/newsfirstlive-kannada/media/post_attachments/wp-content/uploads/2024/06/darshan43.jpg)
ಬೆಂಗಳೂರು: ನೆಚ್ಚಿನ ನಟನ ಮೇಲೆ ಅಭಿಮಾನ ಇರಬೇಕೇ ಹೊರೆತು ಹುಚ್ಚು ಅಭಿಮಾನ ಇರಬಾರದು. ಕುಳಿತುಕೊಂಡರು, ನಿಂತುಕೊಂಡರು ಬರೀ ಡಿ ಬಾಸ್​.. ಡಿ ಬಾಸ್​​ ಅಂತ ಜಪಿಸೋ ಅಭಿಮಾನಿಗಳೇ ಹೆಚ್ಚು. ಮನೆ, ಮನದಲ್ಲಿಟ್ಟು ಆರಾಧಿಸ್ತಾಯಿದ್ದ ಫ್ಯಾನ್ಸ್​ಗೆ ಇಂದು ದೊಡ್ಡ ಬರಸಿಡಿಲು ಬಡಿದಂತೆ ಆಗಿತ್ತು. ಆದರೆ ಜೈಲಿಗೆ ಹೋಗೋ ಮುನ್ನ ದರ್ಶನ್ ಆಡಿದ ಒಂದು ಫ್ಯಾನ್ಸ್ಗೆ ಹೊಸ ಚೈತನ್ಯ, ಹುರುಪು ತಂದಿದೆ.
/newsfirstlive-kannada/media/post_attachments/wp-content/uploads/2024/06/darshan37.jpg)
ಕೊಲೆ ಕೇಸ್ನಲ್ಲಿ ದರ್ಶನ್​ ಜೈಲಿಗೆ ಹೋಗುತ್ತಾರೆ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿಗೆ ದೌಡಾಯಿಸಿದ್ದರು. ಕೊನೆಯದಾಗಿ ನೆಚ್ಚಿನ ನಟನನ್ನು ಕಣ್ತುಂಬಿ ಕೊಳ್ಳಬೇಕು ಅಂತ ತುದಿಗಾಲಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಬೇಸರಗೊಂಡು ಡಿ ಬಾಸ್​ನನ್ನು ನೋಡಲು ನಿಂತಿದ್ದ ಅಭಿಮಾನಿಗಳಿಗೆ ನಟ ದರ್ಶನ್​ ಆ ಮಾತಿನ ಮೂಲಕ ಹೊಸ ಹುರುಪನ್ನು ತುಂಬಿದ್ದಾರೆ.
ಇಂದು ನಟ ದರ್ಶನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸ್ ವ್ಯಾನ್​ನಲ್ಲಿ ಪರಪ್ಪನ ಅಗ್ರಹಾರಕ್ಕೆ ಪ್ರಯಾಣ ನಡೆಸಿದರು. ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್​ನನ್ನು ನೋಡಲು ಜಮಾಯಿಸಿದ್ದರು. ಆಗ ಪೊಲೀಸ್ ವ್ಯಾನ್​ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ನಟ ದರ್ಶನ್ ಕೈ ಬೀಸಿ ಮಾತನಾಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಆ ಒಂದು ಮಾತಿನಿಂದ ಧೈರ್ಯ ತುಂಬಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan34.jpg)
ಪೊಲೀಸ್ ವ್ಯಾನ್​ ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದ ದರ್ಶನ್ ಪ್ಲೈಯಿಂಗ್ ಕಿಸ್ ಕೊಟ್ಟು ನಾನು ಆರಾಮಾಗಿದ್ದೇನೆ. ನನಗೆ ಏನೂ ಆಗಲ್ಲ ಹೆದರಬೇಡಿ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಕೊಂಡ ಅಭಿಮಾನಿಗಳು ಜೋರಾಗಿ ಜೈ ಡಿಬಾಸ್​ ಅಂತ ಕೂಗಾಡ ತೊಡಗಿದ್ದಾರೆ. ಇಷ್ಟೂ ದಿನದ ಬಳಿಕ ನೆಚ್ಚಿನ ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಸಖತ್​ ಖುಷಿ ಪಟ್ಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ವ್ಯಾನ್​ನಲ್ಲಿ ನಟ ದರ್ಶನ್ ಅವರು ಪ್ರತಿಕ್ರಿಯೆ ನೀಡಿರೋ ವಿಡಿಯೋ ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us