ತುಮಕೂರಿನಲ್ಲಿ ಪ್ರಾಣಬಿಟ್ಟ ದಾವಣಗೆರೆ PSI.. ಹಲವು ಅನುಮಾನ, ಅಸಲಿ ಕಾರಣವೇನು..?

author-image
Veena Gangani
Updated On
ತುಮಕೂರಿನಲ್ಲಿ ಪ್ರಾಣಬಿಟ್ಟ ದಾವಣಗೆರೆ PSI.. ಹಲವು ಅನುಮಾನ, ಅಸಲಿ ಕಾರಣವೇನು..?
Advertisment
  • ತುಮಕೂರು ನಗರದ ದ್ವಾರಕಾ ಹೋಟೆಲ್​ನಲ್ಲಿ ನೇಣಿಗೆ ಶರಣು
  • ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ
  • ಸ್ಥಳಕ್ಕೆ ಭೇಟಿ ಕೊಟ್ಟ ತುಮಕೂರು ನಗರ ಠಾಣೆ ಪೊಲೀಸರು

ತುಮಕೂರು: ದಾವಣಗೆರೆ ಪಿಎಸ್​ಐ ತುಮಕೂರಿನ ದ್ವಾರಕಾ ಹೋಟೆಲ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಗರಾಜಪ್ಪ (45) ಅನುಮಾನಾಸ್ಪದ ರೀತಿಯಲ್ಲಿ ಪ್ರಾಣಬಿಟ್ಟಿದ್ದಾರೆ.

ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ

publive-image

ಕಳೆದ 1ನೇ ತಾರೀಖು ಪಿಎಸ್​ಐ ನಾಗರಾಜಪ್ಪ ತುಮಕೂರು ನಗರಕ್ಕೆ ಬಂದಿದ್ದರು. ದ್ವಾರಕಾ ಹೋಟೆಲ್​ನ ಲಾಡ್ಜ್​ನ 4ನೇ ಮಹಡಿಯಲ್ಲಿ ಬಾಡಿಗೆ ಪಡೆದಿದುಕೊಂಡಿದ್ದರು. ಅದೇ 4ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.

ಅವರ ರೂಂನಲ್ಲಿ ಡೇತ್ ನೋಟ್ ಪತ್ತೆಯಾಗಿದೆ. ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ ಎಂದು ಬರೆದುಕೊಂಡಿರೋದು  ಗೊತ್ತಾಗಿದೆ. ಲಾಡ್ಜ್​ನಲ್ಲಿ ದುರ್ವಾಸನೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment