ಟೆಸ್ಟ್ ಸರಣಿ ಗೆಲ್ಲಲು.. ಕೊಹ್ಲಿ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡಬೇಕು ಎಂದು ತಿಳಿಸಿದ ದಿನೇಶ್ ಕಾರ್ತಿಕ್..!

author-image
Ganesh
Updated On
ನಿವೃತ್ತಿಯಿಂದ ಹಿಂದೆ ಸರಿದ ಕಾರ್ತಿಕ್; ‘ರಾಯಲ್ಸ್​’ ತಂಡ ಸೇರಿದ ಫಿನಿಶರ್.. ಕೊಟ್ರಲ್ಲ ಸಿಹಿ ಸುದ್ದಿ..!
Advertisment
  • ನಾಳೆಯಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಮ್ಯಾಚ್
  • ಒಟ್ಟು ಐದು ಟೆಸ್ಟ್ ಮ್ಯಾಚ್ ಆಡಲಿರುವ ಎರಡು ತಂಡಗಳು
  • ಟೀಂ ಇಂಡಿಯಾದಲ್ಲಿ ರೋಹಿತ್, ಕೊಹ್ಲಿ ಸ್ಥಾನ ತುಂಬೋರು ಯಾರು?

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಪ್ರಾರಂಭವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬದಲಿಗೆ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಸಸ್ಪೆನ್ಸ್ ಹಾಗೆಯೇ ಇದೆ. ಇದರ ಮಧ್ಯೆ ಕೊಹ್ಲಿ ಆಡ್ತಿದ್ದ ಮೂರನೇ ಸ್ಲಾಟ್​ನಲ್ಲಿ ಯಾರು ಆಡಬೇಕು ಅಂತಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ 759 ರನ್ ಗಳಿಸಿದ ಸಾಯಿ ಸುದರ್ಶನ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ದಿನೇಶ್ ಕಾರ್ತಿಕ್ ಬಯಸಿದ್ದಾರೆ. ಅಭಿಮನ್ಯು ಈಶ್ವರನ್ ಕೂಡ ತಂಡದಲ್ಲಿದ್ದಾರೆ. ಸಾಯಿ ಸುದರ್ಶನ್ ಮೊದಲ ಟೆಸ್ಟ್‌ನಲ್ಲಿ ಅವಕಾಶ ಪಡೆಯಬಹುದು ಅಂತಾ ನಂಬಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿರ್ಗಮನದಿಂದಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಾಗಿವೆ. ಆರಂಭಿಕ ಬ್ಯಾಟರ್​ ಆಗಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮುಂದುವರಿಸಬೇಕು ಎಂದಿದ್ದಾರೆ ದಿನೇಶ್ ಕಾರ್ತಿಕ್.

ಇದನ್ನೂ ಓದಿ: ಬ್ಯಾಟ್ ತಗೊಂಡು ಹೊಡೆಯಲು ಯತ್ನಿಸಿದ R ಅಶ್ವಿನ್​.. ಸ್ಟಾರ್​ ಸ್ಪಿನ್ನರ್ ಮೇಲೆ ಸಾಲು ಸಾಲು ಆರೋಪ

ಕರುಣ್ ನಾಯರ್ 6ನೇ ಸ್ಥಾನದಲ್ಲಿದ್ದಾರೆ..

ಇನ್ನು, 7 ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಕರುಣ್ ನಾಯರ್ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಕಾರ್ತಿಕ್ ಬಯಸುತ್ತಾರೆ. ಅವರ ಪ್ರಕಾರ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್​​ಗೆ ಅವಕಾಶ ಕೊಡಬೇಕು. ನಾಯಕ ಗಿಲ್ ಮತ್ತು ಉಪನಾಯಕ ಪಂತ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಟಾಪ್ 8 ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಿಷಭ್ ಪಂತ್, ಕರುಣ್ ನಾಯರ್, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಸೇರಿದ್ದಾರೆ. ನಾಯಕ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಮತ್ತು ಅವರು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಪಂತ್ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.

ಇದನ್ನೂ ಓದಿ: ನಿಷ್ಕ್ರಿಯಗೊಂಡಿದ್ದ IPL ಫ್ರಾಂಚೈಸಿ.. 538 ಕೋಟಿ ಹಣ ನೀಡುವಂತೆ ಬಿಸಿಸಿಐಗೆ ಸೂಚಿಸಿದ ಕೋರ್ಟ್​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment