ಡಿ.ಕೆ ಸುರೇಶ್​ಗೆ ಮಹತ್ವದ ಹುದ್ದೆ? ಹೇಗಿದೆ DCM ಡಿ.ಕೆ ಶಿವಕುಮಾರ್ ಕಸರತ್ತು?

author-image
Bheemappa
Updated On
ಡಿ.ಕೆ ಸುರೇಶ್​ಗೆ ಮಹತ್ವದ ಹುದ್ದೆ? ಹೇಗಿದೆ DCM ಡಿ.ಕೆ ಶಿವಕುಮಾರ್ ಕಸರತ್ತು?
Advertisment
  • ಸಹೋದರನಿಗೆ ಮಹತ್ವದ ಹುದ್ದೆ ತಂದು ಕೊಡುತ್ತಾರಾ ಡಿ.ಕೆ ಶಿವಕುಮಾರ್?
  • ಸಿಎಂ ಮಗ ಡಾ.ಯತೀಂದ್ರಗೆ ವಿಧಾನ ಪರಿಷತ್​ ಸ್ಥಾನ ಈಗಲೇ ಸಿಕ್ಕಾಗಿದೆ
  • ಡಿ.ಕೆ ಸುರೇಶ್​ ಹೆಸರು ನಾಮನಿರ್ದೇಶನದ ಬಗ್ಗೆ ಸಿಎಂ ಅಭಿಪ್ರಾಯ ಏನಿದೆ?

ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿ.ಕೆ ಸುರೇಶ್ ಅವರಿಗೆ ವಿಧಾನ ಪರಿಷತ್​ ಸದಸ್ಯತ್ವದ ಸ್ಥಾನ ನೀಡಲು ತೆರೆಮರೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಯತ್ನಿಸುತ್ತಿದ್ದಾರೆ.

ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್ ಮಂಜುನಾಥ್ ವಿರುದ್ಧ ಸೋತ ಮೇಲೆ ಅವರಿಗೆ ರಾಜಕೀಯದಲ್ಲಿ ಯಾವುದೇ ಸ್ಥಾನ ಇಲ್ಲ. ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಹೋದರಿನಿಗೆ ಪರಿಷತ್ ಸದಸ್ಯತ್ವದ ಸ್ಥಾನ ಕೊಡಿಸಲು ಯೋಜಿಸುತ್ತಿದ್ದಾರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆಗೂ ಡಿ.ಕೆ ಶಿವಕುಮಾರ್ ಚರ್ಚಿಸಿದ್ದಾರೆ.

publive-image

ಇದನ್ನೂ ಓದಿ:16 ಪಂದ್ಯದಲ್ಲಿ ಯುವ ಬ್ಯಾಟರ್​ ಫ್ಲಾಪ್​.. ತಿಲಕ್ ವರ್ಮಾ ಬ್ಯಾಟಿಂಗ್ ಟ್ರ್ಯಾಕ್​ಗೆ ಮರಳಿದ್ದೇ ಅದ್ಭುತ

ಲೋಕಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆಯನ್ನು ಕಳೆದ ವಾರ ನಡೆಸಲಾಗಿತ್ತು. ಸಭೆಯಲ್ಲಿ ಪರಿಷತ್​​​ ಸದಸ್ಯತ್ವ ನಾಮಕರಣ ಕುರಿತು ಚರ್ಚಿಸುವಾಗ ಡಿ.ಕೆ ಸುರೇಶ್​​​ ಹೆಸರು ಮುನ್ನಲೆಗೆ ಬಂದಿದೆ. ಸೋತವರ ಕೆಲಸಗಳು ಸರ್ಕಾರದ ಮಟ್ಟದಲ್ಲಿ ಆಗಬೇಕು ಇದರ ಜೊತೆ ಸೋತ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಪರಿಷತ್ ಸ್ಥಾನ ನೀಡಬೇಕು. ಈ ಬಗ್ಗೆ ಡಿ.ಕೆ ಸುರೇಶ್ ಹೆಸರು ಮುಂಚೂಣಿಗೆ ಬಂದಿದ್ದು, ನಾಮನಿರ್ದೇಶನ ಮಾಡುವ ಬಗ್ಗೆ ಸಿಎಂ ಬಳಿ ಕಾಂಗ್ರೆಸ್​ ಹೈಕಮಾಂಡ್ ಅಭಿಪ್ರಾಯ ಕೇಳಿದೆ.

ಒಂದು ವೇಳೆ ಪರಿಷತ್ ಸ್ಥಾನ ಸಿಗದಿದ್ದರೇ ಕೆಪಿಸಿಸಿ ಅಧ್ಯಕ್ಷ ಅಥವಾ ಕೆಎಂಎಫ್​ ಅಧ್ಯಕ್ಷ ಸ್ಥಾನ ಕೊಡಿಸಲು ಡಿ.ಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಪ್ರಯತ್ನಕ್ಕೆ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರಿಂದ ಬೆಂಬಲ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರಗೆ ಈಗಾಗಲೇ ವಿಧಾನ ಪರಿಷತ್​​​ನಲ್ಲಿ ಸ್ಥಾನ ನೀಡಲಾಗಿದೆ. ಇದೇ ಮಾದರಿಯಲ್ಲಿ ಸಹೋದರನಿಗೆ ಪರಿಷತ್ ಸ್ಥಾನ ಕೊಡಿಸಲು ಡಿ.ಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment