/newsfirstlive-kannada/media/post_attachments/wp-content/uploads/2024/11/Guruprasad-House.jpg)
ನಿರ್ದೇಶಕ, ನಟ, ಬರಹಗಾರ ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ಈಗ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಗುರುಪ್ರಸಾದ್ರನ್ನು ಹತ್ತಿರದಿಂದ ಬಲ್ಲವರು ಗುರುಪ್ರಸಾದ್ ಆತ್ಮ*ಹತ್ಯೆ ಮಾಡಿಕೊಳ್ಳುವಷ್ಟು ಸೂಕ್ಷ್ಮ ಮನಸ್ಸಿನವರು ಆಗಿರಲಿಲ್ಲ ಎಂದೇ ಹೇಳುತ್ತಿದ್ದಾರೆ. ಇದರಾಚೆಯೂ ಇಂತಹ ದುರಂತವೊಂದು ನಡೆದು ಹೋಗಿದೆ.
ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮೊದಲೇ ಜೀವ ಕಳೆದುಕೊಂಡ ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್
ಸದ್ಯ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಅಪಾರ್ಟ್ಮೆಂಟ್ನ್ನು ಪೊಲೀಸರು ಸೀಜ್ ಮಾಡಲಾಗಿದೆ. ಮಾದಹನಾಯಕನಹಳ್ಳಿ ಪೊಲೀಸರಿಂದ ಫ್ಲ್ಯಾಟ್ ನಂಬರ್ 27011ನ್ನು ಸೀಜ್ ಮಾಡಲಾಗಿದೆ. ಪೊಲೀಸರು ಇನ್ನೂ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದ್ದು ಆ ಹಿನ್ನೆಲೆ ಅಪಾರ್ಟ್ಮೆಂಟ್ ಸೀಜ್ ಮಾಡಲಾಗಿದ್ದು. ಕುಟುಂಬಸ್ಥರು ಬಂದು ಮೃತದೇಹವನ್ನು ಪತ್ತೆ ಹಚ್ಚಬೇಕು ಅಲ್ಲಿಯವರೆಗೂ ಫ್ಲ್ಯಾಟ್ ಸೀಜ್ ಆಗಿಯೇ ಇರಲಿದೆ.
ಇದನ್ನೂ ಓದಿ:2006ರಲ್ಲಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ !ಜೀವ ಕಳೆದುಕೊಳ್ಳವಂತದ್ದು ಗುರುಗೆ ಆಗಿದ್ದೇನು?
ಮೃತ*ದೇಹದ ಗುರುತು ಪತ್ತೆ ಬಳಿಕ ಶವಾಗಾರಕ್ಕೆ ಮೃತ*ದೇಹವನ್ನು ಶಿಫ್ಟ್ ಮಾಡಲಾಗುತ್ತದೆ. ಮರಣೋತ್ತರ ಪರೀಕ್ಷೆಯ ನಂತರ ಮೃತ*ಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದಕ್ಕೂ ಮುನ್ನ ಮೊಬೈಲ್ ಹಾಗೂ ಫ್ಲ್ಯಾಟ್ ಸೀಜ್ ಮಾಡುವ ಪೊಲೀಸರು ಕುಟುಂಬಸ್ಥರು ಬಂದ ಮೇಲೆ ಅವರ ಸಮ್ಮುಖದಲ್ಲಿಯೇ ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ