/newsfirstlive-kannada/media/post_attachments/wp-content/uploads/2025/05/DENGUE-2.jpg)
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮತ್ತೆ ಉಲ್ಬಣ ಆಗುವ ಸಾಧ್ಯತೆ ಇದೆ. ಈ ಸಮಸ್ಯೆ ಮಧ್ಯೆ ಆರೋಗ್ಯ ಇಲಾಖೆಗೆ ಮತ್ತೊಂದು ಆತಂಕ ಶುರುವಾಗಿದೆ.
ಒಂದು ಕಡೆ ಕೊರೊನಾ ಮತ್ತೆ ಬಂದರೆ, ಮತ್ತೊಂದು ಕಡೆಯಲ್ಲಿ ಡೆಂಘೀ ಭೀತಿ ಶುರುವಾಗಿದೆ. ಪೂರ್ವ ಮುಂಗಾರಿನಲ್ಲಿ ಜಲಾವೃತವಾದ ಏರಿಯಾಗಳಲ್ಲಿ ಡೆಂಘೀ ಭೀತಿ ಆವರಿಸಿದೆ. ಕೊರಮಂಗಲ, ಇಂದಿರಾನಗರ, ಹೆಚ್​ಬಿಆರ್ ಲೇಔಟ್, ಸಾಯಿ ಲೇಔಟ್, ಹೆಚ್ಎಸ್ಆರ್ ಲೇಔಟ್​ನಲ್ಲಿ ಡೆಂಘೀ ಭೀತಿ ಶುರುವಾಗಿದೆ.
/newsfirstlive-kannada/media/post_attachments/wp-content/uploads/2025/05/DENGUE.jpg)
ಇದೇ ಕಾರಣಕ್ಕೆ ಸಾಯಿ ಲೇಔಟ್​ನಿಂದ ಜನರು ವಲಸೆ ಹೋಗಿದ್ದಾರೆ. ಇಂದಿರಾನಗರಲ್ಲಿ ಬಿಬಿಎಂಪಿಯಿಂದ ಫಾಗಿಂಗ್ ವ್ಯವಸ್ಥೆ ಮಾಡಲಾಗ್ತಿದೆ. ಜೊತೆಗೆ ಸಾಮೂಹಿಕ ಟೆಸ್ಟ್​ಗೆ ಬಿಬಿಎಂಪಿ ಆರೋಗ್ಯ ಇಲಾಖೆ ಮುಂದಾಗಿದೆ. ಮಳೆ, ರಾಜಕಾಲುವೆ ನೀರು 3-4 ದಿನ ನಿಂತ ಏರಿಯಾದ ಜನರಿಗೆ ಸಾಮೂಹಿಕ ಟೆಸ್ಟಿಂಗ್ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೇ 29ರಿಂದ ಶಾಲೆಗಳು ಪುನರ್ ಆರಂಭ ಆಗೋದು ಡೌಟ್.. ಪೋಷಕರು ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us