/newsfirstlive-kannada/media/post_attachments/wp-content/uploads/2024/06/Renuskaswamy.jpg)
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಬಳಿಕ ಸಾಕಷ್ಟು ಸಂಗತಿಗಳು ಹೊರಬೀಳುತ್ತಿವೆ. ಅದರಂತೆಯೇ ಇದೀಗ ಕೊಲೆಯಾದ ರೇಣುಕಾಸ್ವಾಮಿ ಓಡಿಸುತ್ತಿದ್ದ ಗಾಡಿ ಡ್ಯಾಮೇಜ್ ಆಗಿರುವ ವಿಚಾರ ಬಯಲಾಗಿದೆ.
ಇದನ್ನೂ ಓದಿ: ವಿಚಾರಣೆ ವೇಳೆ ದರ್ಶನ್ ಹೇಳೋದು ಒಂದೇ ಮಾತು.. ಪಶ್ಚಾತ್ತಾಪ ಪಡ್ತಿದ್ದಾರಾ ಚಾಲೆಂಜಿಂಗ್ ಸ್ಟಾರ್
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಲಾಗಿದೆ. ಮನೆಯಿಂದ ಹೊರಟ್ಟಿದ್ದ ರೇಣೂಕಾಸ್ವಾಮಿ ತನ್ನ ಸ್ಕೂಟಿಯಲ್ಲಿ ಹೊರಡುತ್ತಾರೆ. ಬಳಿಕ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಆದರೀಗ ರೇಣುಕಾಸ್ವಾಮಿ ಓಡಿಸುತ್ತಿದ್ದ ಗಾಡಿ ಡ್ಯಾಮೇಜ್ ಆಗಿರೋದು ಬೆಳಕಿಗೆ ಬಂದಿದೆ. ಸ್ಕೂಟರ್ ಮುಂಭಾಗ ಜಖಂ ಆಗಿದ್ದು, ಮಿರರ್ ಕಣ್ಮರೆಯಾಗಿದೆ.
ಇದನ್ನೂ ಓದಿ: ಅಭಿಮಾನಕ್ಕಾಗಿ ದರ್ಶನ್ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?
ಸದ್ಯ ರೇಣುಕಾಸ್ವಾಮಿ ಕಿಡ್ನಾಪ್ಗೂ ಮುನ್ನ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ರೇಣುಕಾಸ್ವಾಮಿಗೆ ಆಕ್ಸಿಡೆಂಟ್ ನಡೆದಿತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಆಕ್ಸಿಡೆಂಟ್ ಮಾಡಿದ್ದು ಬಹುತೇಕ ಖಚಿತ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಈ ಎಲ್ಲಾ ಅನುಮಾನಕ್ಕೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ