ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿರೋ ಭಾರತ ವಿಭಜನೆ ವಿವಾದ
ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಸಂಸದ ಡಿ.ಕೆ ಸುರೇಶ್
ನನ್ನ ಹೇಳಿಕೆಯನ್ನು ಬಿಜೆಪಿಯವರೇ ತಿರುಚಿದ್ದಾರೆ ಎಂದು ಆಕ್ರೋಶ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ್ಯಂತರ ಬಜೆಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದ ಡಿ.ಕೆ ಸುರೇಶ್, ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಈ ಬಗ್ಗೆ ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನಾನು ದೇಶ ವಿಭಜನೆ ಬಗ್ಗೆ ಮಾತಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಭಾರತೀಯತೆನ್ನು ನಾನು ಪ್ರಶ್ನೆ ಮಾಡಿದ್ದೇನೆ, ಯಾವುದೇ ದುರುದ್ದೇಶದಿಂದ ಅಲ್ಲವೇ ಅಲ್ಲ. ನನ್ನದು ದೇಶ ವಿರೋಧಿ ಹೇಳಿಕೆ ಆದರೆ, ಜೈಲಿಗೆ ಹಾಕಲಿ ಎಂದಿದ್ದಾರೆ ಡಿ.ಕೆ ಸುರೇಶ್.
ಇನ್ನು, ನಾನು ತಪ್ಪು ಮಾತಾಡಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಕನ್ನಡ ಭಾವುಟಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಕೊಟ್ಟಿಲ್ಲ. ನೀರಾವರಿ, ತೆರಿಗೆ, ಮೇಕೆದಾಟು, ಕೃಷ್ಣಾ, ಮಹಾದಾಯಿ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದರು.
ಕನ್ನಡದ ಪರ ಮಾತಾಡಿದ್ದೇನೆ ಎಂದ ಸುರೇಶ್
ಬಿಜೆಪಿಯರೇ ದೇಶ ವಿಭಜನೆ ಬಗ್ಗೆ ಮಾತಾಡಿದ್ದಾರೆ. ನಾನು ಕನ್ನಡದ ಪರ ಮಾತಾಡಿದ್ದೇನೆ. ಅನುದಾನ, ರಾಜ್ಯದ ಪಾಲು ಕೊಡಿ ಎಂದು ಪ್ರಶ್ನಿಸಿದ್ದೇನೆ. ಬಿಜೆಪಿಗೆ ಮಾಡೋಕೆ ಕೆಲಸ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿರೋ ಭಾರತ ವಿಭಜನೆ ವಿವಾದ
ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಸಂಸದ ಡಿ.ಕೆ ಸುರೇಶ್
ನನ್ನ ಹೇಳಿಕೆಯನ್ನು ಬಿಜೆಪಿಯವರೇ ತಿರುಚಿದ್ದಾರೆ ಎಂದು ಆಕ್ರೋಶ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ್ಯಂತರ ಬಜೆಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದ ಡಿ.ಕೆ ಸುರೇಶ್, ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಈ ಬಗ್ಗೆ ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನಾನು ದೇಶ ವಿಭಜನೆ ಬಗ್ಗೆ ಮಾತಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಭಾರತೀಯತೆನ್ನು ನಾನು ಪ್ರಶ್ನೆ ಮಾಡಿದ್ದೇನೆ, ಯಾವುದೇ ದುರುದ್ದೇಶದಿಂದ ಅಲ್ಲವೇ ಅಲ್ಲ. ನನ್ನದು ದೇಶ ವಿರೋಧಿ ಹೇಳಿಕೆ ಆದರೆ, ಜೈಲಿಗೆ ಹಾಕಲಿ ಎಂದಿದ್ದಾರೆ ಡಿ.ಕೆ ಸುರೇಶ್.
ಇನ್ನು, ನಾನು ತಪ್ಪು ಮಾತಾಡಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಕನ್ನಡ ಭಾವುಟಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಕೊಟ್ಟಿಲ್ಲ. ನೀರಾವರಿ, ತೆರಿಗೆ, ಮೇಕೆದಾಟು, ಕೃಷ್ಣಾ, ಮಹಾದಾಯಿ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದರು.
ಕನ್ನಡದ ಪರ ಮಾತಾಡಿದ್ದೇನೆ ಎಂದ ಸುರೇಶ್
ಬಿಜೆಪಿಯರೇ ದೇಶ ವಿಭಜನೆ ಬಗ್ಗೆ ಮಾತಾಡಿದ್ದಾರೆ. ನಾನು ಕನ್ನಡದ ಪರ ಮಾತಾಡಿದ್ದೇನೆ. ಅನುದಾನ, ರಾಜ್ಯದ ಪಾಲು ಕೊಡಿ ಎಂದು ಪ್ರಶ್ನಿಸಿದ್ದೇನೆ. ಬಿಜೆಪಿಗೆ ಮಾಡೋಕೆ ಕೆಲಸ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ