/newsfirstlive-kannada/media/post_attachments/wp-content/uploads/2024/08/Gambhir_Rohit-Fight-1.jpg)
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಟಿ20 ಸರಣಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಾಂಬಿನೇಷನ್ ವರ್ಕೌಟ್ ಆಗಿತ್ತು. ಆದರೆ, ಏಕದಿನ ಸರಣಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗಂಭೀರ್ ಕಾಂಬಿನೇಷನ್ ವರ್ಕೌಟ್ ಆಗಲಿಲ್ಲ. ಹೀಗಿರುವಾಗ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಎಲ್ಲರ ಕಣ್ಣು ಈ ಟೂರ್ನಿಯತ್ತ ನೆಟ್ಟಿದೆ. ಇದರ ಮಧ್ಯೆ ಟೀಂ ಇಂಡಿಯಾದ ಲಗ್ಗಜ ಆಟಗಾರ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗಂಭೀರ್ಗೆ ಸಲಹೆಯೊಂದು ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಆಡಲಿದೆ. ಬಾಂಗ್ಲಾದೇಶ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಎಲ್ಲಾ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಇಬ್ಬರನ್ನೂ ಕಣಕ್ಕಿಳಿಸುವುದು ಬೆಸ್ಟ್ ಎಂದಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ಗಂಭೀರ್ ಅಶ್ವಿನ್ ಮತ್ತು ಜಡೇಜಾ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಪರ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಎಲ್ಲಾ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ಜಡೇಜಾ, ಅಶ್ವಿನ್ ಇಬ್ಬರನ್ನು ಆಡಿಸಿ. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್ ನಿರ್ಧಾರ ಎಂದರು.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಆರ್ಸಿಬಿ.. ಈ ಆಟಗಾರನನ್ನು ಉಳಿಸಿಕೊಳ್ಳಲು ಮೆಗಾ ಪ್ಲಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ