/newsfirstlive-kannada/media/post_attachments/wp-content/uploads/2024/08/Rachita-ram.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್​​ಗೆ ಸಂಕಟಗಳ ಮೇಲೆ ಸಂಕಟ ಎದುರಾಗುತ್ತಿದೆ. ಇದರ ಜೊತೆಗೆ ನಟನಿಗೆ ಸ್ತ್ರೀ ಕಂಟಕ ಬೆನ್ನು ಬಿದ್ದಿದೆಯಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ದರ್ಶನ್​​ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ನಟಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿದ ಪ್ರಕರಣ ಸಂಬಂಧ ರೇಣುಕಾಸ್ವಾಮಿ ಕೊಲೆಯಾಗಿದೆ. ಕೊಲೆ ಪ್ರಕರಣದಲ್ಲಿ 3 ತಿಂಗಳಿಂದಲೂ ಸೆರೆಮನೆಯಲ್ಲಿರುವ ನಟನನ್ನು ಅನೇಕ ತಾರೆಯರು ಭೇಟಿ ಮಾಡಲು ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2024/08/darshan-2.jpg)
ಇತ್ತೀಚೆಗೆ ನಟಿ ರಚಿತಾ ರಾಮ್​ ಕೂಡ ದರ್ಶನ್​ ಕಾಣಲು ಜೈಲಿಗೆ ಬಂದಿದ್ದಾರೆ. ಆದರೆ ಡಿಂಪಲ್​ ಕ್ವೀನ್​ ಭೇಟಿ ಬಳಿಕ ದರ್ಶನ್​​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವ ಫೋಟೋ ವೈರಲ್​ ಆಗಿದೆ. ಈ ಸಂಬಂಧ ಒಟ್ಟು ಮೂರು ಎಫ್​ಐಆರ್ ದಾಖಲಾಗಿದ್ದು, ಎರಡರಲ್ಲಿ ದರ್ಶನ್ ಹೆಸರು ಇದೆ.
ಪವಿತ್ರಾ ಗೌಡರಿಂದಾಗಿ ದರ್ಶನ್​​ ಜೈಲು ಸೇರಿದ್ದಾರೆ ಎಂಬ ಸಂಗತಿಯನ್ನು ಮಾತನಾಡುತ್ತಿರುವುದರ ಜೊತೆಗೆ ಅಭಿಮಾನಿಗಳು ನೊಂದಿರುವುದು ಒಂದೆಡೆಯಾದರೆ. ಇದೀಗ ರಚಿತಾ ರಾಮ್​ ಭೇಟಿ ಬಳಿಕ ದರ್ಶನ್​ಗೆ ಮತ್ತೊಂದು ಕಂಟಕ ಶುರುವಾಗಿದೆ ಎಂಬ ಸಂಗತಿ ಬಗ್ಗೆ ಮಾತನಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/darshan-1-1.jpg)
ರಚಿತಾ ರಾಮ್​ 22ನೇ ತಾರೀಖು ಮಧ್ಯಾಹ್ನದ ವೇಳೆ ನಟ ದರ್ಶನ್ ಭೇಟಿ ಮಾಡಲು ಬಂದಿದ್ದರು. ಸ್ಪೇಷಲ್ ಎಂಟ್ರಿ ರೂಂನಲ್ಲಿ ದರ್ಶನ್​ರನ್ನು ಭೇಟಿ ಮಾಡಿದ್ದರು. ಈ ವೇಳೆ ಟೀ ಕುಡಿಯಲು ಹೋಗಿದ್ದಾಗ ಪೋಟೋ ಕ್ಲಿಕ್ ಆಗಿದೆ ಎನ್ನಲಾಗುತ್ತಿದೆ.
ವಿಸಿ ಕೋರ್ಟ್ ಹಿಂಭಾಗ ಇರುವ ಜೈಲ್ ಪಾರ್ಕ್ ಇರುವ ಜಾಗದಲ್ಲಿ ದರ್ಶನ್​​ ಫೋಟೋ ಕ್ಲಿಕ್​ ಆಗಿದೆ ಎನ್ನಲಾಗುತ್ತಿದೆ. ಅಲ್ಲಿ ಕೈದಿಗಳಿಗೆ ಟೀ ಕುಡಿಯಲು, ವಾಕ್ ಮಾಡೋಕೆ, ಆಟಕ್ಕೆ ಹೀಗೆ ವಾಲಿಬಾಲ್ ಆಡಲು ಅವಕಾಶವನ್ನು ನೀಡಲಾಗುತ್ತದೆ. ಈ ಪಾರ್ಕ್ ನಲ್ಲಿ ಈಡೀ ದಿನ ಕೈದಿಗಳಿಗೆ ಓಪನ್ ಪ್ಲೇಸ್ ಇರುತ್ತದೆ. ಆದರೀಗ ದರ್ಶನ್​ ಪ್ರಕರಣ ಬೆಳಕಿಗೆ ಬಂದಂತೆ ಪಾರ್ಕ್​ ಕ್ಲೋಸ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us