/newsfirstlive-kannada/media/post_attachments/wp-content/uploads/2025/07/PSI-DEATH.jpg)
ತುಮಕೂರು: ದಾವಣಗೆರೆ ಪಿಎಸ್​ಐ ತುಮಕೂರಿನ ದ್ವಾರಕಾ ಹೋಟೆಲ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಗರಾಜಪ್ಪ (45) ಅನುಮಾನಾಸ್ಪದ ರೀತಿಯಲ್ಲಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ
/newsfirstlive-kannada/media/post_attachments/wp-content/uploads/2025/07/PSI-DEATH1.jpg)
ಕಳೆದ 1ನೇ ತಾರೀಖು ಪಿಎಸ್​ಐ ನಾಗರಾಜಪ್ಪ ತುಮಕೂರು ನಗರಕ್ಕೆ ಬಂದಿದ್ದರು. ದ್ವಾರಕಾ ಹೋಟೆಲ್​ನ ಲಾಡ್ಜ್​ನ 4ನೇ ಮಹಡಿಯಲ್ಲಿ ಬಾಡಿಗೆ ಪಡೆದಿದುಕೊಂಡಿದ್ದರು. ಅದೇ 4ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.
ಅವರ ರೂಂನಲ್ಲಿ ಡೇತ್ ನೋಟ್ ಪತ್ತೆಯಾಗಿದೆ. ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ ಎಂದು ಬರೆದುಕೊಂಡಿರೋದು ಗೊತ್ತಾಗಿದೆ. ಲಾಡ್ಜ್​ನಲ್ಲಿ ದುರ್ವಾಸನೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us