newsfirstkannada.com

ಖುಷ್ಬೂ ‘ಹಳೇ ಪಾತ್ರೆ’ ಎಂಬ ಅವಹೇಳನಕಾರಿ ಹೇಳಿಕೆ; ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್​​

Share :

19-06-2023

    ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್​​

    ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಬಂಧಿಸಿದ ಪೊಲೀಸರು

    ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುಂದರಿ ಎಂಬ ಹೇಳಿಕೆ

ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​​ ಮತ್ತು ತಮಿಳುನಾಡು ರಾಜ್ಯಪಾಲ ಆರ್​ಎನ್​ ರವಿ ವಿರುದ್ಧ ಅವಹೇಳನಕಾರಿ ಹೇಳಿಕೆ ಸಂಬಂಧ ಶಿವಾಜಿ ಕೃಷ್ಣಮೂರ್ತಿ ಅವರನ್ನು ಅರೆಸ್ಟ್​ ಮಾಡಲಾಗಿದೆ. ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಖುಷ್ಬೂ ಬಗ್ಗೆ ಶಿವಾಜಿ ಹೇಳಿದ್ದೇನು? 

ಡಿಎಂಕೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಿವಾಜಿ ಕೃಷ್ಣಮೂರ್ತಿ, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ. ನನ್ನ ಹೆಂಡ್ತಿ ಸೌಂದರ್ಯವತಿ ಎಂದು ನನ್ನ ಸ್ನೇಹಿತರೆಲ್ಲಾ ಹೇಳುತ್ತಾರೆ. ಖುಷ್ಬೂ ರೂಪವಂತೆ ಅಂತಾ ಹಲವರು ಹೇಳ್ತಾರೆ. ಆದ್ರೆ ನನ್ನ ಹೆಂಡ್ತಿ ಬಿಜೆಪಿ ನಾಯಕಿ ಖುಷ್ಬೂ ಅವರ ರೀತಿ ಕೆಟ್ಟದಾಗಿ ನಡೆಯೋದಿಲ್ಲ. ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುಂದರಿ ಎಂದು ಹೇಳಿದ್ರು.

ಖುಷ್ಬೂ ರೂಪ, ಸೌಂದರ್ಯ, ನಡಿಗೆ ಬಗ್ಗೆ ಕೆಟ್ಟದಾಗಿ ಶಿವಾಜಿ ಕೃಷ್ಣಮೂರ್ತಿ ಮಾತನಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಖುಷ್ಬೂ ಸುಂದರ್ ಕಣ್ಣೀರು ಹಾಕುತ್ತಾ ಡಿಎಂಕೆ ನಾಯಕನ ವರ್ತನೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ಮಹಿಳೆಯ ಬಗ್ಗೆ ಅತ್ಯಂತ ಚೀಪ್ ಆದ ಕಮೆಂಟ್ ಮಾಡೋದು ಸರಿಯಲ್ಲ. ಇದು ಡಿಎಂಕೆ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ತಂದೆ, ಡಿಎಂಕೆ ಪಕ್ಷದ ಅಧಿನಾಯಕ ಕರುಣಾನಿಧಿ ಅವರು ಕಲಿಸಿದ ಪಾಠ ಇದೇನಾ? ಮಹಿಳೆಯರಿಗೆ ಕೊಡೋ ಗೌರವ ಇದೇನಾ ಎಂದು ಖುಷ್ಬೂ ಸುಂದರ್ ಪ್ರಶ್ನಿಸಿದ್ದಾರೆ.

ಖುಷ್ಬೂ ಸುಂದರ್ ಅವರ ಕಣ್ಣೀರು, ಬಿಜೆಪಿ ನಾಯಕರ ಸರಣಿ ಟ್ವೀಟ್‌ಗಳಿಂದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿದ್ದು, ಗೌರವಾನ್ವಿತ ರಾಜ್ಯಪಾಲರು ಈ ಪ್ರಕರಣದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಲಾಗಿತ್ತು. ಸದ್ಯ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಖುಷ್ಬೂ ಅವರ ಸೌಂದರ್ಯದ ಭಾಷಣ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಖುಷ್ಬೂ ‘ಹಳೇ ಪಾತ್ರೆ’ ಎಂಬ ಅವಹೇಳನಕಾರಿ ಹೇಳಿಕೆ; ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್​​

https://newsfirstlive.com/wp-content/uploads/2023/06/Khushbu-2.jpg

    ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್​​

    ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಬಂಧಿಸಿದ ಪೊಲೀಸರು

    ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುಂದರಿ ಎಂಬ ಹೇಳಿಕೆ

ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​​ ಮತ್ತು ತಮಿಳುನಾಡು ರಾಜ್ಯಪಾಲ ಆರ್​ಎನ್​ ರವಿ ವಿರುದ್ಧ ಅವಹೇಳನಕಾರಿ ಹೇಳಿಕೆ ಸಂಬಂಧ ಶಿವಾಜಿ ಕೃಷ್ಣಮೂರ್ತಿ ಅವರನ್ನು ಅರೆಸ್ಟ್​ ಮಾಡಲಾಗಿದೆ. ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಖುಷ್ಬೂ ಬಗ್ಗೆ ಶಿವಾಜಿ ಹೇಳಿದ್ದೇನು? 

ಡಿಎಂಕೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಿವಾಜಿ ಕೃಷ್ಣಮೂರ್ತಿ, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ. ನನ್ನ ಹೆಂಡ್ತಿ ಸೌಂದರ್ಯವತಿ ಎಂದು ನನ್ನ ಸ್ನೇಹಿತರೆಲ್ಲಾ ಹೇಳುತ್ತಾರೆ. ಖುಷ್ಬೂ ರೂಪವಂತೆ ಅಂತಾ ಹಲವರು ಹೇಳ್ತಾರೆ. ಆದ್ರೆ ನನ್ನ ಹೆಂಡ್ತಿ ಬಿಜೆಪಿ ನಾಯಕಿ ಖುಷ್ಬೂ ಅವರ ರೀತಿ ಕೆಟ್ಟದಾಗಿ ನಡೆಯೋದಿಲ್ಲ. ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುಂದರಿ ಎಂದು ಹೇಳಿದ್ರು.

ಖುಷ್ಬೂ ರೂಪ, ಸೌಂದರ್ಯ, ನಡಿಗೆ ಬಗ್ಗೆ ಕೆಟ್ಟದಾಗಿ ಶಿವಾಜಿ ಕೃಷ್ಣಮೂರ್ತಿ ಮಾತನಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಖುಷ್ಬೂ ಸುಂದರ್ ಕಣ್ಣೀರು ಹಾಕುತ್ತಾ ಡಿಎಂಕೆ ನಾಯಕನ ವರ್ತನೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ಮಹಿಳೆಯ ಬಗ್ಗೆ ಅತ್ಯಂತ ಚೀಪ್ ಆದ ಕಮೆಂಟ್ ಮಾಡೋದು ಸರಿಯಲ್ಲ. ಇದು ಡಿಎಂಕೆ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ತಂದೆ, ಡಿಎಂಕೆ ಪಕ್ಷದ ಅಧಿನಾಯಕ ಕರುಣಾನಿಧಿ ಅವರು ಕಲಿಸಿದ ಪಾಠ ಇದೇನಾ? ಮಹಿಳೆಯರಿಗೆ ಕೊಡೋ ಗೌರವ ಇದೇನಾ ಎಂದು ಖುಷ್ಬೂ ಸುಂದರ್ ಪ್ರಶ್ನಿಸಿದ್ದಾರೆ.

ಖುಷ್ಬೂ ಸುಂದರ್ ಅವರ ಕಣ್ಣೀರು, ಬಿಜೆಪಿ ನಾಯಕರ ಸರಣಿ ಟ್ವೀಟ್‌ಗಳಿಂದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿದ್ದು, ಗೌರವಾನ್ವಿತ ರಾಜ್ಯಪಾಲರು ಈ ಪ್ರಕರಣದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಲಾಗಿತ್ತು. ಸದ್ಯ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಖುಷ್ಬೂ ಅವರ ಸೌಂದರ್ಯದ ಭಾಷಣ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More