Advertisment

ದರ್ಶನ್ ಕೇಸ್​​ನಲ್ಲಿ ಸಚಿವರ ಒತ್ತಡ.. SPP ಬದಲಾವಣೆ ಆಗ್ತಾರಾ? ಸಿಎಂ ಸಿದ್ದು ಕೊಟ್ರು ಹೊಸ ಟ್ವಿಸ್ಟ್; ಏನದು?

author-image
Bheemappa
Updated On
ದರ್ಶನ್ ಕೇಸ್​​ನಲ್ಲಿ ಸಚಿವರ ಒತ್ತಡ.. SPP ಬದಲಾವಣೆ ಆಗ್ತಾರಾ? ಸಿಎಂ ಸಿದ್ದು ಕೊಟ್ರು ಹೊಸ ಟ್ವಿಸ್ಟ್; ಏನದು?
Advertisment
  • ಎಸ್​ಪಿಪಿ ಬದಲಾವಣೆ ಮಾಡಬೇಕೆಂದು ಒತ್ತಡ ಹಾಕ್ತಿದ್ದಾರಾ?
  • ಕೇಸ್​ನಲ್ಲಿ ವಿಶೇಷ ಅಭಿಯೋಜಕರು ಆಗಿರುವ ಪ್ರಸನ್ನ ಕುಮಾರ್
  • ಸಚಿವರು, ಶಾಸಕರು ಒತ್ತಡ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಅಂತಾರೆ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್​ ತನಿಖೆ ಹಂತದಲ್ಲಿ ಇರುವಾಗಲೇ ವಿಶೇಷ ಅಭಿಯೋಜಕರನ್ನ (SPP) ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಸದ್ಯ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Advertisment

ನಟ ದರ್ಶನ್ ಪ್ರಕರಣದಲ್ಲಿ ಎಸ್​​ಪಿಪಿ ಬದಲಾವಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಎಸ್​​ಪಿಪಿ ಬದಲಾವಣೆಯ ಪ್ರಸ್ತಾಪವೆ ಇಲ್ಲ. ಪ್ರಸನ್ನ ಕುಮಾರ್ ಅವರನ್ನ ಬದಲಾವಣೆ ಮಾಡಿ ಎಂದು ಯಾರು ನನ್ನ ಭೇಟಿ ಮಾಡಿಲ್ಲ. ಒತ್ತಡವನ್ನೂ ಹಾಕಿಲ್ಲ. ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಲಾಗಿದೆ. ಒಂದು ವೇಳೆ ಯಾರಾದ್ರೂ ಒತ್ತಡ ಹಾಕಿದರು ನಾವು ಕೇಳಲ್ಲ ಎಂದು ಹೇಳಿದ್ದಾರೆ.

ಎಸ್​​ಪಿಪಿ ಬದಲಾವಣೆಯ ಪ್ರಸ್ತಾವನೆ ನನ್ನ ‌ಮುಂದೆ ಬಂದಿಲ್ಲ. ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ. ಈ ಸಂಬಂಧ ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ. ಒತ್ತಡ ಹಾಕಿದ್ರು ನಾನು ಕೇಳಲ್ಲ. ಸಚಿವರು ಒತ್ತಡ ಹಾಕ್ತಿದ್ದಾರೆ ಅನ್ನೋದೆಲ್ಲ ಸತ್ಯವಲ್ಲ. ವಿರೋಧ ಪಕ್ಷದವರು ಹೇಳುವುದೆಲ್ಲ ನಿಜವಾಗಿರುತ್ತಾ?. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಡಲಾಗಿದೆ. ಇದೆಲ್ಲ ಹೇಳೋದೆಲ್ಲ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment