/newsfirstlive-kannada/media/post_attachments/wp-content/uploads/2024/11/davanagere-1.jpg)
ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಹಿಂದೂಗಳಂತೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆ ಪೂರ್ತಿ ದೀಪ ಉರಿಸಿ, ಬೆಳಕು ಹರಿಸಿ, ದೇವರನ್ನು ಪೂಜಿಸಿ ಹಬ್ಬ ಆಚರಿಸುತ್ತಾರೆ. ಮಾತ್ರವಲ್ಲದೆ ಹೊಸ ಬಟ್ಟೆಯನ್ನು ಧರಿಸಿ, ಮನೆಯವರೆಲ್ಲರೂ ಕೂಡಿಕೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಾವಣಗೆರೆಯ ಗ್ರಾಮವೊಂದರಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವುದೇ ಇಲ್ಲವಂತೆ. ಆದ್ಯಾಕೆ? ಈ ಸ್ಟೋರಿ ಓದಿ.
ದೀಪದಿಂದ ದೀಪವ ಹಚ್ಚಬೇಕು ಮಾನವ ಹಾಡು ಕೇಳಿದ್ದೀರಾ? ದೀಪ ಬೆಳಗಿದಂತೆ ಜೀವನವು ಬೆಳಗಬೇಕು. ಕತ್ತಲೆಯಿಂದ ಬೆಳಕಿನೆಡೆ ಜೀವನ ಸಾಗಬೇಕು. ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರಬೇಕು ಎಂದು ದೀಪಾವಳಿ ಹಬ್ಬ ಸಾರುವ ವಿಶೇಷ ಸಂದೇಶ. ಹಾಗಾಗಿ ಭಾರತೀಯರಿಗೆ ಈ ಹಬ್ಬ ಭಾರೀ ವಿಶೇಷ. ಆದರೆ ದಾವಣಗೆರೆಯ ಲೋಕಿಕೆರೆ ಗ್ರಾಮದಲ್ಲಿ ಕರಾಳ ದೀಪಾವಳಿ ಆಚರಿಸಲಾಗುತ್ತೆ. ಪ್ರತಿ ವರ್ಷ ಈ ಗ್ರಾಮದಲ್ಲಿ ಅರ್ಧದಷ್ಟು ಮನೆಗಳು ಹಬ್ಬವನ್ನೇ ಆಚರಿಸುವುದಿಲ್ಲವಂತೆ.
/newsfirstlive-kannada/media/post_attachments/wp-content/uploads/2024/11/davanagere-2.jpg)
ಇದನ್ನೂ ಓದಿ: ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾದ ಲಕ್ಷ್ಮೀ ನಿವಾಸದ ಚೆಲುವೆ; ಏನದು?
ದೀಪಾವಳಿಯಂದು ಈ ಗ್ರಾಮದ ಜನರು ಹೊಸಬಟ್ಟೆ ತರಲ್ಲ, ತಳಿರು ತೋರಣ ಕಟ್ಟಲ್ಲ, ಲಕ್ಷ್ಮೀ ಪೂಜೆ ಮಾಡೋದಿಲ್ಲ. ಹಾಗಂತ ಇವರು ದೀಪಾವಳಿ ಹಬ್ಬ ವಿರೋಧಿಗಳು ಅಲ್ಲೇ ಅಲ್ಲ. ಹಬ್ಬ ಆಚರಿಸದೇ ಇರೋದಕ್ಕೆ ಒಂದು ಕಾರಣವಿದೆ. ಅದೇನೆಂದರೆ ಕೆಡುಕಾಗುತ್ತೆ ಎಂಬ ನಂಬಿಕೆ.
ಇದನ್ನೂ ಓದಿ: ಜೀವನವನ್ನೇ ಕತ್ತಲಾಗಿಸಿದ ಪಟಾಕಿ.. ಪುಟ್ಟ ಮಕ್ಕಳು ಸೇರಿ 22 ಮಂದಿಗೆ ಗಾಯ
/newsfirstlive-kannada/media/post_attachments/wp-content/uploads/2024/11/davanagere-3.jpg)
ಹೌದು. ನೂರಾರು ವರ್ಷಗಳ ಹಿಂದೆ ದೀಪಾವಳಿ ಹಬ್ಬ ಆಚರಣೆಗೆ ಕಾಶಿಕಡ್ಡಿ ತರಲು ಹೋಗಿದ್ದ ಲೋಕಿಕೆರೆ ಗ್ರಾಮಸ್ಥರು ವಾಪಸ್ ಬರಲಿಲ್ವಂತೆ, ಹೀಗಾಗಿ ದೀಪಾವಳಿ ಹಬ್ಬ ಆಚರಿಸುವುದಿಲ್ಲ. ಒಂದ್ವೇಳೆ ಹಬ್ಬ ಆಚರಿಸಿದ್ರೆ ಊರಿನಲ್ಲಿ ಕೆಡಕಾಗುತ್ತೆ ಎಂಬ ನಂಬಿಕೆ ಇದೆ ಅಂತಾರೆ ಗ್ರಾಮಸ್ಥರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us