/newsfirstlive-kannada/media/post_attachments/wp-content/uploads/2023/08/DKS-3-1.jpg)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಡಿ.ಕೆ.ಬ್ರದರ್ಸ್ ನಡೆಸುತ್ತಿರುವ ಆಪರೇಷನ್ ಹಸ್ತ ಮುಂದುವರಿದಿದ್ದು, ಇದೀಗ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ನ್ಯೂಸ್ಫಸ್ಟ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಿ.ಸೋಮಣ್ಣರನ್ನ ಕರೆ ತರಲು ಡಿ.ಕೆ ಬ್ರದರ್ಸ್ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ತುಮಕೂರಿನಿಂದ ಇಳಿಸಿ ಗೆಲ್ಲುವ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನಲಾಗಿದೆ.
ಹೇಗಿದೆ ಡಿ.ಕೆ ಬ್ರದರ್ಸ್ ಪ್ಲಾನ್..?
- ಸೋಮಣ್ಣ ಜೊತೆ ಡಿ.ಕೆ.ಸಹೋದರರ ಉತ್ತಮ ಬಾಂಧವ್ಯ
- ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಸಲುವಾಗಿ ಪ್ಲಾನ್
- ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲು ಯತ್ನ
- ಈಗಾಗಲೇ ಸೋಮಣ್ಣ ಜೊತೆ ಎರಡು ಸುತ್ತಿನ ಮಾತುಕತೆ
- ಮಾತುಕತೆ ನಡೆಸಿರುವ ಡಿಸಿಎಂ ಡಿಕೆಶಿ, ಸಂಸದ ಡಿ.ಕೆ ಸುರೇಶ್
- ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ವಿ.ಸೋಮಣ್ಣ
ತುಮಕೂರು ಕ್ಷೇತ್ರದಲ್ಲಿ ಸಮರ್ಥ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣ ಅವರನ್ನು ಸೆಳೆಯುವ ಪ್ರಯತ್ನ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರದ್ದಾಗಿದೆ. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಹೀಗಾಗಿ ಸೋಮಣ್ಣರನ್ನ ಕಣಕ್ಕಿಳಿಸಿ ತುಮಕೂರು ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಕಾಂಗ್ರೆಸ್ನದ್ದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ