‘ಶತಮಾನದ ಎಸೆತ’ ಎಸೆದ ಕುವೈತ್ ಸ್ಪಿನ್ನರ್
ಅಭ್ಯಾಸ ಆರಂಭಿಸಿದ ರಿಷಬ್ ಪಂತ್
ನಿವೃತ್ತಿ ಘೋಷಿಸಿದ ಸೌರಭ್ ತಿವಾರಿ
3ನೇ ಟೆಸ್ಟ್ನಿಂದ ಕೆ.ಎಲ್ ರಾಹುಲ್ ಔಟ್
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್ ರಾಹುಲ್ ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ರಾಹುಲ್, ಇಂಜುರಿಯ ಕಾರಣದಿಂದ 2ನೇ ಟೆಸ್ಟ್ನಿಂದ ಹೊರ ಬಿದ್ದಿದ್ರು. ಇದೀಗ 3ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಕನ್ನಡಿಗ ದೇವದತ್ತ್ ಪಡಿಕ್ಕಲ್ಗೆ ಜಾಕ್ಪಾಟ್
ಕೆ.ಎಲ್.ರಾಹುಲ್ ಇಂಜುರಿಯಿಂದ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ತಂಡದ ಬ್ಯಾಟ್ಸ್ಮನ್ ದೇವದತ್ತ್ ಪಡಿಕ್ಕಲ್ಗೆ ಅವಕಾಶದ ಬಾಗಿಲು ತೆರೆದಿದೆ. ರಾಹುಲ್ ಬದಲಿಯಾಗಿ ದೇವದತ್ತ್ ಪಡಿಕ್ಕಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಪಡಿಕ್ಕಲ್, ಶತಕ ಸಿಡಿಸಿ ಮಿಂಚಿದ್ರು. ಈ ಸೀಸನ್ನ ರಣಜಿಯಲ್ಲಿ 6 ಇನ್ನಿಂಗ್ಸ್ಗಳನ್ನಾಡಿರೋ ಪಡಿಕ್ಕಲ್, 92.66ರ ಸರಾಸರಿಯಲ್ಲಿ 556 ರನ್ಗಳಿಸಿದ್ದಾರೆ.
ಸರ್ಫರಾಜ್ ಖಾನ್ ಪದಾರ್ಪಣೆ ಸಾಧ್ಯತೆ
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಸರ್ಫರಾಜ್ ಖಾನ್ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಪಂದ್ಯದಿಂದ ಹೊರ ಬಿದ್ದಿದ್ರೆ, ಶ್ರೇಯಸ್ ಅಯ್ಯರ್ರನ್ನ ತಂಡದಿಂದ ಡ್ರಾಪ್ ಮಾಡಲಾಗಿದೆ. ಹೀಗಾಗಿ ಮಿಡಲ್ ಆರ್ಡರ್ನಲ್ಲಿ ಸರ್ಫರಾಜ್ ಖಾನ್ರನ್ನ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಳೆದು 3 ಸೀಸನ್ನಿಂದ ಸರ್ಫರಾಜ್ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಅಭ್ಯಾಸ ಆರಂಭಿಸಿದ ರಿಷಬ್ ಪಂತ್
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ಕ್ಕೆ ಕೌಂಟ್ಡೌನ್ ಶುರುವಾಗಿದ್ದು, ರಿಷಬ್ ಪಂತ್ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಪಂತ್ ಅಭ್ಯಾಸ ಆರಂಭಿಸಿದ್ದು, ನೆಟ್ಸ್ನಲ್ಲಿ ಕೆಲಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಪಂತ್ ಕಮ್ಬ್ಯಾಕ್ ಮಾಡಲಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ ಎನ್ನಲಾಗಿದೆ.
‘ಶತಮಾನದ ಎಸೆತ’ ಎಸೆದ ಕುವೈತ್ ಸ್ಪಿನ್ನರ್
ಕುವೈತ್ನ ಕ್ರಿಕೆಟಿಗ ಅಬ್ದುಲ್ಲಾ ರೆಹಮಾನ್ ತನ್ನ ಸ್ಪಿನ್ ಮೋಡಿಯಿಂದ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾನೆ. ವಿಚಿತ್ರ ಬೌಲಿಂಗ್ ಆ್ಯಕ್ಷನ್ ಹೊಂದಿರುವ ಸ್ಪಿನ್ನರ್ ಅಬ್ದುಲ್ಲಾ ಸ್ಥಳೀಯ ಪಂದ್ಯವೊಂದರ ವೇಳೆ ಹಾಕಿದ ಎಸೆತವೊಂದು ಔಟ್ಸೈಡ್ದ ಆಫ್ ಸ್ಟಂಪ್ ಪಿಚ್ ಆಗಿ ತೀವ್ರ ತಿರುವು ಪಡೆದುಕೊಂಡು ಲೆಗ್ ಸ್ಟಂಪ್ಗೆ ಬಡಿದಿದೆ. ಇದನ್ನು ನೋಡಿದ ಬ್ಯಾಟ್ಸ್ಮನ್ ಕಕ್ಕಾಬಿಕ್ಕಿಯಾಗಿದ್ರೆ ಕ್ರಿಕೆಟ್ ಲೋಕ ಶತಮಾನದ ಎಸೆತ ಎನ್ನುತ್ತಿದೆ.
ನಿವೃತ್ತಿ ಘೋಷಿಸಿದ ಸೌರಭ್ ತಿವಾರಿ
ಟೀಮ್ ಇಂಡಿಯಾ ಹಾಗೂ ಜಾರ್ಖಂಡ್ ತಂಡದ ಬ್ಯಾಟ್ಸ್ಮನ್ ಸೌರಭ್ ತಿವಾರಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 15ರಿಂದ ಜಮ್ಶೆಡ್ಪುರದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಕೊನೆಯದಾಗಿ ಆಡಲು ತಿವಾರಿ ನಿರ್ಧರಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರೋದಾಗಿ ಸೌರಭ್ ತಿವಾರಿ ತಿಳಿಸಿದ್ದಾರೆ. ಟೀಮ್ ಇಂಡಿಯಾವನ್ನ 3 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಸೌರಭ್, 93 ಐಪಿಎಲ್ ಪಂದ್ಯಗಳನ್ನ ಆಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
‘ಶತಮಾನದ ಎಸೆತ’ ಎಸೆದ ಕುವೈತ್ ಸ್ಪಿನ್ನರ್
ಅಭ್ಯಾಸ ಆರಂಭಿಸಿದ ರಿಷಬ್ ಪಂತ್
ನಿವೃತ್ತಿ ಘೋಷಿಸಿದ ಸೌರಭ್ ತಿವಾರಿ
3ನೇ ಟೆಸ್ಟ್ನಿಂದ ಕೆ.ಎಲ್ ರಾಹುಲ್ ಔಟ್
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್ ರಾಹುಲ್ ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ರಾಹುಲ್, ಇಂಜುರಿಯ ಕಾರಣದಿಂದ 2ನೇ ಟೆಸ್ಟ್ನಿಂದ ಹೊರ ಬಿದ್ದಿದ್ರು. ಇದೀಗ 3ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಕನ್ನಡಿಗ ದೇವದತ್ತ್ ಪಡಿಕ್ಕಲ್ಗೆ ಜಾಕ್ಪಾಟ್
ಕೆ.ಎಲ್.ರಾಹುಲ್ ಇಂಜುರಿಯಿಂದ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ತಂಡದ ಬ್ಯಾಟ್ಸ್ಮನ್ ದೇವದತ್ತ್ ಪಡಿಕ್ಕಲ್ಗೆ ಅವಕಾಶದ ಬಾಗಿಲು ತೆರೆದಿದೆ. ರಾಹುಲ್ ಬದಲಿಯಾಗಿ ದೇವದತ್ತ್ ಪಡಿಕ್ಕಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಪಡಿಕ್ಕಲ್, ಶತಕ ಸಿಡಿಸಿ ಮಿಂಚಿದ್ರು. ಈ ಸೀಸನ್ನ ರಣಜಿಯಲ್ಲಿ 6 ಇನ್ನಿಂಗ್ಸ್ಗಳನ್ನಾಡಿರೋ ಪಡಿಕ್ಕಲ್, 92.66ರ ಸರಾಸರಿಯಲ್ಲಿ 556 ರನ್ಗಳಿಸಿದ್ದಾರೆ.
ಸರ್ಫರಾಜ್ ಖಾನ್ ಪದಾರ್ಪಣೆ ಸಾಧ್ಯತೆ
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಸರ್ಫರಾಜ್ ಖಾನ್ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಪಂದ್ಯದಿಂದ ಹೊರ ಬಿದ್ದಿದ್ರೆ, ಶ್ರೇಯಸ್ ಅಯ್ಯರ್ರನ್ನ ತಂಡದಿಂದ ಡ್ರಾಪ್ ಮಾಡಲಾಗಿದೆ. ಹೀಗಾಗಿ ಮಿಡಲ್ ಆರ್ಡರ್ನಲ್ಲಿ ಸರ್ಫರಾಜ್ ಖಾನ್ರನ್ನ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಳೆದು 3 ಸೀಸನ್ನಿಂದ ಸರ್ಫರಾಜ್ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಅಭ್ಯಾಸ ಆರಂಭಿಸಿದ ರಿಷಬ್ ಪಂತ್
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ಕ್ಕೆ ಕೌಂಟ್ಡೌನ್ ಶುರುವಾಗಿದ್ದು, ರಿಷಬ್ ಪಂತ್ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಪಂತ್ ಅಭ್ಯಾಸ ಆರಂಭಿಸಿದ್ದು, ನೆಟ್ಸ್ನಲ್ಲಿ ಕೆಲಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಪಂತ್ ಕಮ್ಬ್ಯಾಕ್ ಮಾಡಲಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ ಎನ್ನಲಾಗಿದೆ.
‘ಶತಮಾನದ ಎಸೆತ’ ಎಸೆದ ಕುವೈತ್ ಸ್ಪಿನ್ನರ್
ಕುವೈತ್ನ ಕ್ರಿಕೆಟಿಗ ಅಬ್ದುಲ್ಲಾ ರೆಹಮಾನ್ ತನ್ನ ಸ್ಪಿನ್ ಮೋಡಿಯಿಂದ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾನೆ. ವಿಚಿತ್ರ ಬೌಲಿಂಗ್ ಆ್ಯಕ್ಷನ್ ಹೊಂದಿರುವ ಸ್ಪಿನ್ನರ್ ಅಬ್ದುಲ್ಲಾ ಸ್ಥಳೀಯ ಪಂದ್ಯವೊಂದರ ವೇಳೆ ಹಾಕಿದ ಎಸೆತವೊಂದು ಔಟ್ಸೈಡ್ದ ಆಫ್ ಸ್ಟಂಪ್ ಪಿಚ್ ಆಗಿ ತೀವ್ರ ತಿರುವು ಪಡೆದುಕೊಂಡು ಲೆಗ್ ಸ್ಟಂಪ್ಗೆ ಬಡಿದಿದೆ. ಇದನ್ನು ನೋಡಿದ ಬ್ಯಾಟ್ಸ್ಮನ್ ಕಕ್ಕಾಬಿಕ್ಕಿಯಾಗಿದ್ರೆ ಕ್ರಿಕೆಟ್ ಲೋಕ ಶತಮಾನದ ಎಸೆತ ಎನ್ನುತ್ತಿದೆ.
ನಿವೃತ್ತಿ ಘೋಷಿಸಿದ ಸೌರಭ್ ತಿವಾರಿ
ಟೀಮ್ ಇಂಡಿಯಾ ಹಾಗೂ ಜಾರ್ಖಂಡ್ ತಂಡದ ಬ್ಯಾಟ್ಸ್ಮನ್ ಸೌರಭ್ ತಿವಾರಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 15ರಿಂದ ಜಮ್ಶೆಡ್ಪುರದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಕೊನೆಯದಾಗಿ ಆಡಲು ತಿವಾರಿ ನಿರ್ಧರಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರೋದಾಗಿ ಸೌರಭ್ ತಿವಾರಿ ತಿಳಿಸಿದ್ದಾರೆ. ಟೀಮ್ ಇಂಡಿಯಾವನ್ನ 3 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಸೌರಭ್, 93 ಐಪಿಎಲ್ ಪಂದ್ಯಗಳನ್ನ ಆಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್