newsfirstkannada.com

ಬಿಗ್‌ಬಾಸ್ ಶೃತಿ.. ಮೀಟೂ ಶೃತಿ.. ‘ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ’- ಗುರುಪ್ರಸಾದ್

Share :

Published February 2, 2024 at 4:37pm

Update February 2, 2024 at 4:52pm

    ರಂಗನಾಯಕ ಚಿತ್ರದಲ್ಲಿ ಮೀಟು ಶೃತಿ ಸಾಲು ಬರೆದ ಗುರುಪ್ರಸಾದ್

    ರಂಗನಾಯಕ ಚಿತ್ರದಲ್ಲಿ ಮೀಟು ಶೃತಿ ಸಾಲು ಬರೆದ ನಿರ್ದೇಶಕ

    ಮೀಟೂ ಇಲ್ಲ, ಏನೂ ಇಲ್ಲ, 6 ವರ್ಷ ಬೇಕಿತ್ತಾ ದೂರು ಕೊಡೋಕೆ?

ರಂಗನಾಯಕ ಎನ್ನುವ ಕನ್ನಡದ ಹೊಸ ಸಿನಿಮಾದಲ್ಲಿ ಮಠ ಡೈರೆಕ್ಟರ್​ ಗುರುಪ್ರಸಾದ್​ ಹಾಗೂ ಜಗ್ಗೇಶ್ ಜೋಡಿ ಬ್ಯುಸಿಯಾಗಿದೆ. ಇದರ ಮಧ್ಯೆ ಇದೇ ಸಿನಿಮಾದ ಸಾಂಗ್ ಹೊಸ ವಿವಾದದ ಅಂಚಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಂಗನಾಯಕ ಸಿನಿಮಾದಲ್ಲಿ ಬರೋ ಗಾಳಿ ತಂಗಾಳಿ ಕನ್ನಡ ಮಾತಾಡೋ ಎಂಬ ಮೊದಲ ಹಾಡು ಬಿಡುಗಡೆ ಆಗಿದ್ದು ವಿವಾದದ ಬಿರುಗಾಳಿ ಸೃಷ್ಟಿಸಿದೆ.

ಇದನ್ನು ಓದಿ:‘ಶ್ರುತಿ, ಶ್ರುತಿ ಬಿಗ್​ ಬಾಸ್​ ಶ್ರುತಿ.. Me Too ಶ್ರುತಿ..’ ಎಂದ ಜಗ್ಗೇಶ್ -ವಿವಾದದ ಸುಳಿಯಲ್ಲಿ ರಂಗನಾಯಕ

ಈ ಹಾಡಿನಲ್ಲಿ ನಿರ್ದೇಶಕ ಗುರುಪ್ರಸಾದ್ ಸ್ಯಾಂಡಲ್​ವುಡ್​ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಈ ಹಾಡಿನಲ್ಲಿ ನಟ ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶೃತಿ ಮಿಟೋ ಶೃತಿ ಎಂದು ಹೇಳಿದ್ದಾರೆ. ಇದೀಗ ಆ ಹಾಡಿನ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಕಾಂಟ್ರವರ್ಸಿ​ ಆಗುತ್ತಿದೆ.

ಇದೇ ವಿಚಾರವಾಗಿ ನ್ಯೂಸ್​​ಫಸ್ಟ್​ನೊಂದಿಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಗುರುಪ್ರಸಾದ್, ಶೃತಿ ಅನ್ನೋದು ಸಂಗೀತ ಭಾಷೆ ಅದ್ರು ನಾನು ಬೇಕಂತ ಆ ಸಾಹಿತ್ಯ ಬರೆದಿದ್ದೀನಿ. ಶೃತಿ ಹರಿಹರನ್ ಕನ್ನಡದವರಲ್ಲ ಎಲ್ಲಿಂದಲೋ ಬಂದು ಇಲ್ಲಿ ಗಬ್ಬೆಬ್ಬಿಸಿದ್ರು. ನಾನು ಪತಿವ್ರತೆ ಅಂತ ಫ್ರೂ ಮಾಡೋಕೆ ಆಯಮ್ಮ ಹೊರಟಿದ್ರು. ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ. ಅಷ್ಟಕ್ಕೂ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ.

ಕೈ ಚೀಲ ಕಳ್ಕೊಂಡಾಗ ಕಂಪ್ಲೇಂಟ್ ಕೊಡೋದು ತಡವಾಗಿ ಕೊಟ್ರೆ ಏನ್ ಯೂಸ್. ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ ಅಂತ ಶೃತಿ ಹರಿಹರನ್ ವಿರುದ್ಧ ಗುರುಪ್ರಸಾದ್ ಗುಡುಗಿದ್ದಾರೆ. ಡೈರೆಕ್ಟರ್​ ಗುರುಪ್ರಸಾದ್-ಜಗ್ಗೇಶ್ ಸೇರಿ ಮಠ, ಎದ್ದೇಳು ಮಂಜುನಾಥದಂತಹ ಹಿಟ್ ಸಿನಿಮಾಗಳನ್ನು ಕೊಟ್ಟವರು. ಈ ಜೋಡಿ ಮತ್ತೆ ತೆರೆ ಮೇಲೆ ತಂದಿದ್ದಾರೆ. ಇದೀಗ ರಂಗನಾಯಕ ಸಿನಿಮಾವನ್ನು ತೆರೆ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್ ಶೃತಿ.. ಮೀಟೂ ಶೃತಿ.. ‘ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ’- ಗುರುಪ್ರಸಾದ್

https://newsfirstlive.com/wp-content/uploads/2024/02/ranganayak-1.jpg

    ರಂಗನಾಯಕ ಚಿತ್ರದಲ್ಲಿ ಮೀಟು ಶೃತಿ ಸಾಲು ಬರೆದ ಗುರುಪ್ರಸಾದ್

    ರಂಗನಾಯಕ ಚಿತ್ರದಲ್ಲಿ ಮೀಟು ಶೃತಿ ಸಾಲು ಬರೆದ ನಿರ್ದೇಶಕ

    ಮೀಟೂ ಇಲ್ಲ, ಏನೂ ಇಲ್ಲ, 6 ವರ್ಷ ಬೇಕಿತ್ತಾ ದೂರು ಕೊಡೋಕೆ?

ರಂಗನಾಯಕ ಎನ್ನುವ ಕನ್ನಡದ ಹೊಸ ಸಿನಿಮಾದಲ್ಲಿ ಮಠ ಡೈರೆಕ್ಟರ್​ ಗುರುಪ್ರಸಾದ್​ ಹಾಗೂ ಜಗ್ಗೇಶ್ ಜೋಡಿ ಬ್ಯುಸಿಯಾಗಿದೆ. ಇದರ ಮಧ್ಯೆ ಇದೇ ಸಿನಿಮಾದ ಸಾಂಗ್ ಹೊಸ ವಿವಾದದ ಅಂಚಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಂಗನಾಯಕ ಸಿನಿಮಾದಲ್ಲಿ ಬರೋ ಗಾಳಿ ತಂಗಾಳಿ ಕನ್ನಡ ಮಾತಾಡೋ ಎಂಬ ಮೊದಲ ಹಾಡು ಬಿಡುಗಡೆ ಆಗಿದ್ದು ವಿವಾದದ ಬಿರುಗಾಳಿ ಸೃಷ್ಟಿಸಿದೆ.

ಇದನ್ನು ಓದಿ:‘ಶ್ರುತಿ, ಶ್ರುತಿ ಬಿಗ್​ ಬಾಸ್​ ಶ್ರುತಿ.. Me Too ಶ್ರುತಿ..’ ಎಂದ ಜಗ್ಗೇಶ್ -ವಿವಾದದ ಸುಳಿಯಲ್ಲಿ ರಂಗನಾಯಕ

ಈ ಹಾಡಿನಲ್ಲಿ ನಿರ್ದೇಶಕ ಗುರುಪ್ರಸಾದ್ ಸ್ಯಾಂಡಲ್​ವುಡ್​ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಈ ಹಾಡಿನಲ್ಲಿ ನಟ ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶೃತಿ ಮಿಟೋ ಶೃತಿ ಎಂದು ಹೇಳಿದ್ದಾರೆ. ಇದೀಗ ಆ ಹಾಡಿನ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಕಾಂಟ್ರವರ್ಸಿ​ ಆಗುತ್ತಿದೆ.

ಇದೇ ವಿಚಾರವಾಗಿ ನ್ಯೂಸ್​​ಫಸ್ಟ್​ನೊಂದಿಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಗುರುಪ್ರಸಾದ್, ಶೃತಿ ಅನ್ನೋದು ಸಂಗೀತ ಭಾಷೆ ಅದ್ರು ನಾನು ಬೇಕಂತ ಆ ಸಾಹಿತ್ಯ ಬರೆದಿದ್ದೀನಿ. ಶೃತಿ ಹರಿಹರನ್ ಕನ್ನಡದವರಲ್ಲ ಎಲ್ಲಿಂದಲೋ ಬಂದು ಇಲ್ಲಿ ಗಬ್ಬೆಬ್ಬಿಸಿದ್ರು. ನಾನು ಪತಿವ್ರತೆ ಅಂತ ಫ್ರೂ ಮಾಡೋಕೆ ಆಯಮ್ಮ ಹೊರಟಿದ್ರು. ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ. ಅಷ್ಟಕ್ಕೂ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ.

ಕೈ ಚೀಲ ಕಳ್ಕೊಂಡಾಗ ಕಂಪ್ಲೇಂಟ್ ಕೊಡೋದು ತಡವಾಗಿ ಕೊಟ್ರೆ ಏನ್ ಯೂಸ್. ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ ಅಂತ ಶೃತಿ ಹರಿಹರನ್ ವಿರುದ್ಧ ಗುರುಪ್ರಸಾದ್ ಗುಡುಗಿದ್ದಾರೆ. ಡೈರೆಕ್ಟರ್​ ಗುರುಪ್ರಸಾದ್-ಜಗ್ಗೇಶ್ ಸೇರಿ ಮಠ, ಎದ್ದೇಳು ಮಂಜುನಾಥದಂತಹ ಹಿಟ್ ಸಿನಿಮಾಗಳನ್ನು ಕೊಟ್ಟವರು. ಈ ಜೋಡಿ ಮತ್ತೆ ತೆರೆ ಮೇಲೆ ತಂದಿದ್ದಾರೆ. ಇದೀಗ ರಂಗನಾಯಕ ಸಿನಿಮಾವನ್ನು ತೆರೆ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More