೆದುಕೊಂಡು ಹೋದ ದರ್ಶನ್ ರೇಣುಕಾಸ್ವಾಮಿಯನ್ನು ತೋರಿಸಿದ್ದರಂತೆ. ನಿನಗೆ ಬ್ಯಾಡ್ ಮೇಸೆಜ್ ಹಾಕಿದ್ದ ರೇಣುಕಾಸ್ವಾಮಿ ಇವನೇ. ಇವನನ್ನ ಚಿತ್ರದುರ್ಗದಿಂದ ಹಿಡಿದುಕೊಂಡು ಬಂದಿದ್ದಾರೆ ಎಂದು ಹೇಳಿದ್ದರಂತೆ.
ನನ್ನ ಹೆಂಡ್ತಿ ಪವಿತ್ರಾ ಗೌಡ ‘ಪವಿತ್ರ’
ನಿಗಿನಿಗಿ ಕೆಂಡವಾಗಿದ್ದ ಪವಿತ್ರಾ ಗೌಡ ಕೋಪವನ್ನು ಕಂಡ ದರ್ಶನ್ ಅಲ್ಲೇ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಬಳಿಕ ರೇಣುಕಾಸ್ವಾಮಿ ಕಾಲು ಮುಟ್ಟಿ sorry ಕೇಳಲು ಬಂದಿದ್ದಾನೆ. ಆಗ ದರ್ಶನ್ ನನ್ನ ಹೆಂಡ್ತಿ ಪವಿತ್ರಾ ಗೌಡ ‘ಪವಿತ್ರ’. ಅವಳ ಕಾಲ ಮುಟ್ಟಬೇಡ. ಹಾಗೆಯೇ Sorry ಕೇಳು ಎಂದು ದರ್ಶನ್ ಹೇಳಿದ್ದಾರಂತೆ. ಅದರಂತೆ ಕಾಲು ಮುಟ್ಟದೇ ರೇಣುಕಾಸ್ವಾಮಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: Watch: ಮಗ ಅರೆಸ್ಟ್ ಸುದ್ದಿ ತಿಳಿದು ತಂದೆ ಸಾವು.. ‘ಕೊನೆ ಸಲ ಅಪ್ಪನ ನೋಡ್ತಾನೆ ಕರೆಸಿ’ ಎಂದು ಕಣ್ಣೀರಿಟ್ಟ ಅನು ಅಕ್ಕ
ಪವಿತ್ರಾ ಮುಂದೆಯೇ ಹಲ್ಲೆ ಮಾಡಿದ್ದ ನಟ ದರ್ಶನ್ ಕ್ಷಮೆ ಕೇಳಿದ ಬಳಿಕ ಪವಿತ್ರಾ ಜೊತೆ ಮನೆಗೆ ಹೊರಟ್ಟಿದ್ದಾರೆ. ಸಿಸಿಟಿವಿಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಂದು ಹೋಗಿರೋದು ಸೆರೆಯಾಗಿದ್ದು, ದರ್ಶನ್ ಕಾರ್ ಶೆಡ್ ಗೆ ಬಂದು ಹೋಗೋದು ರೆಕಾರ್ಡ್ ಆಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರೆದಿದೆ. ಸದ್ಯ ಈ ಘಟನೆಯ ವಿಸ್ತಾರವಾಗಿ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ಹೆಂಡತಿ ಪವಿತ್ರಾ ಗೌಡ 'ಪವಿತ್ರ'
ಅವಳ ಕಾಲ ಮುಟ್ಟಬೇಡ ಹಾಗೆಯೇ Sorry ಕೇಳು
ದರ್ಶನ್ ಪವಿತ್ರಾಗೆ ಕೊಟ್ಟ ಆ ಗುಡ್ ನ್ಯೂಸ್ ಏನು ಗೊತ್ತಾ?
ಗುಡ್ನ್ಯೂಸ್! ಇದು ದರ್ಶನ್ ಪವಿತ್ರಾಗೆ ಕೊಟ್ಟ ಸಿಹಿ ಸುದ್ದಿ. ಪ್ರಾಣಿಯೊಂದು ಹೊಂಚು ಹಾಕಿ ಹಿಡಿದ ಬೇಟೆಯ ಕತೆಯನ್ನು ಮೀರಿಸುವಂತಿದೆ ದರ್ಶನ್ -ಪವಿತ್ರಾಳ ನಡುವಿನ ಸಿಹಿಸುದ್ದಿ. ಅಶ್ಲೀಲ ಮೆಸೇಜ್ ಹಾಕಿದ್ದ ವ್ಯಕ್ತಿಯನ್ನ ಹೊಂಚು ಹಾಕಿ ಕೊನೆಗೆ ಕೈಗೆ ಸಿಕ್ಕಾಗ ದರ್ಶನ್ಗೆ ಸಿಕ್ಕ ಖುಷಿ ಅಷ್ಟಿಷ್ಟಲ್ಲ. ನೇರವಾಗಿ ಕಾರ್ ಏರಿ ಪವಿತ್ರಾಗೆ ಮನೆಗೆ ಧಾವಿಸಿ ಗುಡ್ ನ್ಯೂಸ್ ಕೊಟ್ಟೇ ಬಿಟ್ಟಿದ್ರಂತೆ.
ರೇಣುಕಾಸ್ವಾಮಿಯನ್ನು ಹಂತ ಹಂತವಾಗಿ ಪ್ಲಾನ್ ಮಾಡಿ ಹಿಡಿದಿದ್ದ ತಂಡ ಕೊನೆಗೆ ಆತನನ್ನು ಬಾಡಿಗೆ ಕಾರ್ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಆತ ಸಿಕ್ಕ ವಿಚಾರ ದರ್ಶನ್ಗೆ ಯಾವಾಗ ತಲುಪಿತ್ತೋ ಅಂದು ಪವಿತ್ರಾ ಗೌಡಗೆ ಕರೆ ಮಾಡಿದ್ದ ದರ್ಶನ್ Good News ಇದೆ ಬಾ ಎಂದಿದ್ದರಂತೆ.
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್!
ಇತ್ತ ಖುಷಿಯಿಂದಲೇ ಮನೆ ಮೇಲಿಂದ ಕೆಳಗೆ ಬಂದಿದ ಪವಿತ್ರಾ ಗೌಡರನ್ನ ದರ್ಶನ್ ಪಿಕ್ ಮಾಡಿ ಕಾರ್ ನಲ್ಲಿ ಸೀದಾ ಶೆಡ್ಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಕರೆತರಲಾಗಿತ್ತು. ಅದೇ ಸ್ಥಳಕ್ಕೆ ಪವಿತ್ರಾ ಗೌಡಗೆ ಗುಡ್ನ್ಯೂಸ್ ಎಂದು ಕರೆದುಕೊಂಡು ಹೋದ ದರ್ಶನ್ ರೇಣುಕಾಸ್ವಾಮಿಯನ್ನು ತೋರಿಸಿದ್ದರಂತೆ. ನಿನಗೆ ಬ್ಯಾಡ್ ಮೇಸೆಜ್ ಹಾಕಿದ್ದ ರೇಣುಕಾಸ್ವಾಮಿ ಇವನೇ. ಇವನನ್ನ ಚಿತ್ರದುರ್ಗದಿಂದ ಹಿಡಿದುಕೊಂಡು ಬಂದಿದ್ದಾರೆ ಎಂದು ಹೇಳಿದ್ದರಂತೆ.
ನನ್ನ ಹೆಂಡ್ತಿ ಪವಿತ್ರಾ ಗೌಡ ‘ಪವಿತ್ರ’
ನಿಗಿನಿಗಿ ಕೆಂಡವಾಗಿದ್ದ ಪವಿತ್ರಾ ಗೌಡ ಕೋಪವನ್ನು ಕಂಡ ದರ್ಶನ್ ಅಲ್ಲೇ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಬಳಿಕ ರೇಣುಕಾಸ್ವಾಮಿ ಕಾಲು ಮುಟ್ಟಿ sorry ಕೇಳಲು ಬಂದಿದ್ದಾನೆ. ಆಗ ದರ್ಶನ್ ನನ್ನ ಹೆಂಡ್ತಿ ಪವಿತ್ರಾ ಗೌಡ ‘ಪವಿತ್ರ’. ಅವಳ ಕಾಲ ಮುಟ್ಟಬೇಡ. ಹಾಗೆಯೇ Sorry ಕೇಳು ಎಂದು ದರ್ಶನ್ ಹೇಳಿದ್ದಾರಂತೆ. ಅದರಂತೆ ಕಾಲು ಮುಟ್ಟದೇ ರೇಣುಕಾಸ್ವಾಮಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: Watch: ಮಗ ಅರೆಸ್ಟ್ ಸುದ್ದಿ ತಿಳಿದು ತಂದೆ ಸಾವು.. ‘ಕೊನೆ ಸಲ ಅಪ್ಪನ ನೋಡ್ತಾನೆ ಕರೆಸಿ’ ಎಂದು ಕಣ್ಣೀರಿಟ್ಟ ಅನು ಅಕ್ಕ
ಪವಿತ್ರಾ ಮುಂದೆಯೇ ಹಲ್ಲೆ ಮಾಡಿದ್ದ ನಟ ದರ್ಶನ್ ಕ್ಷಮೆ ಕೇಳಿದ ಬಳಿಕ ಪವಿತ್ರಾ ಜೊತೆ ಮನೆಗೆ ಹೊರಟ್ಟಿದ್ದಾರೆ. ಸಿಸಿಟಿವಿಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಂದು ಹೋಗಿರೋದು ಸೆರೆಯಾಗಿದ್ದು, ದರ್ಶನ್ ಕಾರ್ ಶೆಡ್ ಗೆ ಬಂದು ಹೋಗೋದು ರೆಕಾರ್ಡ್ ಆಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರೆದಿದೆ. ಸದ್ಯ ಈ ಘಟನೆಯ ವಿಸ್ತಾರವಾಗಿ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ