ದರ್ಶನ್ ಪುತ್ರ ವಿನೀಶ್​ ಹೋಗಿದ್ದು ಎಲ್ಲಿಗೆ..? ಅಪ್ಪನ ಸಂಕಷ್ಟ ನಿವಾರಣೆಗೆ ದೇವರಲ್ಲಿ ವಿಶೇಷ ಪ್ರಾರ್ಥನೆ

author-image
Bheemappa
Updated On
ದರ್ಶನ್ ಪುತ್ರ ವಿನೀಶ್​ ಹೋಗಿದ್ದು ಎಲ್ಲಿಗೆ..? ಅಪ್ಪನ ಸಂಕಷ್ಟ ನಿವಾರಣೆಗೆ ದೇವರಲ್ಲಿ ವಿಶೇಷ ಪ್ರಾರ್ಥನೆ
Advertisment
  • ಪ್ರಕರಣದಲ್ಲಿ ಬೇಲ್​ ಪಡೆದುಕೊಂಡು ಹೊರಗಿರುವ ದರ್ಶನ್
  • ವಿನೀಶ್ ಭೇಟಿಕೊಟ್ಟ ಮಹಾನ್ ಶಕ್ತಿ ದೇವಾಲಯ ಎಲ್ಲಿದೆ?
  • ನಟ ದರ್ಶನ್ ಅವರು ಕೋರ್ಟ್​ಗೆ ಹಾಜರಾಗಿ ಬಂದಿದ್ದಾರೆ

ರಾಮನಗರ: ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ನಿನ್ನೆಯಷ್ಟೇ ಕೋರ್ಟ್​ಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ದರ್ಶನ್ ಪುತ್ರ ವಿನೀಶ್ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ್ದು ಅಪ್ಪನ ಸಂಕಷ್ಟ ನಿವಾರಣೆಗೆ ದೇವಿ ಬಳಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.

ವಿನೀಶ್ ಅವರು ರಾಮನಗರದ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಇರುವ ಶಕ್ತಿವಂತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅಪ್ಪನ ಸಂಕಷ್ಟ ನಿವಾರಣೆ ಮಾಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ದರ್ಶನ್ ಪುತ್ರ ವಿನಿಶ್​ಗೆ ದೇವಾಲಯ ಧರ್ಮದರ್ಶಿಗಳು ಗೌರವ ಸಲ್ಲಿಸಿದರು. ಜೊತೆಗೆ ವಿನೀಶ್​​ಗೆ ತಾಯಿ ಚಾಮುಂಡೇಶ್ವರಿ ಪೋಟೋ ನೀಡುವ ಮೂಲಕ ಮಲ್ಲೇಶ್ ಗುರೂಜಿ ಶುಭಕೋರಿದರು.

publive-image

ಇದನ್ನೂ ಓದಿ:ಧ್ರುವ ಸರ್ಜಾ, ಪ್ರೇರಣಾಗೆ ಧನ್ಯವಾದ ಹೇಳಿದ ಸರ್ಕಾರಿ ಶಾಲೆ ಮಕ್ಕಳು.. ಯಾಕೆ ಗೊತ್ತಾ?

ವಿನೀಶ್ ಅವರು ದೇವರ ದರ್ಶನ ಪಡೆಯುವಾಗ ಕೆಲವರು ಯಾರೋ.. ವಿಡಿಯೋ ಮಾಡುತ್ತಿದ್ದರು. ಈ ವೇಳೆ ವಿಡಿಯೋ ಮಾಡದಂತೆ ಮನವಿ ಮಾಡಿದ್ದಾರೆ. ಇನ್ನು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ದೇವರ ಆಶೀರ್ವಾದ ಪಡೆಯುತ್ತಿದ್ದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment