/newsfirstlive-kannada/media/post_attachments/wp-content/uploads/2025/04/DK-SHIVAKUMAR.jpg)
ಜಾತಿ ಗಣತಿ ವರದಿಯ ಚದುರಂಗದಾಟಕ್ಕೆ ಇಳಿದಿರೋ ಸಿದ್ದರಾಮಯ್ಯ ಈಗಾಗಲೇ ಅಸಲಿ ಆಟ ಶುರುಮಾಡಿಬಿಟ್ಟಿದ್ದಾರೆ. ಸಂಪುಟದಲ್ಲಿ ವರದಿ ಮಂಡಿಸಿ ತಮ್ಮದೇ ಪಕ್ಷದೊಳಗೆ ಬಲಿಷ್ಠ ಜಾತಿಗಳ ಜೊತೆ ಸಿಎಂ ಜಟಾಪಟಿಗೆ ಇಳಿದಿದ್ದಾರೆ.
ಕಾಂಗ್ರೆಸ್​​​ ಪಕ್ಷದಲ್ಲೇ ಜಾತಿ ಗಣತಿ ಗಲಾಟೆಯ ಜಂಜಾಟ!
ಜಾತಿ ಜನಗಣತಿ ವಿರುದ್ಧ ಒಕ್ಕಲಿಗ ಸಮುದಾಯ ತೀವ್ರ ಅಸಮಾಧಾನ ಹೊರ ಹಾಕ್ತಿದೆ. ಜ್ವಾಲೆ ಜ್ವಾಲಾಮುಖಿಯಾಗಿ ಬದಲಾಗ್ತಿರೋದ್ರ ಸುಳಿವು ಅರಿತಿರೋ ಡಿಕೆಶಿ, ದಿಢೀರ್​​ ಒಕ್ಕಲಿಗ ಶಾಸಕರ ಸಭೆ ಕರೆದಿದ್ದಾರೆ.
ಇದನ್ನೂ ಓದಿ: BREAKING: ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ; ಯಾವ ಜಾತಿ ಜನಸಂಖ್ಯೆ ಎಷ್ಟು?
‘ಕೈ’ ಒಕ್ಕಲಿಗ ಶಾಸಕರ ಸಭೆ ಕರೆದ ಡಿಕೆಶಿ
ಜಾತಿಗಣತಿ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿರೋ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ದಿಢೀರ್ ಶಾಸಕರ ಸಭೆ ಕರೆದಿದ್ದಾರೆ​. ಕಾಂಗ್ರೆಸ್​ನ ಒಕ್ಕಲಿಗ ಶಾಸಕರನ್ನ ಮಾತ್ರ ಈ ಮೀಟಿಂಗ್​ಗೆ ಆಹ್ವಾನಿಸಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಈ ಸಭೆ ನಡೆಯಲಿದ್ದು, ಮೀಟಿಂಗ್​ನಲ್ಲಿ ಎಂಎಲ್​ಎಗಳ ಅಭಿಪ್ರಾಯವನ್ನ ಡಿ.ಕೆ ಶಿವಕುಮಾರ್ ಆಲಿಸಲಿದ್ದಾರೆ. ಈ ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಅಂತ ಬಹಿರಂಗ ಅಸಮಾಧಾನ ಕೇಳಿ ಬರ್ತಿರೋ ಕಾರಣ ವರದಿ ಬಗ್ಗೆ ಸಾಧಕ, ಬಾಧಕಗಳ ಚರ್ಚೆ ನಡೆಸಲಿದ್ದಾರೆ. ಏಪ್ರಿಲ್​​ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಡಿಕೆಶಿ ಕರೆದ ಈ ಸಭೆ ಕುತೂಹಲಕ್ಕೆ ಕಾರಣ ಆಗಿದೆ.
ಯಾರಿಗೂ ಅನ್ಯಾಯವಾಗೋದಕ್ಕೆ ಬಿಡಲ್ಲ.. ಎಲ್ಲರ ಗೌರವ ಕಾಪಾಡ್ತೇವೆ ಅಂತಿರೋ ಡಿಸಿಎಂ ಡಿ.ಕೆ ಶಿವಕುಮಾರ್​ರ ಇವತ್ತಿನ ನಡೆ ಮೇಲೆ ಕುತೂಹಲ ನೆಟ್ಟಿದೆ. ಜಾತಿಗಣತಿಗೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿರೋದು ಗೊತ್ತೇ ಇದೆ. ಈ ನಡುವೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಲ್ಲೊಬ್ಬರಾದ ಡಿಕೆಶಿ, ಪಕ್ಷದ ಸಮುದಾಯದ ಶಾಸಕರನ್ನ ಒಂದೆಡೆ ಸೇರಿಸ್ತಿರೋದು ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ದಿಢೀರ್​ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಡಿಸಿಎಂ ಪವನ್ ಕಲ್ಯಾಣ್ ಪತ್ನಿ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us