/newsfirstlive-kannada/media/post_attachments/wp-content/uploads/2024/02/DK-BROTHERS.jpg)
ಬೆಂಗಳೂರು: ಸತೀಶ್ ಜಾರಕಿಹೊಳಿ ಬೆನ್ನಲ್ಲೇ ಡಿಕೆ ಸೋದರರು ದೆಹಲಿಗೆ ಹೋಗಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ದಸರಾ ಮುಗಿದ ಬಳಿಕ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಲು ಮುಂದಾಗಿದ್ದಾರಂತೆ.
ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದರು. ಜಾರಕಿಹೊಳಿ, ಖರ್ಗೆ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಬೆನ್ನಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ದೆಹಲಿ ನಾಯಕರ ಭೇಟಿಗೆ ನಿರ್ಧರಿಸಿರೋದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ದಲಿತ ಸಿಎಂ ದಾಳ.. ದಿಢೀರ್ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ; ಏನಿದರ ರಹಸ್ಯ?
ಡಿಕೆ ಸೋದರರ ತಂತ್ರ
ತಂತ್ರ 01: ದೆಹಲಿಗೆ ಹೋಗಿ ಕಾಂಗ್ರೆಸ್ನ ವರಿಷ್ಠ ನಾಯಕರನ್ನ ಭೇಟಿ ಮಾಡೋದು
ತಂತ್ರ 02: ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಒಟ್ಟಿಗೆ ಹೋಗಿ ಭೇಟಿ ಮಾಡಿ ಚರ್ಚೆ
ತಂತ್ರ 03: ನಮಗೂ ವರಿಷ್ಠರ ಬೆಂಬಲವಿದೆ, ಭೇಟಿಗೆ ಮುಕ್ತ ಅವಕಾಶವೆಂಬ ಸಂದೇಶ
ತಂತ್ರ 04: ನಾವು ಕೇಳಿದರೂ ಸಮಯ ಕೊಡ್ತಾರೆ ಅಂತ ಮತ್ತೊಂದು ಬಣಕ್ಕೆ ಕೌಂಟರ್
ತಂತ್ರ 05: ರಾಜ್ಯದ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ಮಾಹಿತಿ ಕೊಡುವುದು
ತಂತ್ರ 06: ರಾಜ್ಯದ ಇತರೆ ನಾಯಕರೂ ಹೋಗಿ ಭೇಟಿ ಆಗೋ ಮುನ್ನ ಡಿಕೆ ಬ್ರದರ್ಸ್ ಅಲರ್ಟ್
ಇದನ್ನೂ ಓದಿ:ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ