newsfirstkannada.com

VIDEO: ಡಿ.ಕೆ ಸುರೇಶ್ ವಿರುದ್ಧ ಗೆಲುವಿನ ಗುಟ್ಟು ಬಿಚ್ಚಿಟ್ಟ ಡಾ.C.N ಮಂಜುನಾಥ್; ಹೇಳಿದ್ದೇನು?

Share :

Published June 4, 2024 at 1:07pm

    ಡಿ.ಕೆ ಸುರೇಶ್ ವಿರುದ್ಧ ಡಾ.ಸಿ.ಎನ್‌ ಮಂಜುನಾಥ್ ಭರ್ಜರಿ ಗೆಲುವು

    ಡಾ. ಸಿ.ಎನ್ ಮಂಜುನಾಥ್ ನಿವಾಸದಲ್ಲಿ ಮನೆ ಮಾಡಿದ ಗೆಲುವಿನ ಸಂಭ್ರಮ

    ಡಾ. ಸಿ. ಎನ್​ ಮಂಜುನಾಥ್ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರ ವಿರುದ್ಧ ಡಾ.ಸಿ.ಎನ್‌ ಮಂಜುನಾಥ್ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಆರಂಭದಿಂದಲೂ ಭರ್ಜರಿ ಲೀಡ್.. ಡಾ.C.N ಮಂಜುನಾಥ್ ಗೆಲುವಿನ ವೇಗಕ್ಕೆ ಕಂಗಾಲಾದ ಡಿ.ಕೆ ಸುರೇಶ್

ಸದ್ಯ ಡಾ. ಸಿ.ಎನ್. ಮಂಜುನಾಥ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಡಾ. ಸಿ.ಎನ್. ಮಂಜುನಾಥ್ ಅವರಿಗೆ ಶುಭ ಕೋರಲು ಕಾರ್ಯಕರ್ತರು ಹಾಗೂ ಸಾಕಷ್ಟು ಅಭಿಮಾನಿಗಳು ಕಿಕ್ಕಿರಿದು ನಿವಾಸದ ಬಳಿ ಜಮಾಯಿಸಿದ್ದಾರೆ. ಮತ್ತೊಂದು ಕಡೆ ಡಾ. ಸಿ.ಎನ್. ಮಂಜುನಾಥ್ ಅವರು ಗೆಲುವು ಕಂಡ ಹಿನ್ನೆಲೆಯಲ್ಲಿ ಮೈತ್ರಿ ಕಾರ್ಯಕ್ರರ್ತರು ಚನ್ನಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಡಾ.ಸಿ.ಎನ್ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ನ್ಯೂಸ್​ ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ಅವರು, ಈಗಾಗಲೇ ಸುಮಾರು 13 ರಿಂದ 14 ಸುತ್ತು ಎಣಿಕೆ ಆಗಿದೆ. ಇನ್ನು 8 ರಿಂದ 10 ಸುತ್ತು ಬಾಕಿ ಇದೆ. 1 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಮುಂದೆ ಇದ್ದೇವೆ. ಹೀಗಾಗಿ ಗೆಲುವಿನ ವಿಶ್ವಾಸ ಇದೆ. ನಾವು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಎರಡು ರೀತಿಯ ಸ್ಪಂದನೆ ಸಿಗುತ್ತಾ ಇತ್ತು. ಕೆಲವರು ನಾವು ನಿಮಗೆ ವೋಟ್​ ಹಾಕುತ್ತೆ ಅಂತ ಹೇಳಿದ್ರೆ, ಇನ್ನೂ ಕೆಲವರು ಮುಗುಳ್ನಗುತ್ತಿದ್ದರು. ಎರಡು ಹಂತಗಳನ್ನು ಇಟ್ಟುಕೊಂಡಿದ್ದೇವು, ಮೊದಲು 50 ಸಾವಿರದಲ್ಲಿ ಗೆಲ್ಲಬಹುದು, ಇಲ್ಲ 2 ಲಕ್ಷದಲ್ಲಿ ಗೆಲ್ಲಬಹುದು ಅಂತ ಅಂದುಕೊಂಡಿದ್ದೇವು. ಇವತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು ಕೇವಲ ಮತವನ್ನು ಅವರು ಕೊಟ್ಟಿಲ್ಲ. ಹೃದಯ ಮತ್ತು ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ. ಅವರಿಗೆಲ್ಲ ಅನಂತ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಡಿ.ಕೆ ಸುರೇಶ್ ವಿರುದ್ಧ ಗೆಲುವಿನ ಗುಟ್ಟು ಬಿಚ್ಚಿಟ್ಟ ಡಾ.C.N ಮಂಜುನಾಥ್; ಹೇಳಿದ್ದೇನು?

https://newsfirstlive.com/wp-content/uploads/2024/06/cn-manjunath1.jpg

    ಡಿ.ಕೆ ಸುರೇಶ್ ವಿರುದ್ಧ ಡಾ.ಸಿ.ಎನ್‌ ಮಂಜುನಾಥ್ ಭರ್ಜರಿ ಗೆಲುವು

    ಡಾ. ಸಿ.ಎನ್ ಮಂಜುನಾಥ್ ನಿವಾಸದಲ್ಲಿ ಮನೆ ಮಾಡಿದ ಗೆಲುವಿನ ಸಂಭ್ರಮ

    ಡಾ. ಸಿ. ಎನ್​ ಮಂಜುನಾಥ್ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರ ವಿರುದ್ಧ ಡಾ.ಸಿ.ಎನ್‌ ಮಂಜುನಾಥ್ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಆರಂಭದಿಂದಲೂ ಭರ್ಜರಿ ಲೀಡ್.. ಡಾ.C.N ಮಂಜುನಾಥ್ ಗೆಲುವಿನ ವೇಗಕ್ಕೆ ಕಂಗಾಲಾದ ಡಿ.ಕೆ ಸುರೇಶ್

ಸದ್ಯ ಡಾ. ಸಿ.ಎನ್. ಮಂಜುನಾಥ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಡಾ. ಸಿ.ಎನ್. ಮಂಜುನಾಥ್ ಅವರಿಗೆ ಶುಭ ಕೋರಲು ಕಾರ್ಯಕರ್ತರು ಹಾಗೂ ಸಾಕಷ್ಟು ಅಭಿಮಾನಿಗಳು ಕಿಕ್ಕಿರಿದು ನಿವಾಸದ ಬಳಿ ಜಮಾಯಿಸಿದ್ದಾರೆ. ಮತ್ತೊಂದು ಕಡೆ ಡಾ. ಸಿ.ಎನ್. ಮಂಜುನಾಥ್ ಅವರು ಗೆಲುವು ಕಂಡ ಹಿನ್ನೆಲೆಯಲ್ಲಿ ಮೈತ್ರಿ ಕಾರ್ಯಕ್ರರ್ತರು ಚನ್ನಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಡಾ.ಸಿ.ಎನ್ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ನ್ಯೂಸ್​ ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ಅವರು, ಈಗಾಗಲೇ ಸುಮಾರು 13 ರಿಂದ 14 ಸುತ್ತು ಎಣಿಕೆ ಆಗಿದೆ. ಇನ್ನು 8 ರಿಂದ 10 ಸುತ್ತು ಬಾಕಿ ಇದೆ. 1 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಮುಂದೆ ಇದ್ದೇವೆ. ಹೀಗಾಗಿ ಗೆಲುವಿನ ವಿಶ್ವಾಸ ಇದೆ. ನಾವು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಎರಡು ರೀತಿಯ ಸ್ಪಂದನೆ ಸಿಗುತ್ತಾ ಇತ್ತು. ಕೆಲವರು ನಾವು ನಿಮಗೆ ವೋಟ್​ ಹಾಕುತ್ತೆ ಅಂತ ಹೇಳಿದ್ರೆ, ಇನ್ನೂ ಕೆಲವರು ಮುಗುಳ್ನಗುತ್ತಿದ್ದರು. ಎರಡು ಹಂತಗಳನ್ನು ಇಟ್ಟುಕೊಂಡಿದ್ದೇವು, ಮೊದಲು 50 ಸಾವಿರದಲ್ಲಿ ಗೆಲ್ಲಬಹುದು, ಇಲ್ಲ 2 ಲಕ್ಷದಲ್ಲಿ ಗೆಲ್ಲಬಹುದು ಅಂತ ಅಂದುಕೊಂಡಿದ್ದೇವು. ಇವತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು ಕೇವಲ ಮತವನ್ನು ಅವರು ಕೊಟ್ಟಿಲ್ಲ. ಹೃದಯ ಮತ್ತು ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ. ಅವರಿಗೆಲ್ಲ ಅನಂತ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More