newsfirstkannada.com

ಯಾರಿಗೂ ನಾನು ಕೇರ್ ಮಾಡಲ್ಲ, ಅಯೋಧ್ಯೆಗೆ ಹೋಗಿಯೇ ಹೋಗ್ತೇನೆ -AAP ಸಂಸದ ಹರ್ಭಜನ್ ಸಿಂಗ್

Share :

Published January 20, 2024 at 2:36pm

    ಅಯೋಧ್ಯೆಯಲ್ಲಿ ಜನವರಿ 22 ರಂದು ಶುಭ ಕಾರ್ಯ

    ವಿಪಕ್ಷಗಳ ನಿರ್ಧಾರಕ್ಕೆ ಡೋಂಟ್ ಕೇರ್ ಎಂದ ಕ್ರಿಕೆಟಿಗ

    ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಲ್ಲ

ಮಾಜಿ ಕ್ರಿಕೆಟಿಗ, ಆಮ್ ಆದ್ಮಿ ಸಂಸದ ಹರ್ಭಜನ್ ಸಿಂಗ್ ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗೋದಾಗಿ ಹೇಳಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟ ಈ ಕಾರ್ಯಕ್ರಮವನ್ನು ಬಹಿಸ್ಕರಿಸಿವೆ, ಹೀಗಿದ್ದೂ ಹರ್ಭಜನ್ ಸಿಂಗ್ ಅಯೋಧ್ಯೆಗೆ ಹೋಗೋದಾಗಿ ಹೇಳಿರುವ ಹಿನ್ನೆಲೆಯಲ್ಲಿ ಚರ್ಚೆ ಶುರುವಾಗಿದೆ.

ಅಯೋಧ್ಯೆಗೆ ಯಾರು ಹೋಗಲು ಬಯಸುತ್ತಾರೆ, ಇಲ್ಲ ಅನ್ನೋದು ಮ್ಯಾಟರ್​ ಅಲ್ಲ. ಕಾಂಗ್ರೆಸ್​ ಹೋಗಬೇಕೋ? ಅಥವಾ ಇಲ್ಲ ಬೇರೆ ಪಕ್ಷದವರು ಹೋಗಬೇಕೋ ನಂಗೆ ಗೊತ್ತಿಲ್ಲ. ನಾನಂತೂ ಖಂಡಿತ ಹೋಗುತ್ತೇನೆ. ನಾನು ವೈಯಕ್ತಿಕವಾಗಿ ದೇವರನ್ನು ನಂಬುತ್ತೇನೆ, ಇದು ನನ್ನ ನಿರ್ಧಾರ. ನಾನು ರಾಮಮಂದಿರಕ್ಕೆ ಹೋಗೋದ್ರಿಂದ ಯಾರಿಗಾದರೂ ಸಮಸ್ಯೆಯಾದರೆ ಅವರು ನನ್ನ ವಿಚಾರದಲ್ಲಿ ಏನೂ ಬೇಕಾದರೂ ಮಾಡಬಹುದು ಎಂದಿದ್ದಾರೆ.

ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿ ಮಾತನಾಡಿದ್ದ ಅವರು.. ವೀಕ್ಷಕ ವಿವರಣೆಗಾರ ಹರ್ಭಜನ್ ಸಿಂಗ್.. ಕೆಲವೇ ದಿನಗಳಲ್ಲಿ ನಾನೂ ಕೂಡ ನಿಮ್ಮಂತೆ ರಾಮಲಲ್ಲಾನ ಭೇಟಿ ಆಗುತ್ತೇನೆ. ಇದು ನಮ್ಮೆಲ್ಲ ಭಾರತೀಯರಿಗೆ ದೊಡ್ಡ ದಿನ. ರಾಮನ ಭಕ್ತರಿಗೆ ದೊಡ್ಡ ನಮಸ್ಕಾರಗಳು. ಜನವರಿ 22 ರಂದು ರಾಮಲಲ್ಲಾ ಜೀವನವು ಪವಿತ್ರ ಆಗಲಿದೆ. ನಿಮ್ಮಂತೆಯೇ ನಾನು ಕೂಡ ಆ ದಿನಕ್ಕಾಗಿ ಕಾಯುತ್ತಿದ್ದೇನೆ. ಇದೊಂದು ಐತಿಹಾಸಿಕ ದಿನ. ಇಡೀ ಜಗತ್ತಿನ ಕನಸು ನನಸಾಗಲಿದೆ. ಇಡೀ ಭಾರತೀಯರಲ್ಲಿ ಸಂತಸದ ಅಲೆ ಇದೆ. ಮೊದಲನೇಯದಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ. ನಂತರ ನಿಮ್ಮೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು. ರಾಮ ಮಂದಿರ ಐತಿಹಾಸಿಕ ಸ್ಥಳವಾಗಲಿದೆ. ರಾಮ ಜನ್ಮಭೂಮಿಯಲ್ಲಿ ರಾಮ್ ಜಿಯನ್ನು ನೋಡಿದ ನಂತರ ಅನೇಕ ಜನ ಬಂದು ಆನಂದಿಸುತ್ತಾರೆ. ಮತ್ತೊಮ್ಮೆ ನಾನು ನಿಮಗೆ ಶುಭ ಹಾರೈಸುತ್ತೇನೆ. ಬಹಳಷ್ಟು ಪ್ರೀತಿ ಮತ್ತು ಭಗವಾನ್ ರಾಮನು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ಜೈ ಶ್ರೀ ರಾಮ್ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರಿಗೂ ನಾನು ಕೇರ್ ಮಾಡಲ್ಲ, ಅಯೋಧ್ಯೆಗೆ ಹೋಗಿಯೇ ಹೋಗ್ತೇನೆ -AAP ಸಂಸದ ಹರ್ಭಜನ್ ಸಿಂಗ್

https://newsfirstlive.com/wp-content/uploads/2023/11/Harbhajan-Singh.jpg

    ಅಯೋಧ್ಯೆಯಲ್ಲಿ ಜನವರಿ 22 ರಂದು ಶುಭ ಕಾರ್ಯ

    ವಿಪಕ್ಷಗಳ ನಿರ್ಧಾರಕ್ಕೆ ಡೋಂಟ್ ಕೇರ್ ಎಂದ ಕ್ರಿಕೆಟಿಗ

    ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಲ್ಲ

ಮಾಜಿ ಕ್ರಿಕೆಟಿಗ, ಆಮ್ ಆದ್ಮಿ ಸಂಸದ ಹರ್ಭಜನ್ ಸಿಂಗ್ ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗೋದಾಗಿ ಹೇಳಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟ ಈ ಕಾರ್ಯಕ್ರಮವನ್ನು ಬಹಿಸ್ಕರಿಸಿವೆ, ಹೀಗಿದ್ದೂ ಹರ್ಭಜನ್ ಸಿಂಗ್ ಅಯೋಧ್ಯೆಗೆ ಹೋಗೋದಾಗಿ ಹೇಳಿರುವ ಹಿನ್ನೆಲೆಯಲ್ಲಿ ಚರ್ಚೆ ಶುರುವಾಗಿದೆ.

ಅಯೋಧ್ಯೆಗೆ ಯಾರು ಹೋಗಲು ಬಯಸುತ್ತಾರೆ, ಇಲ್ಲ ಅನ್ನೋದು ಮ್ಯಾಟರ್​ ಅಲ್ಲ. ಕಾಂಗ್ರೆಸ್​ ಹೋಗಬೇಕೋ? ಅಥವಾ ಇಲ್ಲ ಬೇರೆ ಪಕ್ಷದವರು ಹೋಗಬೇಕೋ ನಂಗೆ ಗೊತ್ತಿಲ್ಲ. ನಾನಂತೂ ಖಂಡಿತ ಹೋಗುತ್ತೇನೆ. ನಾನು ವೈಯಕ್ತಿಕವಾಗಿ ದೇವರನ್ನು ನಂಬುತ್ತೇನೆ, ಇದು ನನ್ನ ನಿರ್ಧಾರ. ನಾನು ರಾಮಮಂದಿರಕ್ಕೆ ಹೋಗೋದ್ರಿಂದ ಯಾರಿಗಾದರೂ ಸಮಸ್ಯೆಯಾದರೆ ಅವರು ನನ್ನ ವಿಚಾರದಲ್ಲಿ ಏನೂ ಬೇಕಾದರೂ ಮಾಡಬಹುದು ಎಂದಿದ್ದಾರೆ.

ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿ ಮಾತನಾಡಿದ್ದ ಅವರು.. ವೀಕ್ಷಕ ವಿವರಣೆಗಾರ ಹರ್ಭಜನ್ ಸಿಂಗ್.. ಕೆಲವೇ ದಿನಗಳಲ್ಲಿ ನಾನೂ ಕೂಡ ನಿಮ್ಮಂತೆ ರಾಮಲಲ್ಲಾನ ಭೇಟಿ ಆಗುತ್ತೇನೆ. ಇದು ನಮ್ಮೆಲ್ಲ ಭಾರತೀಯರಿಗೆ ದೊಡ್ಡ ದಿನ. ರಾಮನ ಭಕ್ತರಿಗೆ ದೊಡ್ಡ ನಮಸ್ಕಾರಗಳು. ಜನವರಿ 22 ರಂದು ರಾಮಲಲ್ಲಾ ಜೀವನವು ಪವಿತ್ರ ಆಗಲಿದೆ. ನಿಮ್ಮಂತೆಯೇ ನಾನು ಕೂಡ ಆ ದಿನಕ್ಕಾಗಿ ಕಾಯುತ್ತಿದ್ದೇನೆ. ಇದೊಂದು ಐತಿಹಾಸಿಕ ದಿನ. ಇಡೀ ಜಗತ್ತಿನ ಕನಸು ನನಸಾಗಲಿದೆ. ಇಡೀ ಭಾರತೀಯರಲ್ಲಿ ಸಂತಸದ ಅಲೆ ಇದೆ. ಮೊದಲನೇಯದಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ. ನಂತರ ನಿಮ್ಮೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು. ರಾಮ ಮಂದಿರ ಐತಿಹಾಸಿಕ ಸ್ಥಳವಾಗಲಿದೆ. ರಾಮ ಜನ್ಮಭೂಮಿಯಲ್ಲಿ ರಾಮ್ ಜಿಯನ್ನು ನೋಡಿದ ನಂತರ ಅನೇಕ ಜನ ಬಂದು ಆನಂದಿಸುತ್ತಾರೆ. ಮತ್ತೊಮ್ಮೆ ನಾನು ನಿಮಗೆ ಶುಭ ಹಾರೈಸುತ್ತೇನೆ. ಬಹಳಷ್ಟು ಪ್ರೀತಿ ಮತ್ತು ಭಗವಾನ್ ರಾಮನು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ಜೈ ಶ್ರೀ ರಾಮ್ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More