newsfirstkannada.com

ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

Share :

Published July 9, 2024 at 8:11am

Update July 9, 2024 at 8:12am

    ಹೆಣ್ಣುಮಕ್ಕಳಿಗೆ ಏನಾದ್ರೂ ಅಂದರೆ ಮನೆಯ ಗಂಡಸರಿಗೆ ಉರಿಯುತ್ತೆ

    ಇದು ಇಂಡಸ್ಟ್ರಿಗೆ ಬೇಸರವಾಗಿದೆ, ನಮ್ಮ ಕುಟುಂಬಕ್ಕೂ ನೋವಾಗಿದೆ

    ದರ್ಶನ್ ಆರೋಪ ಮುಕ್ತರಾಗಲೆಂದು ಪ್ರಾರ್ಥಿಸ್ತಿರೋ​ ನಟ-ನಟಿಯರು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿ ಜೈಲು ಸೇರಿರುವ ನಟ ದರ್ಶನ್​ ಸದ್ಯಕ್ಕೆ ಹೊರಗೆ ಬರೋದು ಅಷ್ಟು ಸುಲಭ ಇಲ್ಲ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹ ಮಾಡ್ತಿದ್ದಾರೆ. ಇದರ ನಡುವೆ ಸ್ಯಾಂಡಲ್​ವುಡ್​ ನಟ-ನಟಿಯರು, ದರ್ಶನ್​ ಆಪ್ತರು ದಾಸ ಆದಷ್ಟು ಬೇಗ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ಈ ಕೇಸ್​ ಕೋರ್ಟ್​​ನಲ್ಲಿದ್ದು, ವಿಚಾರಣೆ ಹಂತದಲ್ಲಿದೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಇದರ ನಡುವೆ ಸ್ಯಾಂಡಲ್​ವುಡ್​ ಕೆಲ ನಟ-ನಟಿಯರು ದರ್ಶನ್​ ಪರ ಬ್ಯಾಟಿಂಗ್​ ಮಾಡ್ತಿದ್ದಾರೆ.

ಇದನ್ನೂ ಓದಿ: ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

ದರ್ಶನ್ ಪ್ರಕರಣದಿಂದ ನೋವಲ್ಲಿರುವ ದೇವರಾಜ್ ಫ್ಯಾಮಿಲಿ

ನಟ ದರ್ಶನ್​ ಮತ್ತು ಡೈನಾಮಿಕ್​ ಹೀರೋ ದೇವರಾಜ್​ ಫ್ಯಾಮಿಲಿ ನಡುವೆ ಉತ್ತಮ ಬಾಂಧವ್ಯ ಇದೆ. ದೇವರಾಜ್​ ಕುಟುಂಬದ ಆಪ್ತರಲ್ಲಿ ನಟ ದರ್ಶನ್​ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಸೇರಿರುವುದರಿಂದ ದೇವರಾಜ್​ ಇಡೀ ಕುಟುಂಬ ನೋವಲ್ಲಿದ್ಯಂತೆ. ಅಪ್ಪ, ಅಮ್ಮ, ಅಣ್ಣ ನಾವೆಲ್ಲರೂ ನೋವು ಅನುಭವಿಸಿದ್ದೀವಿ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ದರ್ಶನಣ್ಣ ಆರೋಪದಿಂದ ಮುಕ್ತರಾಗಿ ಬರಲಿ ಎಂದು ಪ್ರಣಮ್​ ದೇವರಾಜ್​ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ಇದು ಇಂಡಸ್ಟ್ರಿಗೆ ಬೇಸರವಾಗಿದೆ. ನಮ್ಮ ಕುಟುಂಬಕ್ಕೂ ತುಂಬಾ ನೋವಾಗಿದೆ. ಕಾನೂನು ಅಂತ ಇದೆ. ಅದು ಏನಾಗುತ್ತೆ ಎಂಬುದನ್ನು ನೋಡಬೇಕು.

ಪ್ರಣಮ್​ ದೇವರಾಜ್

ಇನ್ನು ಪ್ರಜ್ವಲ್​ ದೇವರಾಜ್​ ಅಭಿನಯದ ಕರಾವಳಿ ಚಿತ್ರದಲ್ಲಿ ನಟ ದರ್ಶನ್​ ಕೂಟ ಒಂದು ಪಾತ್ರ ಮಾಡಬೇಕಿತ್ತು. ಆದ್ರೆ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲಿಗೆ ಹೋದ ಬೆನ್ನಲ್ಲೇ ಕರಾವಳಿ ಚಿತ್ರದಿಂದ ದರ್ಶನ್​ರನ್ನು ಕೈ ಬಿಡಲಾಗಿದೆ ಎಂದು ಸುದ್ದಿಗಳು ಕೇಳಿ ಬಂದಿದ್ವು. ಈ ಬಗ್ಗೆ ಕರಾವಳಿ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ನ್ಯೂಸ್​ಫಸ್ಟ್​ಗೆ ಸ್ಪಷ್ಟನೆ ನೀಡಿದ್ದಾರೆ. ಕರಾವಳಿ ಚಿತ್ರದಿಂದ ದರ್ಶನ್ನ ಕೈಬಿಡಲಾಗಿದೆ ಅನ್ನೋದು ತಪ್ಪು. ದರ್ಶನ್ ಅವರನ್ನ ನಾವು ಅಪ್ರೋಚ್ ಮಾಡೇ ಇಲ್ಲ ಎಂದಿದ್ದಾರೆ. ಇನ್ನು ನಟ ಪ್ರಜ್ವಲ್​ ದರ್ಶನ್​ರನ್ನು ಅಣ್ಣನ ಸ್ಥಾನದಲ್ಲಿ ನೋಡ್ತಿದ್ರು.. ಅವರು ಅರೆಸ್ಟ್​ ಆಗಿರುವ ಸುದ್ದಿ ಕೇಳಿದ ದಿನದಿಂದಲೂ ಪ್ರಜ್ವಲ್​ ಬೇಸರದಲ್ಲಿದ್ದು, ಮೌನವಾಗಿದ್ದಾರೆ ಎಂದು ಗುರುಗಾಣಿಗ ತಿಳಿಸಿದ್ದಾರೆ.

ಅದು ಒಂದು ವಿಶೇಷವಾದ ಪಾತ್ರ. ಅದನ್ನು ದೊಡ್ಡ ಕಲಾವಿದರ ಕಡೆಯಿಂದ ಮಾಡಿಸಬೇಕೆಂಬುದು ಇತ್ತು. ಶಿವಣ್ಣ, ಸುದೀಪ್, ದರ್ಶನ್​ ಅವರಂಥ ನಟರಿಂದ ಆ ಪಾತ್ರ ಮಾಡಿಸಬೇಕು. ತೂಕವಿರೋ ಪಾತ್ರಕ್ಕೆ ಜನಪ್ರಿಯ ನಟರನ್ನ ತರಬೇಕು ಎನ್ನುವುದು ಚಿತ್ರರಂಗದಲ್ಲಿ ನಡೆದಂತ ಖಾಸಗಿ ಮಾತುಕತೆ ಆಗಿದೆ. ಅವರತ್ತಿರ ಮಾತನಾಡಿಲ್ಲ, ಅಪ್ರೋಚ್ ಮಾಡಿಲ್ಲ ಅಂದಾಗ ಅವರನ್ನ ಕೈ ಬಿಡೋ ಪ್ರಶ್ನೆನೇ ಬರಲ್ಲ.

ಗುರುದತ್ ಗಾಣಿಗ, ಕರಾವಳಿ ಚಿತ್ರದ ನಿರ್ದೇಶಕ

ಇನ್ನು ನಟಿ ಅಪೂರ್ವ ಕೂಡ ದರ್ಶನ್​ ಜೈಲು ಪಾಲಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಈ ಉಸಾಬರಿ ಎಲ್ಲ ಏಕೆ ಬೇಕಿತ್ತು. ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ಅವ್ರ ಮನೆಯ ದೀಪನೇ ಹಾರಿ ಹೋಗಿದೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ ಸಹಿಸಿ ಕೊಳ್ತಾರಾ ಎಂದು ಪರೋಕ್ಷವಾಗಿ ನಟ ದರ್ಶನ್​ ಪರ ಅಪೂರ್ವ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ಗುರುದತ್ ಗಾಣಿಗ, ಕರಾವಳಿ ಚಿತ್ರದ ನಿರ್ದೇಶಕ

ಇವರಿಗೆಲ್ಲ ಬೇರೆಯವರು ಮೆಸೇಜ್ ಮಾಡಿದಾಗ ನಮಗೆಲ್ಲ ಹೇಗೆ ಉರಿಯುತ್ತೆ. ಬೇರೆಯವರ ಹೆಣ್ಣು ಮಕ್ಕಳಿಗೆ ಯಾರದರೂ ಏನಾದರು ಅಂದಾಗ ಅವರ ಮನೆಯಲ್ಲಿರೋ ಗಂಡಸರಿಗು ಉರಿಯುತ್ತೆ. ಆ ಮಹಿಳೆಯ ಕಡೆಯ ಗಂಡಸರಿಗೆ ಬೇಜಾರ್ ಆಗುತ್ತದೆ.

ಅಪೂರ್ವ, ನಟಿ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ದಿನದೂಡುತ್ತಿದ್ದಾರೆ. ಇತ್ತ ಹೊರಗೆ ದರ್ಶನ್​ ಆಪ್ತರು, ಸ್ಯಾಂಡಲ್​ವುಡ್​ ನಟ-ನಟಿಯರು ದರ್ಶನ್ ಆರೋಪ ಮುಕ್ತರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

https://newsfirstlive.com/wp-content/uploads/2024/07/DARSHAN_DEVARAJ_FAMILY.jpg

    ಹೆಣ್ಣುಮಕ್ಕಳಿಗೆ ಏನಾದ್ರೂ ಅಂದರೆ ಮನೆಯ ಗಂಡಸರಿಗೆ ಉರಿಯುತ್ತೆ

    ಇದು ಇಂಡಸ್ಟ್ರಿಗೆ ಬೇಸರವಾಗಿದೆ, ನಮ್ಮ ಕುಟುಂಬಕ್ಕೂ ನೋವಾಗಿದೆ

    ದರ್ಶನ್ ಆರೋಪ ಮುಕ್ತರಾಗಲೆಂದು ಪ್ರಾರ್ಥಿಸ್ತಿರೋ​ ನಟ-ನಟಿಯರು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿ ಜೈಲು ಸೇರಿರುವ ನಟ ದರ್ಶನ್​ ಸದ್ಯಕ್ಕೆ ಹೊರಗೆ ಬರೋದು ಅಷ್ಟು ಸುಲಭ ಇಲ್ಲ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹ ಮಾಡ್ತಿದ್ದಾರೆ. ಇದರ ನಡುವೆ ಸ್ಯಾಂಡಲ್​ವುಡ್​ ನಟ-ನಟಿಯರು, ದರ್ಶನ್​ ಆಪ್ತರು ದಾಸ ಆದಷ್ಟು ಬೇಗ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ಈ ಕೇಸ್​ ಕೋರ್ಟ್​​ನಲ್ಲಿದ್ದು, ವಿಚಾರಣೆ ಹಂತದಲ್ಲಿದೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಇದರ ನಡುವೆ ಸ್ಯಾಂಡಲ್​ವುಡ್​ ಕೆಲ ನಟ-ನಟಿಯರು ದರ್ಶನ್​ ಪರ ಬ್ಯಾಟಿಂಗ್​ ಮಾಡ್ತಿದ್ದಾರೆ.

ಇದನ್ನೂ ಓದಿ: ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

ದರ್ಶನ್ ಪ್ರಕರಣದಿಂದ ನೋವಲ್ಲಿರುವ ದೇವರಾಜ್ ಫ್ಯಾಮಿಲಿ

ನಟ ದರ್ಶನ್​ ಮತ್ತು ಡೈನಾಮಿಕ್​ ಹೀರೋ ದೇವರಾಜ್​ ಫ್ಯಾಮಿಲಿ ನಡುವೆ ಉತ್ತಮ ಬಾಂಧವ್ಯ ಇದೆ. ದೇವರಾಜ್​ ಕುಟುಂಬದ ಆಪ್ತರಲ್ಲಿ ನಟ ದರ್ಶನ್​ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಸೇರಿರುವುದರಿಂದ ದೇವರಾಜ್​ ಇಡೀ ಕುಟುಂಬ ನೋವಲ್ಲಿದ್ಯಂತೆ. ಅಪ್ಪ, ಅಮ್ಮ, ಅಣ್ಣ ನಾವೆಲ್ಲರೂ ನೋವು ಅನುಭವಿಸಿದ್ದೀವಿ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ದರ್ಶನಣ್ಣ ಆರೋಪದಿಂದ ಮುಕ್ತರಾಗಿ ಬರಲಿ ಎಂದು ಪ್ರಣಮ್​ ದೇವರಾಜ್​ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ಇದು ಇಂಡಸ್ಟ್ರಿಗೆ ಬೇಸರವಾಗಿದೆ. ನಮ್ಮ ಕುಟುಂಬಕ್ಕೂ ತುಂಬಾ ನೋವಾಗಿದೆ. ಕಾನೂನು ಅಂತ ಇದೆ. ಅದು ಏನಾಗುತ್ತೆ ಎಂಬುದನ್ನು ನೋಡಬೇಕು.

ಪ್ರಣಮ್​ ದೇವರಾಜ್

ಇನ್ನು ಪ್ರಜ್ವಲ್​ ದೇವರಾಜ್​ ಅಭಿನಯದ ಕರಾವಳಿ ಚಿತ್ರದಲ್ಲಿ ನಟ ದರ್ಶನ್​ ಕೂಟ ಒಂದು ಪಾತ್ರ ಮಾಡಬೇಕಿತ್ತು. ಆದ್ರೆ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲಿಗೆ ಹೋದ ಬೆನ್ನಲ್ಲೇ ಕರಾವಳಿ ಚಿತ್ರದಿಂದ ದರ್ಶನ್​ರನ್ನು ಕೈ ಬಿಡಲಾಗಿದೆ ಎಂದು ಸುದ್ದಿಗಳು ಕೇಳಿ ಬಂದಿದ್ವು. ಈ ಬಗ್ಗೆ ಕರಾವಳಿ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ನ್ಯೂಸ್​ಫಸ್ಟ್​ಗೆ ಸ್ಪಷ್ಟನೆ ನೀಡಿದ್ದಾರೆ. ಕರಾವಳಿ ಚಿತ್ರದಿಂದ ದರ್ಶನ್ನ ಕೈಬಿಡಲಾಗಿದೆ ಅನ್ನೋದು ತಪ್ಪು. ದರ್ಶನ್ ಅವರನ್ನ ನಾವು ಅಪ್ರೋಚ್ ಮಾಡೇ ಇಲ್ಲ ಎಂದಿದ್ದಾರೆ. ಇನ್ನು ನಟ ಪ್ರಜ್ವಲ್​ ದರ್ಶನ್​ರನ್ನು ಅಣ್ಣನ ಸ್ಥಾನದಲ್ಲಿ ನೋಡ್ತಿದ್ರು.. ಅವರು ಅರೆಸ್ಟ್​ ಆಗಿರುವ ಸುದ್ದಿ ಕೇಳಿದ ದಿನದಿಂದಲೂ ಪ್ರಜ್ವಲ್​ ಬೇಸರದಲ್ಲಿದ್ದು, ಮೌನವಾಗಿದ್ದಾರೆ ಎಂದು ಗುರುಗಾಣಿಗ ತಿಳಿಸಿದ್ದಾರೆ.

ಅದು ಒಂದು ವಿಶೇಷವಾದ ಪಾತ್ರ. ಅದನ್ನು ದೊಡ್ಡ ಕಲಾವಿದರ ಕಡೆಯಿಂದ ಮಾಡಿಸಬೇಕೆಂಬುದು ಇತ್ತು. ಶಿವಣ್ಣ, ಸುದೀಪ್, ದರ್ಶನ್​ ಅವರಂಥ ನಟರಿಂದ ಆ ಪಾತ್ರ ಮಾಡಿಸಬೇಕು. ತೂಕವಿರೋ ಪಾತ್ರಕ್ಕೆ ಜನಪ್ರಿಯ ನಟರನ್ನ ತರಬೇಕು ಎನ್ನುವುದು ಚಿತ್ರರಂಗದಲ್ಲಿ ನಡೆದಂತ ಖಾಸಗಿ ಮಾತುಕತೆ ಆಗಿದೆ. ಅವರತ್ತಿರ ಮಾತನಾಡಿಲ್ಲ, ಅಪ್ರೋಚ್ ಮಾಡಿಲ್ಲ ಅಂದಾಗ ಅವರನ್ನ ಕೈ ಬಿಡೋ ಪ್ರಶ್ನೆನೇ ಬರಲ್ಲ.

ಗುರುದತ್ ಗಾಣಿಗ, ಕರಾವಳಿ ಚಿತ್ರದ ನಿರ್ದೇಶಕ

ಇನ್ನು ನಟಿ ಅಪೂರ್ವ ಕೂಡ ದರ್ಶನ್​ ಜೈಲು ಪಾಲಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಈ ಉಸಾಬರಿ ಎಲ್ಲ ಏಕೆ ಬೇಕಿತ್ತು. ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ಅವ್ರ ಮನೆಯ ದೀಪನೇ ಹಾರಿ ಹೋಗಿದೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ ಸಹಿಸಿ ಕೊಳ್ತಾರಾ ಎಂದು ಪರೋಕ್ಷವಾಗಿ ನಟ ದರ್ಶನ್​ ಪರ ಅಪೂರ್ವ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ಗುರುದತ್ ಗಾಣಿಗ, ಕರಾವಳಿ ಚಿತ್ರದ ನಿರ್ದೇಶಕ

ಇವರಿಗೆಲ್ಲ ಬೇರೆಯವರು ಮೆಸೇಜ್ ಮಾಡಿದಾಗ ನಮಗೆಲ್ಲ ಹೇಗೆ ಉರಿಯುತ್ತೆ. ಬೇರೆಯವರ ಹೆಣ್ಣು ಮಕ್ಕಳಿಗೆ ಯಾರದರೂ ಏನಾದರು ಅಂದಾಗ ಅವರ ಮನೆಯಲ್ಲಿರೋ ಗಂಡಸರಿಗು ಉರಿಯುತ್ತೆ. ಆ ಮಹಿಳೆಯ ಕಡೆಯ ಗಂಡಸರಿಗೆ ಬೇಜಾರ್ ಆಗುತ್ತದೆ.

ಅಪೂರ್ವ, ನಟಿ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ದಿನದೂಡುತ್ತಿದ್ದಾರೆ. ಇತ್ತ ಹೊರಗೆ ದರ್ಶನ್​ ಆಪ್ತರು, ಸ್ಯಾಂಡಲ್​ವುಡ್​ ನಟ-ನಟಿಯರು ದರ್ಶನ್ ಆರೋಪ ಮುಕ್ತರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More