BBK11: ಧನರಾಜ್​ ಆಚಾರ್ಯ ಡೈಲಾಗ್​ಗೆ ಬಿಗ್​ಬಾಸ್​ ಮನೆಮಂದಿ ಫುಲ್​ ಖುಷ್​.. ವಿಡಿಯೋ ಇಲ್ಲಿದೆ

author-image
Veena Gangani
Updated On
BBK11: ಧನರಾಜ್​ ಆಚಾರ್ಯ ಡೈಲಾಗ್​ಗೆ ಬಿಗ್​ಬಾಸ್​ ಮನೆಮಂದಿ ಫುಲ್​ ಖುಷ್​.. ವಿಡಿಯೋ ಇಲ್ಲಿದೆ
Advertisment
  • ಧನರಾಜ್ ಡೈಲಾಗ್​ಗೆ ಚಪ್ಪಾಳೆಗಳ ಸುರಿಮಳೆ
  • ಬಿಗ್​ಬಾಸ್​ ಸ್ಪರ್ಧಿಗಳ ಮುಖದಲ್ಲಿ ಮೂಡಿದ ನಗು
  • ಸೇಮ್​ ನಟ ಗಣೇಶ್​ ಹಾಗೇ ಹೇಳಿದ ಧನರಾಜ್​

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್ ಪಡೆದುಕೊಂಡು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!

publive-image

ಬಿಗ್​ಬಾಸ್​ ಮನೆಗೆ ಬಂದ ಮೊದಲ ದಿನವೇ ಜಗಳ ಮಾಡಿಕೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ ನಡೆದ ಗಲಾಟೆ ರೀತಿಯಲ್ಲೇ ಬಿಗ್​ಬಾಸ್​ ಸ್ಪರ್ಧಿಗಳು ಆಡುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ ವಾದ ವಿವಾದ ಮಾಡಿಕೊಳ್ಳುತ್ತಿದ್ದಾರೆ.

publive-image

ಆದರೆ ಇದರ ಮಧ್ಯೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್​ ಆಚಾರ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಂಗ್​ ಅನ್ನು ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಹೌದು, ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬಳಿಕ ಧನರಾಜ್​ ಆಚಾರ್ಯ ಕೊಂಚ ಡಲ್​ ಆಗಿದ್ದರು. ಬಳಿಕ ಬಿಗ್​ಬಾಸ್​ ಧೈರ್ಯ ತುಂಬಿದ ಬಳಿಕ ಧನರಾಜ್​ ಅವರು ಮತ್ತೆ ಟ್ರಾಕ್​​ಗೆ ಬಂದಿದ್ದಾರೆ.

ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ನಗುವೆ ಇಲ್ಲದಂತೆ ಆಗಿಬಿಟ್ಟಿದೆ. ಏಕೆಂದರೆ ಒಂದೇ ವಾರಕ್ಕೆ ಬಿಗ್​ಬಾಸ್​ ಮನೆಯಲ್ಲಿ ಗಲಾಟೆ, ಮನಸ್ಥಾಪ ಹೀಗೆ ಸಾಕಷ್ಟು ವಿಚಾರಗಳಿಂದ ಸ್ಪರ್ಧಿಗಳು ಬೇಸರ ಆಗಿದ್ದರು. ಇದೀಗ ಧನರಾಜ್​ ಅವರ ಕಾಮಿಡಿಗೆ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಮುಂಗಾರು ಮಳೆ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫೇಮಸ್​ ಡೈಲಾಗ್​ ಅನ್ನು ಬಿಗ್​ಬಾಸ್​ ಮನೆಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment