/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದ ಸೌಹಾರ್ದತೆ ಚೆನ್ನಾಗಿರುತ್ತದೆ
- ಕೋಪದ ಜೊತೆಯಲ್ಲಿ ವ್ಯವಹಾರ ಬೇಡ
- ಸಂಬಂಧ, ಸ್ನೇಹಗಳನ್ನು ಹಾಳು ಮಾಡಿಕೊಳ್ಳಬೇಡಿ
- ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಕೆಲಸದಲ್ಲಿ ಸಮರ್ಪಣಾ ಭಾವನೆ ಇರಲಿ
- ದಿನಚರಿಯನ್ನು ನಿಯಮಿತವಾಗಿರಿಸಿ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ವೃಷಭ
- ಹಣದ ವಿಚಾರವಾಗಿ ಸಂತೋಷ ಇರುತ್ತದೆ
- ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ
- ಮಕ್ಕಳ ಜೊತೆಯಲ್ಲಿ ಸಮಯ ಕಳೆಯಿರಿ
- ಕೆಲಸದ ಸ್ಥಳದಲ್ಲಿ ಜಾಗ್ರತೆವಹಿಸಿ
- ಮನಸ್ಸು ಅಸ್ಥಿರವಾಗಿರುತ್ತದೆ
- ತುಂಬಾ ದೊಡ್ಡ ವಿಚಾರಗಳಿಗೆ ಇಂದು ನಿರ್ಧಾರ ಬೇಡ
- ಗೌರಿ ಸಮೇತ ಈಶ್ವರನನ್ನು ಪೂಜಿಸಿ
ಮಿಥುನ
- ಹಳೆಯ ವಿವಾದಗಳಲ್ಲಿ ಜಯ
- ರಿಯಲ್ ಎಸ್ಟೇಟ್ನವರಿಗೆ ಲಾಭ
- ಆತ್ಮವಿಶ್ವಾಸವನ್ನು ದುಡ್ಡಿನಿಂದ ಅಳೆಯದಿರಿ
- ನಿಮ್ಮ ಕೆಲಸದಲ್ಲಿ ದೊಡ್ಡವರ ಒತ್ತಡ ಇರಬಹುದು
- ನೀವು ನೀವಾಗಿರಲು ಸಾಧ್ಯವಿಲ್ಲ
- ತಾಯಿ ಆರೋಗ್ಯದಲ್ಲಿ ಎಚ್ಚರಿಕೆವಹಿಸಿ
- ಭೂವರಾಹ ಸ್ವಾಮಿಯನ್ನು ಪೂಜಿಸಿ
ಕಟಕ
- ಅನಾರೋಗ್ಯ - ಖರ್ಚು ಹೆಚ್ಚಾಗಬಹುದು
- ವೃತ್ತಿಯಲ್ಲಿ ಹಿನ್ನಡೆ ಉಂಟಾಗಬಹುದು
- ನಕರಾತ್ಮಕ ವಾತಾವರಣ ಇರುತ್ತದೆ
- ಆಹಾರದ ಬಗ್ಗೆ ಗಮನಿಸಿ
- ಹೊಸ ಕೆಲಸಗಳ ಆರಂಭ ಬೇಡ
- ಪ್ರಯಾಣ ಅನಿವಾರ್ಯ ಆದರೆ ಒಳಿತಲ್ಲ
- ಇಂದು ಏನೋ ಒಂದು ರೀತಿಯ ಬೇಸರದ ದಿನ
- ವನದುರ್ಗ ಉಪಾಸನೆ ಮಾಡಿ
ಸಿಂಹ
- ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾವಕಾಶ
- ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಯುವ ಪ್ರೇಮಿಗಳಿಗೆ ಒಳಿತಿದೆ
- ವ್ಯಾಪಾರದಲ್ಲಿ ಆರ್ಥಿಕ ಲಾಭ
- ಕೋಪ ಹೆಚ್ಚಾಗಿ ಕೆಲವು ಎಡವಟ್ಟುಗಳಾಗಬಹುದು
- ತಪ್ಪು ದಾರಿ ಬಿಟ್ಟು ಯೋಚಿಸಿ ಶುಭವಿದೆ
- ಸೂರ್ಯನಾರಾಯಣ ಪ್ರಾರ್ಥನೆ ಮಾಡಿ
ಕನ್ಯಾ
- ಕುಟುಂಬದಲ್ಲಿ ಶಾಂತಿ ಇದೆ ಹಾಗೆ ಉಳಿಸಿಕೊಳ್ಳಿ
- ಅನಾರೋಗ್ಯ ಸಮಸ್ಯೆ ಕಾಡಬಹುದು
- ನಿಮ್ಮ ಗುರಿಯ ಬಗ್ಗೆ ಚಿಂತಿಸಿ
- ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಬಹುದು
- ಹಣ, ಆಭರಣ ಇದೆ ದುಸಾರೆ ಕಾಡಬಹುದು
- ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
- ಚಂಡಿಕಾ ಪಾರಾಯಣ ಮಾಡಿಸಿ
ತುಲಾ
- ನಿಮ್ಮ ಜೀವನ ಭಾವನಾತ್ಮಕವಾಗಿ ಕೆಲಸ ಮಾಡುತ್ತದೆ
- ಕರುಣೆ, ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಕಾಣಬಹುದು
- ಬಡವರಿಗೆ ಸಹಾಯ ಮಾಡಬಹುದು
- ಹಲವರಿಗೆ ಮಾರ್ಗದರ್ಶನ - ಸಹಕಾರ ಸಿಗಬಹುದು
- ಪ್ರಮುಖ ಕಾರ್ಯಗಳಲ್ಲಿ ಜಾಗ್ರತೆವಹಿಸಿ
- ಹಲವು ಸವಾಲು ಎದುರಾಗುತ್ತವೆ, ಅತಿಯಾದ ನಂಬಿಕೆ ಬೇಡ
- ಗೋಮಾತೆಯನ್ನು ಪೂಜಿಸಿ
ವೃಶ್ಚಿಕ
- ಹಳೆಯ ಕಾರ್ಯಗಳನ್ನು ಪೂರ್ಣಗೊಳಿಸಿ
- ಸಂಬಂಧಗಳ ನಡುವೆ ಅಹಂಭಾವ ಬೇಡ
- ಅನಾವಶ್ಯಕ ವಿಚಾರಗಳಲ್ಲಿ ಮನಸ್ಸು
- ಪ್ರೇಮಿಗಳಿಗೆ ತೊಂದರೆಯಾಗುವುದರಿಂದ ಬೇಸರವಾಗಬಹುದು
- ಅದೃಷ್ಟದ ಕೊರತೆಯಿಂದಾಗಿ ಕೈಗೆ ಬಂದದ್ದು ಸಿಗಲ್ಲ
- ಕಠಿಣ ಪರಿಶ್ರಮ, ಗಳಿಕೆ ಕಡಿಮೆ
- ಲಕ್ಷ್ಮಿನಾರಾಯಣರಿಗೆ ಕ್ಷೀರಾಭಿಷೇಕ ಮಾಡಿಸಿ
ಧನಸ್ಸು
- ಉದ್ಯೋಗ ಹುಡುಕುವವರಿಗೆ ಯಶಸ್ಸು
- ವ್ಯಾಪಾರದಲ್ಲಿ ಲಾಭವಿದೆ
- ಖರೀದಿಯ ವಿಚಾರದಲ್ಲಿ ಮುಂದಿರುತ್ತೀರಿ
- ದಾಂಪತ್ಯದಲ್ಲಿ ಸಂತೋಷ ಇರುತ್ತದೆ
- ಅನಗತ್ಯ ವಿಚಾರಗಳಿಗೆ ವಾದಬೇಡ
- ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ - ಧನಾತ್ಮಕವಾಗಿರಲು ಪ್ರಯತ್ನಿಸಿ
- ಹಾಲು, ಜೇನಿನಿಂದ ಗಣಪತಿಗೆ ಅಭಿಷೇಕ ಮಾಡಿಸಿ
ಮಕರ
- ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ
- ನಿಮ್ಮ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ
- ಮಕ್ಕಳ ಬಗ್ಗೆ ಚಿಂತೆ ಕಾಡಬಹುದು
- ಆಯುಷ್ಯ ಅಲ್ಪ ಎಂಬ ಭಯ ಕಾಡಬಹುದು
- ಪತಿ ಅಥವಾ ಪತ್ನಿ ವಿಚಾರದಲ್ಲಿ ಬೇಸರವಾಗಬಹುದು
- ಪ್ರಾಮಾಣಿಕವಾಗಿರಿ, ಸುಳ್ಳು ಮಾತನಾಡುವುದು ಬೇಡ
- ಅಮೃತ ಮೃತ್ಯುಂಜಯ ಜಪ ಅಥವಾ ಹೋಮ ಮಾಡಿಸಿ
ಕುಂಭ
- ನಿವೃತ್ತ ಅಧಿಕಾರಿಗಳಿಗೆ ಶುಭವಿದೆ
- ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
- ಮಾಂತ್ರಿಕ ದೋಷ ಇರುವ ಶಂಕೆ ಬರಬಹುದು
- ಹಳೆಯ ಸಂಕಲ್ಪವನ್ನು ಪೂರ್ತಿಗೊಳಿಸಿ
- ಪೂರ್ವಾಭಾದ್ರ ನಕ್ಷತ್ರ, ಕುಂಭ ರಾಶಿಯವರಿಗೆ ತೊಂದರೆ ಗಮನಿಸಿ
- ತಂದೆಯವರ ಆರೋಗ್ಯ ಜಾಗತೆ ಎಚ್ಚರಿಕೆವಹಿಸಿ
- ಗಾಯತ್ರಿ ಮಂತ್ರ ಜಪಿಸಿ ಅಥವಾ ಶ್ರವಣ ಮಾಡಿ
ಮೀನ
- ರಾಜಕೀಯ ವಿಚಾರಗಳಿಂದ ದೂರ ಉಳಿಯಿರಿ
- ಅಧೈರ್ಯ, ಕೋಪ ಆತ್ಮವಿಶ್ವಾಸ ಕಡಿಮೆ ಇರುತ್ತದೆ
- ಭಯದಿಂದ ಹೊರಬರಲು ಅನೇಕ ಹೋರಾಟ ಮಾಡುತ್ತೀರಿ
- ನಿಮ್ಮ ಜೀವನ ಬಗ್ಗೆ ತುಂಬಾ ಭಯ ಉಂಟಾಗಬಹುದು
- ಬೆಲೆ ಬಾಳುವ ವಸ್ತುಗಳ ಜೊತೆಯಲ್ಲಿ ವಿಹರಿಸಬೇಡಿ
- ಅನುಭವ ನಿಮಗೆ ದಾರಿದೀಪವಾಗುತ್ತದೆ
- ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ