ಡಿ.ಕೆ ಶಿವಕುಮಾರ್ ನಡೆ- ನುಡಿಯಿಂದ ರಾಜಕೀಯದಲ್ಲಿ ಸಂಚಲನ.. ಕಾಂಗ್ರೆಸ್​ ನಾಯಕರು ಹೇಳುವುದೇನು?

author-image
Bheemappa
Updated On
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಲನ.. ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
Advertisment
  • ನನಗೆ ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗಬೇಕಲ್ವಾ, ಹೀಗಂದಿದ್ಯಾಕೆ?
  • ಡಿ.ಕೆ ಶಿವಕುಮಾರ್ ಒಂದೊಂದು ನಡೆ- ನುಡಿ ರಾಜ್ಯದಲ್ಲಿ ಸಂಚಲ ಸೃಷ್ಟಿಸಿದೆ
  • ಶಿವರಾತ್ರಿ ಕಾರ್ಯಕ್ರಮದಲ್ಲಿ DCM ಡಿ.ಕೆ ಶಿವಕುಮಾರ್, ಅಮಿತ್ ಶಾ ಭಾಗಿ

ಕರ್ನಾಟಕ ಕಾಂಗ್ರೆಸ್​​​ನ ಶಿವನಾಟ, ಇಡೀ ಕಾಂಗ್ರೆಸ್​​ ಪಾಳಯವನ್ನೇ ನಿದ್ದೆಗೆಡಿಸಿ ಜಾಗರಣೆ ಮಾಡಿಸಿದೆ. ಈ ಜಾಗರಣೆ ಅಧಿಕಾರದ ಜಾಗಾರ ಕಣಿವೆಯಲ್ಲಿ ಪಂಚತಂತ್ರದ ಕದನಕ್ಕೆ ಪಂಚಾಕ್ಷರಿ ಬರೆದಿದ್ದಾರೆ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್​ ಅವರ ಒಂದೊಂದು ನಡೆ- ನುಡಿಯೂ ರಾಜ್ಯ ರಾಜಕೀಯದಲ್ಲಿ ಸಂಚಲ ಸೃಷ್ಟಿಸಿದೆ. ನನಗೆ ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗಬೇಕಲ್ವಾ ಎಂದು ಮಾರ್ಮಿಕವಾಗಿ ನುಡಿದಿರೋದು ನಾನಾ ಅರ್ಥಗಳಿಗೆ ದಾರಿಯಾಗಿದೆ. ಇದರ ನಡುವೆ ಅಧಿಕಾರದ ಕಿಚ್ಚಿನಲ್ಲಿ ಉರಿಯುತ್ತಿರುವ ಕಾಂಗ್ರೆಸ್​ ಮನೆಗೆ ಕೇಸರಿ ಪಡೆ ಮತ್ತಷ್ಟು ಪೆಟ್ರೋಲ್​ ಸುರಿದಿದೆ.

‘ಡಿಸಿಎಂ ಡಿ.ಕೆ.ಶಿವಕುಮಾರ್​ ಕರ್ನಾಟಕದ ಏಕನಾಥ್​ ಶಿಂಧೆ’

ಡಿಸಿಎಂ ಡಿ.ಕೆ.ಶಿವಕುಮಾರ್​ರ ನಡೆ-ನುಡಿ ಬಗ್ಗೆ ಕಾಂಗ್ರೆಸ್​ನಲ್ಲೇ ಅಪಸ್ವರ ಎದ್ದಿದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದ ಡಿ.ಕೆ ಶಿವಕುಮಾರ್ ಶಿವರಾತ್ರಿಯಂದು ಅಮಿತ್​ ಶಾ ಜೊತೆ ಶಿವ ಧ್ಯಾನ ಮಾಡಿದರು. ಇದು ಕೆಲ ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಗಾಗಿಸಿದೆ. ಆದ್ರೆ, ಬಿಜೆಪಿ ಇದರ ಲಾಭ ಪಡೆದುಕೊಳ್ಳಲು ದಾಳ ಉರುಳಿಸಿದೆ.

publive-image

ಡಿ.ಕೆ ಶಿವಕುಮಾರ್​, ಕರ್ನಾಟಕದ ಏಕನಾಥ್​ ಶಿಂಧೆ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮೊದಲು ಕಾಂಗ್ರೆಸ್​ ನಾಯಕರು ಏನ್ ಮಾಡ್ತಾರೆ ನೋಡೋಣ.. ನಾವ್ಯಾರು ಡಿ.ಕೆ ಶಿವಕುಮಾರನ್ನ ಬಿಜೆಪಿಗೆ ಕರೆದಿಲ್ಲ. ಎಲ್ಲವನ್ನು ಕೇಂದ್ರದ ಬಿಜೆಪಿ ನಾಯಕರೇ ನೋಡಿಕೊಳ್ತಾರೆಂದು ಬಾಂಬ್​ ಸಿಡಿಸಿದ್ದಾರೆ. ಇನ್ನು ತುಮಕೂರು ಗ್ರಾಮಾಂತರ ಶಾಸಕ ಸುರೇಶ್​ಗೌಡ, ಡಿ.ಕೆ ಶಿವಕುಮಾರ್ ಬಿಜೆಪಿ ಬರೋದಾದ್ರೆ ಸ್ವಾಗತ ಎಂದಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್​ ನಾಯಕರ ತಿರುಗೇಟು

ಮಹಾರಾಷ್ಟ್ರದಲ್ಲಿ ಆದಂತೆ.. ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ಏನಕಾಥ್​ ಶಿಂಧೆ ಆಗ್ತಾರೆ ಎಂಬ ಬಿಜೆಪಿ ನಾಯಕರ ಮಾತಿಗೆ ಕಾಂಗ್ರೆಸ್​ ಕೆರಳಿ ಕೆಂಡವಾಗಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಹೀಗಾಗಿ ಕನಸು ಕಾಣ್ತಿದ್ದಾರೆ ಎಂದು ಚೆಲುವರಾಯಸ್ವಾಮಿ ಮಾತಿನಲ್ಲಿ ಕಮಲವನ್ನು ಚುಚ್ಚಿದ್ದಾರೆ. ಇನ್ನು ಶಿವರಾತ್ರಿಯಲ್ಲಿ ಡಿ.ಕೆ ಶಿವಕುಮಾರ್ ಭಾಗಿ ಬಗ್ಗೆ ಸಚಿವ ಎಂ.ಬಿ ಪಾಟೀಲ್​, ಶಿವರಾಜ್​ ತಂಗಡಗಿ ಸಮರ್ಥಿಸಿಕೊಂಡಿದ್ದಾರೆ.

‘ಬಿಜೆಪಿಯಲ್ಲಿ ನಾಯಕತ್ವ ಇಲ್ಲ’

ಬಿಜೆಪಿ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವಂತ ದಡ್ಡರು ಏನು ಇಲ್ಲಿ ಇಲ್ಲ. ಬಿಜೆಪಿಯವರಿಗೆ ಒಬ್ಬರು ಲೀಡರ್ ಅನ್ನೋದು ಇಲ್ಲ. ಅದಕ್ಕಾಗಿ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿ ಲೀಡರ್​​ಶಿಪ್ ತೆಗೆದುಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ. ಕಾಂಗ್ರೆಸ್​ ಭದ್ರವಾಗಿದೆ. ಬಿಜೆಪಿ ಇನ್ನೂ ಡೌನ್ ಆಗಬೇಕು ವಿನಃ ಜಾಸ್ತಿ ಅಂತೂ ಆಗಲ್ಲ.

ಚಲುವರಾಯಸ್ವಾಮಿ, ಸಚಿವ

‘ಶಿವಕುಮಾರ್​ ಹಿಂದು ಅಲ್ವಾ?’

ಡಿಸಿಎಂ ಡಿಕೆ ಶಿವಕುಮಾರ್​ ಅವರು ಕಟ್ಟಾ ಕಾಂಗ್ರೆಸ್​ನವರು. ಇದೆಲ್ಲಾ ಕೂಡ ಮಾಧ್ಯಮದ ಊಹಾಪೋಹಾ. ಈಶ ಪೌಂಡೇಶನ್​ದು ಬಿಜೆಪಿ ಪಾರ್ಟಿ ಕಾರ್ಯಕ್ರಮ ಅಲ್ಲ. ಈಶ ಪೌಂಡೇಶನ್​ದು ಶಿವರಾತ್ರಿ ಕಾರ್ಯಕ್ರಮ. ಪಕ್ಷದ ಸಿದ್ಧಾಂತಗಳಿರುತ್ತವೆ. ಹಾಗದ್ರೆ ಶಿವಕುಮಾರ್ ಹಿಂದುಗಳು ಅಲ್ವಾ?.

ಎಂ.ಬಿ.ಪಾಟೀಲ್​, ಸಚಿವ

publive-image

‘ಬಿಜೆಪಿ ಕನಸು ನನಸಾಗಲ್ಲ’

ಕರ್ನಾಟಕದ ಏಕನಾಥ್ ಶಿಂಧೆ ಹುಟ್ಟಿಕೊಂಡಿದ್ದಾರೆ ಎಂದು ಬಿಜೆಪಿಯವರು ಅನ್ಕೊಂಡಿದ್ದಾರೆ. ಅದು ಅವರ ಕನಸು. ಆದರೆ ಅವರ ಕನಸು ನನಸು ಆಗೋಕೆ ಸಾಧ್ಯ ಇಲ್ಲ. ಕಾಂಗ್ರೆಸ್ ಸದೃಢವಾಗಿದೆ.

ಶಿವರಾಜ್​ ತಂಗಡಗಿ, ಸಚಿವ

ರಾಜಕೀಯವಾಗಿ ಒಂದು ರಾತ್ರಿಯಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದ ಡಿ.ಕೆ ಶಿವಕುಮಾರ್, ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ ಹೋಗಬೇಕು ಎಂದಿರೋದು ರಾಜ್ಯ ರಾಜಕೀಯದಲ್ಲಿ ಹಲವು ಚರ್ಚೆಗಳಿಗೆ ವೇದಿಕೆ ಆಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment