/newsfirstlive-kannada/media/post_attachments/wp-content/uploads/2024/05/martin-3.jpg)
ಆ್ಯಕ್ಷನ್​ ಫ್ರಿನ್ಸ್​ ಧ್ರುವ ಸರ್ಜಾ ನಟನೆಯ​ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ. ಬರೋಬ್ಬರಿ 2.5 ಕೋಟಿ ರೂಪಾಯಿ ಮೋಸವಾಗಿದೆ ಎಂದು ಡಿಜಿಟೆಲ್ ಟೆರೆನ್ ನಿರ್ದೇಶಕರನ್ನು ದೂರಿದ್ದಾರೆ.
ಮಾರ್ಟಿನ್ A P ಅರ್ಜುನ್ ಆ್ಯಕ್ಷನ್​ ಕಟ್​​ ಹೇಳಿದ ಸಿನಿಮಾ. ಧ್ರುವ ಸರ್ಜಾ ನಟನೆಯ ಸಿನಿಮಾ. ಈ ಸಿನಿಮಾದ CG ವರ್ಕ್ ಮಾಡಿಕೊಡಲು ಡಿಜಿಟೆಲ್ ಟೆರೆನ್ ಕಂಪನಿಗೆ ವಹಿಸಲಾಗಿತ್ತು. ಅದಕ್ಕಾಗಿ ಮಾರ್ಟಿನ್ ತಂಡ 2.5 ಕೋಟಿ ರೂಪಾಯಿ ಹಣ ಸಂದಾಯ ಮಾಡಿತ್ತು.
/newsfirstlive-kannada/media/post_attachments/wp-content/uploads/2024/07/Druvasarja-AP-Arjun.jpg)
ಆದರೀಗ ಟೆರೆನ್ ಸಂಸ್ಥೆ ದುಡ್ಡು ಪಡೆದು ಕೆಲಸ ಮಾಡದೆ ವಂಚಿಸಿದೆ. ಈ ಸಂಬಂಧ ಮಾರ್ಟಿನ್​ ನಿರ್ಮಾಪಕ ಉದಯ್​ ಮೆಹ್ತಾರವರು ಡಿಜಿಟೆಲ್ ಟೆರೆನ್ ನಿರ್ದೇಶಕರಾದ ಸುನಿಲ್ ರೆಡ್ಡಿ, ಸತ್ಯಾ ರೆಡ್ಡಿ ಎಂಬುವವರ ಮೇಲೆ ದೂರು ನೀಡಿದ್ದಾರೆ. ಆದರೆ ಸತ್ಯಾ ರೆಡ್ಡಿಯವರು ಇದರಲ್ಲಿ ನಿರ್ದೇಶಕ ಅರ್ಜುನ್ ಗೆ 50 ಲಕ್ಷ ರೂಪಾಯಿ ಕಮಿಷನ್ ನೀಡಿರೋದಾಗಿ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/A-P-Arjun.jpg)
ಇನ್ನು ಈ ಘಟನೆಯ ಬೆನ್ನಲ್ಲೇ ಪರೋಕ್ಷವಾಗಿ ಇನ್​​ಸ್ಟಾಗ್ರಾಂ ಸ್ಟೇಟಸ್​ ಹಾಕಿರುವ ಎಪಿ ಅರ್ಜುನ್ “ಸತ್ಯ ನೀತಿ ಧರ್ಮವಿದ್ದರೆ ಹಾರಾಡಿ ಮೆರೆದವರು ತೂರಾಡಿ ಹೋಗುವುದನ್ನ ಕಣ್ಣಾರೆ ನೋಡುವೆ” ಎಂದು ಸ್ಟೇಟಸ್​​ ಹಂಚಿಕೊಂಡಿದ್ದಾರೆ.
ಅಕ್ಟೋಬರ್​ 11ಕ್ಕೆ ವಿಶ್ವದಾದ್ಯಂತ ‘ಮಾರ್ಟಿನ್’ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಬ್ರಿಗೇಡಿಯರ್​​ ಅರ್ಜುನ್​ ಸಕ್ಸೇನನಾಗಿ ಕಂಗೊಳಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us