ದೊಡ್ಡ ತಪ್ಪು ಮಾಡಿದ ಧನರಾಜ್.. ‘ಮನೆಯ ಮುಖ್ಯದ್ವಾರದ ಮೂಲಕ..’ ಎಂದ ಬಿಗ್​ಬಾಸ್..!

author-image
Veena Gangani
Updated On
ದೊಡ್ಡ ತಪ್ಪು ಮಾಡಿದ ಧನರಾಜ್.. ‘ಮನೆಯ ಮುಖ್ಯದ್ವಾರದ ಮೂಲಕ..’ ಎಂದ ಬಿಗ್​ಬಾಸ್..!
Advertisment
  • ಬಿಗ್​ಬಾಸ್​ 11ರ ಸ್ಪರ್ಧಿಗಳು ಹೀಗೆ ಮಾಡುತ್ತಿರುವುದು ಏಕೆ?
  • ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ಬಂದು ತಲುಪಿದ ಬಿಗ್​ಬಾಸ್​ 11
  • ಅಂದು ತಂಗಿ ಜಿಂಕೆ, ಇಂದು ಅಣ್ಣ ಜಿಂಕೆ.. ಮಿಸ್​ ಆಗಿದ್ದೇಲ್ಲಿ?

ಕನ್ನಡದ ಬಿಗ್​ಬಾಸ್​ ಶುರುವಾಗಿ ಇಂದಿಗೆ 109ನೇ ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್​ಬಾಸ್​ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿಗಳು ಪದೇ ಪದೇ ರೂಲ್ಸ್​ ಬ್ರೇಕ್ ಮಾಡುತ್ತಲೇ ಇದ್ದರು. ಆದ್ರೆ ಇದಕ್ಕೂ ಮಿಗಿಲಾಗಿ ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲೇ ಮೋಸದಾಟ ಆಡಿದ್ದಾರೆ.​

ಇದನ್ನೂ ಓದಿ:ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್‌ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!

publive-image

ಹೌದು, ಬಿಗ್​ಬಾಸ್​ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ, ಮಂಜು, ಗೌತಮಿ. ಹನುಮಂತ, ರಜತ್ ಹಾಗೂ ಧನರಜ್ ಇದ್ದಾರೆ. ಆದರೆ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್​ವೊಂದು ಎದುರಾಗಿದೆ. ಈ ವಾರ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಡ್​ ವೀಕ್ ಎಲಿಮಿನೇಷನ್​ ನಡೆಯಲಿದೆ ಎಂದು ಎಚ್ಚರಿ ಕೊಟ್ಟಿದ್ದರು.

publive-image

ಇನ್ನೂ, ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್​ಗಳನ್ನು ನೀಡುತ್ತಾ ಬಂದ್ದಿದ್ದರು. ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್​ನಿಂದ ಸೇಫ್​ ಆಗಿದ್ದರು. ಇದೀಗ ಬಿಗ್​ಬಾಸ್​ ಕೊಟ್ಟ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಕನ್ನಡಿಯನ್ನು ನೋಡಿ ಪಜಲ್​ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಬಿಗ್​ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ತಡೆ ಹಿಡಿದಿದ್ದರು.

ಈ ಬಗ್ಗೆ ಖುದ್ದು ಬಿಗ್​ಬಾಸ್​ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್​ಬಾಸ್​ ಮಾತನ್ನು ಕೇಳಿಸಿಕೊಂಡ ಧನರಾಜ್​ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್​ಬಾಸ್​ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್​ ಅಂತ ಬೇಡಿಕೊಂಡಿದ್ದಾರೆ.​ ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್​ಬಾಸ್​ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment