newsfirstkannada.com

‘ಪಾಪ ಮೆಂಟಲ್ ಆಗಿದ್ದಾನೆ’- ಕುಮಾರಸ್ವಾಮಿ ವಿರುದ್ಧ ಮತ್ತೆ ಸಿಡಿದ ಕನಕಪುರದ ಬಂಡೆ; DK ಹೇಳಿದ್ದೇನು?

Share :

Published August 10, 2024 at 6:10pm

    ‘ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬರಲಿ’

    ಕುಮಾರಸ್ವಾಮಿ ನನ್ ಮೇಲೆ ಕಣ್ಣಾಕಿದ್ರೂ ಸರ್ವನಾಶ ಅಲ್ವಾ?

    ಹೆಚ್‌.ಡಿ ಕುಮಾರಸ್ವಾಮಿ ಹೇಳಿಕೆಗೆ ಕೌಂಟರ್ ಕೊಟ್ಟ ಡಿಕೆಶಿ

ರಾಮನಗರ: ಬಿಜೆಪಿ, ಜೆಡಿಎಸ್‌ ನೇತೃತ್ವದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು. ಒಂದೊಂದು ಮಾತಿಗೆ ಕೌಂಟರ್ ಕೊಟ್ಟ ಹೆಚ್‌ಡಿಕೆ, ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಡಿ.ಕೆ ಶಿವಕುಮಾರ್ ಕೂಡ ತಿರುಗೇಟು ಕೊಟ್ಟಿದ್ದಾರೆ.

ಕನಕಪುರದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ಮೊದಲಿಗೆ ಕುಮಾರಸ್ವಾಮಿ ಮಾತಿಗೆ ನಸು ನಕ್ಕರು. ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬಂದು ನಿಲ್ಲಿಸಿಬಿಟ್ರೆ ಸಾಕು. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ‌ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಡಿ.ಕೆ ಶಿವಕುಮಾರ್ ಕೌಂಟರ್‌!
ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ನನ್ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಅಲ್ವಾ? ಎಂದು ಟಾಂಗ್ ಕೊಟ್ಟರು. ಸಿದ್ಧಾರ್ಥ್ ಅವರ ಸಾವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಅಯ್ಯೋ..‌ ಪಾಪ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ. ಕುಮಾರಸ್ವಾಮಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣ. ನನ್ನ ಎಸ್.ಎಂ ಕೃಷ್ಣ ಸಂಬಂಧ ಏನು ಅಂತ ಅವರಿಗೆ ಏನ್ ಗೊತ್ತಿದೆ. ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳಣೋ ಎಂದು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಹೌದು ನಾನು ನಾಗರಹಾವೇ.. ಡಿಕೆ ವಿರುದ್ಧ ಸಿಡಿದೆದ್ದ HDK; ಬಂಡೆ ಸವಾಲು ಸ್ವೀಕಾರ; ಹೇಳಿದ್ದೇನು?

ಮತ್ತೆ ಮತ್ತೆ ಜೈಲಿನ ವಿಚಾರ ಪ್ರಸ್ತಾಪ
ಕುಮಾರಸ್ವಾಮಿ ಅವರು ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ. ಹಿಂದೆನೂ ಹೇಳಿದ್ದಾರೆ. ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ. ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತೀವಿ. ನನ್ನ ತಮ್ಮ, ತಂಗಿ, ಹೆಂಡ್ತಿ ಸೇರಿ ಎಲ್ಲರ ಮೇಲೆ ಕೇಸ್ ಹಾಕಿಸಿದ್ದ ದಾಖಲೆಗಳು ಇದೆ. ಅವೆಲ್ಲವನ್ನು ಮರೆತು ಬಿಟ್ಟು, ನನ್ನ ಪಕ್ಷ ಹೇಳಿದೆ ಅಂತ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಈಗ ಎಲ್ಲದಕ್ಕೂ ಒಂದ್ ಲಿಮಿಟೇಷನ್ ಇದೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ‌ನಡೆಸಿದ್ದಾರೆ.

ಇದನ್ನೂ ಓದಿ: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?

ಅವರೊಬ್ಬರೇ ಗಂಡಸರು, ನಾನೇನು ಹೆದರಲ್ಲ!
ಇನ್ನು, ನಾವು ಗಂಡಸರಲ್ಲ.. ಕುಮಾರಸ್ವಾಮಿ ಒಬ್ಬರೇ ಗಂಡಸು. ಗಂಡಸ್ತನದ ಎಲ್ಲಾ ಶಕ್ತಿ ಕುಮಾರಸ್ವಾಮಿ ಅವರ ಬಳಿಯಿದೆ. ನಾನೇನು ಹೆದರಲ್ಲ, ಏನೇನು ಬಿಚ್ಚೋಕೆ ಸಾಧ್ಯನೊ ಬಿಚ್ಚಲಿ. ಗೊಡ್ಡು ಬೆದರಿಕೆಗೆ ನಾನ್ಯಾವತ್ತೂ ಯೂಟರ್ನ್​​ ಆದವನಲ್ಲ. ಈ ವಾರ್ನಿಂಗ್​ಗೆಲ್ಲ ಡಿ.ಕೆ ಶಿವಕುಮಾರ್​ ಹೆದರುವ ಮಗ ಅಲ್ಲ. ನಾನು ಅವರನ್ನ ಅಣ್ಣಾ ಅಂತ ಅನ್ಕೊಂಡು ಸುಮ್ಮನೆ ಇದ್ದೆ. ಇಷ್ಟಾದರೂ ಸುಮ್ಮನೆ ಇರುವಂತಹ ಬ್ಲಡ್​ ನನ್ನದು ಅಲ್ಲ. ಅದ್ಯಾರಿಗೆ ಗನ್​ ಪಾಯಿಂಟ್​ ಇಟ್ನೋ ಅವರತ್ರ FIR​ ಮಾಡಿಸಿ ಎಂದು ಹೆಚ್​.ಡಿ ಕುಮಾರಸ್ವಾಮಿ ವಾರ್ನಿಂಗ್​ಗೆ ಡಿಕೆ ಶಿವಕುಮಾರ್‌ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಾಪ ಮೆಂಟಲ್ ಆಗಿದ್ದಾನೆ’- ಕುಮಾರಸ್ವಾಮಿ ವಿರುದ್ಧ ಮತ್ತೆ ಸಿಡಿದ ಕನಕಪುರದ ಬಂಡೆ; DK ಹೇಳಿದ್ದೇನು?

https://newsfirstlive.com/wp-content/uploads/2024/08/Dk-Shivakumar-1-1.jpg

    ‘ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬರಲಿ’

    ಕುಮಾರಸ್ವಾಮಿ ನನ್ ಮೇಲೆ ಕಣ್ಣಾಕಿದ್ರೂ ಸರ್ವನಾಶ ಅಲ್ವಾ?

    ಹೆಚ್‌.ಡಿ ಕುಮಾರಸ್ವಾಮಿ ಹೇಳಿಕೆಗೆ ಕೌಂಟರ್ ಕೊಟ್ಟ ಡಿಕೆಶಿ

ರಾಮನಗರ: ಬಿಜೆಪಿ, ಜೆಡಿಎಸ್‌ ನೇತೃತ್ವದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು. ಒಂದೊಂದು ಮಾತಿಗೆ ಕೌಂಟರ್ ಕೊಟ್ಟ ಹೆಚ್‌ಡಿಕೆ, ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಡಿ.ಕೆ ಶಿವಕುಮಾರ್ ಕೂಡ ತಿರುಗೇಟು ಕೊಟ್ಟಿದ್ದಾರೆ.

ಕನಕಪುರದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ಮೊದಲಿಗೆ ಕುಮಾರಸ್ವಾಮಿ ಮಾತಿಗೆ ನಸು ನಕ್ಕರು. ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬಂದು ನಿಲ್ಲಿಸಿಬಿಟ್ರೆ ಸಾಕು. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ‌ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಡಿ.ಕೆ ಶಿವಕುಮಾರ್ ಕೌಂಟರ್‌!
ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ನನ್ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಅಲ್ವಾ? ಎಂದು ಟಾಂಗ್ ಕೊಟ್ಟರು. ಸಿದ್ಧಾರ್ಥ್ ಅವರ ಸಾವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಅಯ್ಯೋ..‌ ಪಾಪ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ. ಕುಮಾರಸ್ವಾಮಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣ. ನನ್ನ ಎಸ್.ಎಂ ಕೃಷ್ಣ ಸಂಬಂಧ ಏನು ಅಂತ ಅವರಿಗೆ ಏನ್ ಗೊತ್ತಿದೆ. ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳಣೋ ಎಂದು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಹೌದು ನಾನು ನಾಗರಹಾವೇ.. ಡಿಕೆ ವಿರುದ್ಧ ಸಿಡಿದೆದ್ದ HDK; ಬಂಡೆ ಸವಾಲು ಸ್ವೀಕಾರ; ಹೇಳಿದ್ದೇನು?

ಮತ್ತೆ ಮತ್ತೆ ಜೈಲಿನ ವಿಚಾರ ಪ್ರಸ್ತಾಪ
ಕುಮಾರಸ್ವಾಮಿ ಅವರು ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ. ಹಿಂದೆನೂ ಹೇಳಿದ್ದಾರೆ. ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ. ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತೀವಿ. ನನ್ನ ತಮ್ಮ, ತಂಗಿ, ಹೆಂಡ್ತಿ ಸೇರಿ ಎಲ್ಲರ ಮೇಲೆ ಕೇಸ್ ಹಾಕಿಸಿದ್ದ ದಾಖಲೆಗಳು ಇದೆ. ಅವೆಲ್ಲವನ್ನು ಮರೆತು ಬಿಟ್ಟು, ನನ್ನ ಪಕ್ಷ ಹೇಳಿದೆ ಅಂತ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಈಗ ಎಲ್ಲದಕ್ಕೂ ಒಂದ್ ಲಿಮಿಟೇಷನ್ ಇದೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ‌ನಡೆಸಿದ್ದಾರೆ.

ಇದನ್ನೂ ಓದಿ: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?

ಅವರೊಬ್ಬರೇ ಗಂಡಸರು, ನಾನೇನು ಹೆದರಲ್ಲ!
ಇನ್ನು, ನಾವು ಗಂಡಸರಲ್ಲ.. ಕುಮಾರಸ್ವಾಮಿ ಒಬ್ಬರೇ ಗಂಡಸು. ಗಂಡಸ್ತನದ ಎಲ್ಲಾ ಶಕ್ತಿ ಕುಮಾರಸ್ವಾಮಿ ಅವರ ಬಳಿಯಿದೆ. ನಾನೇನು ಹೆದರಲ್ಲ, ಏನೇನು ಬಿಚ್ಚೋಕೆ ಸಾಧ್ಯನೊ ಬಿಚ್ಚಲಿ. ಗೊಡ್ಡು ಬೆದರಿಕೆಗೆ ನಾನ್ಯಾವತ್ತೂ ಯೂಟರ್ನ್​​ ಆದವನಲ್ಲ. ಈ ವಾರ್ನಿಂಗ್​ಗೆಲ್ಲ ಡಿ.ಕೆ ಶಿವಕುಮಾರ್​ ಹೆದರುವ ಮಗ ಅಲ್ಲ. ನಾನು ಅವರನ್ನ ಅಣ್ಣಾ ಅಂತ ಅನ್ಕೊಂಡು ಸುಮ್ಮನೆ ಇದ್ದೆ. ಇಷ್ಟಾದರೂ ಸುಮ್ಮನೆ ಇರುವಂತಹ ಬ್ಲಡ್​ ನನ್ನದು ಅಲ್ಲ. ಅದ್ಯಾರಿಗೆ ಗನ್​ ಪಾಯಿಂಟ್​ ಇಟ್ನೋ ಅವರತ್ರ FIR​ ಮಾಡಿಸಿ ಎಂದು ಹೆಚ್​.ಡಿ ಕುಮಾರಸ್ವಾಮಿ ವಾರ್ನಿಂಗ್​ಗೆ ಡಿಕೆ ಶಿವಕುಮಾರ್‌ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More