/newsfirstlive-kannada/media/post_attachments/wp-content/uploads/2024/11/Guruprasad-4.jpg)
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆ ಆಗಿತ್ತು. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಚುರುಗೊಳಿಸಿದ್ದು ಗುರುಪ್ರಸಾದ್ ಅವರ ಸಹೋದರ ಮತ್ತು ಸಹಾಯಕ ನಿರ್ದೇಶಕ ಉದಯ್ರನ್ನ ವಿಚಾರಣೆ ಮಾಡಿದ್ದಾರೆ.
ಮಾದನಾಯಕನಹಳ್ಳಿಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ ಗುರುಪ್ರಸಾದ್ ಸಹೋದರ ಹಾಗೂ ಸಹಾಯಕ ನಿರ್ದೇಶಕ ಉದಯ್ ಕೆಲ ವಿಚಾರಗಳನ್ನು ಹೇಳಿದ್ದಾರೆ. ಈ ವೇಳೆ ಗುರುಪ್ರಸಾದ್ ಬಗ್ಗೆ ಕೆಲ ವಿಷಯಗಳು ಬೆಳಕಿಗೆ ಬಂದಿದ್ದು ಹೇಳಿಕೆ ದಾಖಲಿಸಿ ಪ್ರಕರಣದ ಅಂತ್ಯಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:ಡೈರೆಕ್ಟರ್ ಗುರುಪ್ರಸಾದ್ ಜೊತೆಗಿನ ಫೋಟೋ ಹಂಚಿಕೊಂಡ ಬಿಗ್ಬಾಸ್ನ ಮಾಜಿ ಸ್ಪರ್ಧಿ
ಉದಯ್ ಹೇಳಿದ್ದೇನು?
ಗುರುಪ್ರಸಾದ್ ಅವರು ಹೈಪರ್ ಅಸಿಡಿಟಿ ಹಾಗೂ ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಎರಡು ಸಮಸ್ಯೆಗಳ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕೊನೆ ಸಿನಿಮಾ ರಂಗನಾಯಕ ಸೋತಿದ್ದರಿಂದ ಅವರು ನೊಂದಿದ್ದರು ಅಂತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಹೋದರ ಹೇಳಿದ್ದೇನು?
ಗುರುಪ್ರಸಾದ್ ದಿನಕ್ಕೆ 2 ಪೆಗ್ ಅಷ್ಟೇ ಮದ್ಯಪಾನ ಮಾಡುತ್ತಿದ್ದರು. ಸೋರಿಯಾಸಿಸ್ನಿಂದ ಬಳಲುತ್ತಿದ್ದರ ಬಗ್ಗೆ ಇತ್ತೀಚೆಗೆ ಹೇಳಿದ್ದರು. ಆದರೆ ಗುರುಪ್ರಸಾದ್ ನಮ್ಮನೊಡನೆ ಅಷ್ಟಾಗಿ ಸಂಪರ್ಕ ಇರಲಿಲ್ಲ. ಹಾಗಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ನಮಗೆ ತಿಳಿದಿಲ್ಲ ಅಂತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ