ಬಾಡೇ ನಮ್ಮ ಮನೆ ಗಾಡು, ಬೇಳೆ ಜೊತೆ ಮೂಳೆಯೂ ಬೇಕು; ಸಾಹಿತ್ಯ ಸಮ್ಮೇಳನ ಜಾಗದಲ್ಲಿ ಪ್ರತಿಭಟನೆ!

author-image
Gopal Kulkarni
Updated On
ಬಾಡೇ ನಮ್ಮ ಮನೆ ಗಾಡು, ಬೇಳೆ ಜೊತೆ ಮೂಳೆಯೂ ಬೇಕು; ಸಾಹಿತ್ಯ ಸಮ್ಮೇಳನ ಜಾಗದಲ್ಲಿ ಪ್ರತಿಭಟನೆ!
Advertisment
  • ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
  • ಸಮಾನ ಮನಸ್ಕ ವೇದಿಕೆಯಿಂದ ಬಾಡೇ ನಮ್ಮ ಗಾಡು ಎಂಬ ಘೋಷಣೆ
  • ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೇಯಿಸಿದ ಮೊಟ್ಟೆ ತಿಂದು ಪ್ರತಿಭಟನೆ

ಮಂಡ್ಯದಲ್ಲಿ ಸಾಹಿತ್ಯ ಸಮ್ಮೆಳೆನದ ಹಿನ್ನೆಲೆ, ಸಮ್ಮೇಳನದಲ್ಲಿ ಬಾಡೂಟ ಮಾಡಿಸುವಂತೆ ಜಟಾಪಟಿ ಜೋರಾಗಿದೆ. ಬಾಡೂಟಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ ನಡೆದಿದೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ಪ್ರತಿಭಟನೆ ಮಾಡಲಾಗಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಗುಡ್​ನ್ಯೂಸ್​.. ಖರ್ಗೆ ತವರಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆ; ಏನಿದರ ವಿಶೇಷ?

ಬೇಳೆಯ ಜೊತೆ ಮೂಳೆ ಬೇಕು, ಕೊಸಂಬರಿ ಜೊತೆ ಎಗ್​ಬುರ್ಜಿ ಬೇಕು, ಹಪ್ಪಳದ ಜೊತೆ ಕಬಾಬು ಬೇಕು, ಮಟನ್ ಕುರ್ಮಾ, ಚಿಕನ್ ಚಾಪ್ಸ್, ನಾಟಿಕೋಳಿ ಸಾರುಮ ಮಟನ್ ಬೇಕೆಂದು ಆಗ್ರಹ ಮಾಡಿದರು . ಮಂಡ್ಯ ಅಂದ್ರೆನೇ ಬಾಡೂಟಕ್ಕೆ ಫೇಮಸ್ ನಾವು ಬಾಡೂಟ ನೀಡಿ ಅತಿಥಿ ಸತ್ಕಾರ ಮಾಡಬೇಕು ಹೀಗಾಗಿ ವೆಜ್​ ಜೊತೆ ನಾನ್​ ವೆಜ್ ಸಹ ಇರಬೇಕು ಎಂದು ಆಗ್ರಹಿಸಿದರು.

ಬಾಡೂಟ ಕೊಡದಿದ್ದರೇ ನಾವೇ ಬಾಡೂಟ ಹಾಕಿಸುತ್ತೇವೆ. ಮನೆ ಮನೆಗೆ ತೆರಳಿ ಕೋಳಿ ಸಂಗ್ರಹ ಮಾಡುತ್ತೇವೆ ಎಂದು ಕಸಾಪ ಹಾಗೂ ಜಿಲ್ಲಾಡಳಿತಕ್ಕೆ ಸಮಾನ ಮನಸ್ಕ ವೇದಿಕೆಯಿಂದ ಎಚ್ಚರಿಕೆ ನೀಡಲಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment