/newsfirstlive-kannada/media/post_attachments/wp-content/uploads/2025/04/Dhruv_Jurel_Virat_Kohli.jpg)
ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 11 ರನ್ಗಳಿಂದ ರೋಚಕ ಗೆಲುವು ಪಡೆದಿದೆ. ಕೊನೆಯ ಹಂತದಲ್ಲಿ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದ್ರೆ ಈ ವೇಳೆ ಪ್ರಮುಖ ವಿಕೆಟ್ಗಳು ಉರುಳಿದ್ದು ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿತು. ವಿಕೆಟ್ ಕೀಪರ್ ಧೃವ್ ಜುರೆಲ್ ಪಂದ್ಯದಲ್ಲಿ ಗೆಲುವಿಗಾಗಿ ಮಾಡಿದ್ದ ಬ್ಯಾಟಿಂಗ್ ಹೋರಾಟವನ್ನು ಕಿಂಗ್ ಕೊಹ್ಲಿ ಮೆಚ್ಚಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 24 ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಧೃವ್ ಜುರೇಲ್ ವಿರೋಚಿತ ಹೋರಾಟ ನಡೆಸಿದರು. ರಾಜಸ್ಥಾನ್ ತಂಡವನ್ನು ಗೆಲ್ಲಿಸಲು ಬ್ಯಾಟಿಂಗ್ನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಿದರು. ಜುರೇಲ್ ಕ್ರೀಸ್ನಲ್ಲಿ ಇರುವವರೆಗೆ ಪಂದ್ಯ ರಾಜಸ್ಥಾನ್ ತಂಡದ್ದೇ ಆಗಿತ್ತು. ಯಾವಾಗ ಜುರೇಲ್ ವಿಕೆಟ್ ಒಪ್ಪಿಸಿದರೋ ಅವಾಗ ಆರ್ಸಿಬಿ ಗೆಲುವಿನ ಕನಸು ದೊಡ್ಡದಾಗುತ್ತ ಹೋಯಿತು.
ಇದನ್ನೂ ಓದಿ:ಭಾರತ- ಪಾಕ್ ಪಂದ್ಯಗಳಿಗೆ ಶಾಶ್ವತ ಬ್ರೇಕ್..? ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟರ್ ಹೇಳಿದ್ದೇನು?
ಆರ್ಸಿಬಿ ಜೊತೆಗಿನ ಪಂದ್ಯದಲ್ಲಿ ಜುರೇಲ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಬಿಗ್ ಸಿಕ್ಸರ್ಗಳಿಂದ 47 ರನ್ಗಳಿಸಿ ಚಚ್ಚಿದ್ದರು. ತಂಡವನ್ನು ಗೆಲ್ಲಿಸುವ ಹಂತದಲ್ಲಿದ್ದ ಜುರೇಲ್, ಜೋಶ್ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ಕೊಟ್ಟು ನಿರಾಶೆಯಿಂದ ಹೊರ ನಡೆದರು. ಇನ್ನೊಂದು ಓವರ್ ಇದ್ದರೆ ಮ್ಯಾಚ್ ಆರ್ಸಿಬಿಯಿಂದ ಕೈ ಜಾರಿ ಹೋಗುವ ಎಲ್ಲ ಲಕ್ಷಣಗಳು ಇದ್ದವು.
ಪಂದ್ಯ ಮುಗಿದ ಮೇಲೆ ಧೃವ್ ಜುರೇಲ್ ಅವರು ವಿರಾಟ್ ಕೊಹ್ಲಿ ಇದ್ದಲ್ಲಿಗೆ ಬಂದಿದ್ದಾರೆ. ಆಗ ಇಬ್ಬರು ಪಂದ್ಯದಲ್ಲಿನ ಸೋಲು, ಗೆಲುವಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಗೆಲುವಿಗಾಗಿ ಒಳ್ಳೆಯ ಬ್ಯಾಟಿಂಗ್ ಮಾಡಿದೆ. ಇದೇ ಪರ್ಫಾಮೆನ್ಸ್ ಮುಂದುವರೆಸು ಎಂದು ಬ್ಯಾಟಿಂಗ್ನಲ್ಲಿ ಧೃವ್ ಜುರೇಲ್ ಮಾಡಿದ ಹೋರಾಟವನ್ನು ಕಿಂಗ್ ಕೊಹ್ಲಿ ಅವರು ಪ್ರಶಂಸಿಸಿದ್ದಾರೆ. ಇನ್ನು ಕ್ರೀಸ್ನಲ್ಲಿ ಇರುವಾಗ ಫಿನಿಶಿಂಗ್ ಯಾವ ರೀತಿ ಮಾಡಬೇಕು, ಬ್ಯಾಟಿಂಗ್ ಹೇಗೆ ಇರಬೇಕು ಎನ್ನುವುದರ ಕುರಿತು ಕೆಲ ಟಿಪ್ಸ್ಗಳನ್ನು ಯುವ ಆಟಗಾರನಿಗೆ ಕೊಹ್ಲಿ ಧಾರೆ ಎರೆದಿದ್ದಾರೆ.
Virat Kohli sharing his experience & giving advice to Dhruv Jurel. pic.twitter.com/05j0VMcrLm
— Virat Kohli Fan Club (@Trend_VKohli)
Virat Kohli sharing his experience & giving advice to Dhruv Jurel. pic.twitter.com/05j0VMcrLm
— Virat Kohli Fan Club (@Trend_VKohli) April 25, 2025
">April 25, 2025
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ